ರಾಜ್ಯ

2015-16ನೇ ಸಾಲಿನ ರಾಜ್ಯ ಬಜೆಟ್

Vishwanath S

ಬೆಂಗಳೂರು: 2015-16ನೇ ಸಾಲಿನ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಮಂಡಿಸುತ್ತಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿ ಹ್ಯಾಟ್ರಿಕ್ ಹಾಗೂ ವಿತ್ತ ಸಚಿವರಾಗಿ ದಾಖಲೆಯ ಹತ್ತನೇ ಬಜೆಟ್ ಮಂಡನೆಗೆ ಸಜ್ಜಾಗಿರುವ ಸಿದ್ದರಾಮಯ್ಯ ಈ ಬಾರಿ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ನಿರೀಕ್ಷೆ ಹುಟ್ಟಿಸಿದ್ದಾರೆ.

ರಾಜ್ಯದ ಆರ್ಥಿಕ ವ್ಯವಸ್ಥೆಗೆ ಶಕ್ತಿ ತುಂಬಬೇಕಾದ ಅನಿರ್ವಾಯತೆಗೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚಾಯತ್ ಚುನಾವಣೆಯ ಸಾಮೀಪ್ಯದಿಂದಾಗಿ ಮತ್ತೆ ಭಾಗ್ಯ ಸರಣಿಯನ್ನು ಮುಂದುವರಿಸುವರೋ ಅಥವಾ ರಾಜ್ಯದ ದೂರಗಾಮಿ ಹಿತ ಕಾಯಲು ಜನರ ಮೇಲೆ ಭಾರೀ ಹೊರೆ ಹೊರಿಸಲಿದ್ದಾರೋ ಎಂಬಕುತೂಹಲಕ್ಕೆ ಕೆಲವೇ ಹೊತ್ತಿನಲ್ಲಿ ಉತ್ತರ ದೊರೆಯಲಿದೆ.

SCROLL FOR NEXT