ರೈಲ್ವೆ ನಿಲ್ದಾಣ 
ರೇಲ್ವೆ ಬಜೆಟ್

ಪ್ರಯಾಣಿಕರಿಗೆ ಸಿಗಲಿದೆ ಅತ್ಯಾಧುನಿಕ ಸೌಲಭ್ಯಗಳು!

ಕೇಂದ್ರ ರೇಲ್ವೆ ಸಚಿವ ಸುರೇಶ್ ಪ್ರಭು ಅವರು ಲೋಕಸಭೆಯಲ್ಲಿ ಎನ್‌ಡಿಎ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ರೇಲ್ವೆ ಬಜೆಟ್ ಮಂಡಿಸುತ್ತಿದ್ದು, ಬಜೆಟ್ ನಲ್ಲಿನ ಸೌಲಭ್ಯಗಳು ಈಗಿವೆ.

* ಆಟೋಮ್ಯಾಟಿಕ್ ಟಿಕೆಟ್ ವೆಂಡಿಂಗ್ ಮೆಷಿನ್ ವ್ಯವಸ್ಥೆ.

* ರೈಲು ನಿಲ್ದಾಣ ಆಧುನೀಕರಣಕ್ಕೆ ಹೊಸ ಯೋಜನೆ ಆರಂಭ. ಎಲ್ಲಾ ರೈಲ್ವೆ ನಿಲ್ದಾಣಗಳ ಖಾಸಗೀಕರಣಕ್ಕೆ ಮುಕ್ತ ಅವಕಾಶ.

* ಸ್ವಯಂ ಚಾಲಿತ ಟಿಕೆಟ್ ನೀಡುವ ಯಂತ್ರದ ಯೋಜನೆ ಜಾರಿ. ಕೇವಲ ಐದೇ ನಿಮಿಷದಲ್ಲಿ ಟಿಕೆಟ್ ವಿತರಿಸಲು ಯೋಜನೆ.

* ಇನ್ನು ಮುಂದೆ 120 ದಿನಗಳ ಮೊದಲೇ ರೈಲ್ವೆ ಟಿಕೆಟ್ ಬುಕ್ ಮಾಡಬಹುದು. ಎಸ್ ಎಂಎಸ್ ಟಿಕೆಟ್ ಖಾತ್ರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುವುದು.

* ಈಶಾನ್ಯ ರಾಜ್ಯಗಳಲ್ಲಿ ರೈಲು ಸೌಕರ್ಯ ಅಭಿವೃದ್ಧಿಗೆ ಆದ್ಯತೆ. ಎಲ್ಲಾ ಹೊಸ ಬೋಗಿಗಳಲ್ಲಿ ಅಂಧರಿಗೆ ಸಹಾಯವಾಗಲು ಬ್ರೈಲ್ ಲಿಪಿ ವ್ಯವಸ್ಥೆ ಮಾಡಲಾಗುವುದು.

* ಬಿ ಕೆಟಗರಿ ರೈಲ್ವೆ ನಿಲ್ದಾಣಗಳಲ್ಲಿ ವೈ ಫೈ ಸೌಕರ್ಯ ಒದಗಣೆ. ಮಹಿಳಾ ಕೋಚ್ ಗಳಲ್ಲಿ ಸಿಸಿಟಿವಿ ಅಳವಡಿಕೆ.

* ಅಶಕ್ತರಿಗೆ, ವೃದ್ಧರಿಗಾಗಿ ಆಲ್ ಲೈನ್ ನಲ್ಲೇ ವೀಲ್ ಚೇರ್ ಬುಕ್ಕಿಂಗ್ ಮಾಡಬಹುದು. ಅಂಧರಿಗೆ ಸಹಾಯಕವಾಗಲು ರೈಲ್ವೆ ಇಲಾಖೆಯಿಂದ ಬ್ರೈಲ್ ಲಿಪಿ ಯೋಜನೆ ಜಾರಿ.

* 10 ಆಯ್ದ ರೈಲು ನಿಲ್ದಾಣಗಳಲ್ಲಿ ಸೆಟಲೈಟ್ ಸ್ಷೇಶನ್ ನಿರ್ಮಾಣಕ್ಕೆ ಆದ್ಯತೆ

* 400 ರೈಲ್ವೆ ನಿಲ್ದಾಣಗಳಲ್ಲಿ ವೈ ಫೈ ಸೌಲಭ್ಯ ಮೊದಲ ಹಂತದಲ್ಲಿ ಕಲ್ಪಸಲಾಗುವುದು. ಈಶಾನ್ಯ ರಾಜ್ಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ರೈಲು ವ್ಯವಸ್ಥೆ.

* ವಿವಿಧ ಭಾಷೆಗಳಲ್ಲಿ ಇ ಟಿಕೆಟ್ ಸೌಲಭ್ಯ ಕಲ್ಪಿಸಲಾಗುವುದು. ಕಾಗದ ರಹಿತ ಟಿಕೆಟ್ ವ್ಯವಸ್ಥೆ ಮಾಡಲಾಗುವುದು. ಐಆರ್ ಸಿಟಿಸಿ ವೆಬ್ ಸೈಟ್ ಮೂಲಕ ಫುಡ್ ಆರ್ಡರ್ ವ್ಯವಸ್ಥೆ.

* ರೈಲ್ವೆ ಇಲಾಖೆಯಿಂದ ಸ್ವಚ್ಚ ಶೌಚಾಲಯ ವ್ಯವಸ್ಥೆ. ಬಯೋ ಟಾಯ್ಲೆಟ್ ನಿರ್ಮಾಣಕ್ಕೆ ಯೋಜನೆ. ವಿಮಾನ ಮಾದರಿಯಲ್ಲಿ ವ್ಯಾಕ್ಯೂಂ ಟಾಯ್ಲೆಟ್ ಯೋಜನೆ ಗುರಿ.

* ರೈತರಿಗಾಗಿ ನಿಲ್ದಾಣಗಳಲ್ಲಿ ಕಾರ್ಗೋ ಸೆಂಟರ್ ನಿರ್ಮಾಣ. ಹೈಸ್ಪೀಡ್ ರೈಲುಗಳ ವೇಗ ಗಂಟೆಗೆ 160 ಕಿ.ಮೀ.ನಿಂದ 200 ಕಿ.ಮೀಗೆ ಹೆಚ್ಚಳ.

* ರೈಲ್ ಕಂ ರೋಡ್ ಟಿಕೆಟ್ ಸೌಕರ್ಯ ಹಲವು ಸ್ಷೇಶನ್ ಗಳಿಗೆ ವಿಸ್ತರಣೆ. ಕೆಲವೇ ತಿಂಗಳಲ್ಲಿ ಹೊಸ ಸೌರವಿದ್ಯುತ್ ಘಟಕ ಸ್ಥಾಪನೆ.

* ಜಾಹೀರಾತುಗಳಿಂದ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ. ರೈಲ್ವೆ ಸಿಬ್ಬಂದಿಗಳಿಗಾಗಿ ಪೂರ್ಣ ಪ್ರಮಾಣದ ವಿವಿ ಸ್ಥಾಪನೆ. ರೈಲ್ವೆ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೊಸ ಯೋಜನೆ.

* ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಕರ ಮನರಂಜನಾ ವ್ಯವಸ್ಥೆ. ರೈಲ್ವೆ ಸಮಗ್ರ ಅಭಿವೃದ್ಧಿಗೆ ಸ್ವಾಮಿ ವಿವೇಕಾನಂದರ ಮೌಲ್ಯಗಳ ಅನುಷ್ಠಾನ.

* ಹಣಕಾಸು ಕೊರತೆ ನಿಭಾಯಿಸಲು ಇನ್ ಫ್ರಾ ನಿಧಿ ಯೋಜನೆ. ರೈಲ್ವೆ ಆಸ್ತಿ ಒತ್ತುವರಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ.

* ರೈಲ್ವೆ ಪ್ರಯಾಣದ ಕುಂದು, ಕೊರತೆಗಳ ಬಗ್ಗೆ ದೂರು ನೀಡಲು Mobile App

* ಹಿರಿಯ ನಾಗರೀಕರಿಗೆ ಆನ್‘ಲೈನ್‘ನಲ್ಲಿ Wheel Chair ಬುಕ್ಕಿಂಗ್ ವ್ಯವಸ್ಥೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT