ಡಿಜಿಟಲ್ ಪಾವತಿ 
ಕೇಂದ್ರ ಬಜೆಟ್

ಕೇಂದ್ರ ಬಜೆಟ್ 2023-24: ಡಿಜಿಟಲ್ ಪಾವತಿಯಲ್ಲಿ ಭಾರತ ಕ್ರಾಂತಿ; ಪ್ರಗತಿ ಶ್ಲಾಘಿಸಿದ ನಿರ್ಮಲಾ ಸೀತಾರಾಮನ್

ಡಿಜಿಟಲ್ ಪಾವತಿಯಲ್ಲಿ ಭಾರತ ಕ್ರಾಂತಿ ಮಾಡಿದೆ ಎಂದು ದೇಶದ ಪ್ರಗತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2023-24 ಮಂಡನೆ ವೇಳೆ ಶ್ಲಾಘಿಸಿದ್ದಾರೆ.

ನವದೆಹಲಿ: ಡಿಜಿಟಲ್ ಪಾವತಿಯಲ್ಲಿ ಭಾರತ ಕ್ರಾಂತಿ ಮಾಡಿದೆ ಎಂದು ದೇಶದ ಪ್ರಗತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2023-24 ಮಂಡನೆ ವೇಳೆ ಶ್ಲಾಘಿಸಿದ್ದಾರೆ.

ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಅವರು "ಹಲವು ಯೋಜನೆಗಳ ಸಮರ್ಥ ಅನುಷ್ಠಾನ" ದ ಮೂಲಕ ಕೇಂದ್ರದ ಸಾಧನೆಗಳನ್ನು ಗಮನಸೆಳೆದರು, ಇದು ಅಂತರ್ಗತ ಅಭಿವೃದ್ಧಿಗೆ ಕಾರಣವಾಯಿತು ಎಂದು ಅಭಿಪ್ರಾಯಪಟ್ಟ ಅವರು, ಡಿಜಿಟಲ್ ಪಾವತಿಗಳಲ್ಲಿ ಗಮನಾರ್ಹವಾದ ವರ್ಧನೆಯಿಂದ ಭಾರತದ ಆರ್ಥಿಕತೆಯು ಹೆಚ್ಚು ಔಪಚಾರಿಕವಾಗಿದೆ ಎಂದು ಬುಧವಾರ ಸಂಸತ್ತಿನಲ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. 

ವರ್ಷಗಳಲ್ಲಿ ಡಿಜಿಟಲ್ ಪಾವತಿಗಳಲ್ಲಿ ತಂದ ವರ್ಧನೆಯನ್ನು ಅವರು ಶ್ಲಾಘಿಸಿದರು. 2022 ರಲ್ಲಿ ಯುಪಿಐ ಮೂಲಕ 126 ಲಕ್ಷ ಕೋಟಿ ರೂ ಮೌಲ್ಯದ ಸುಮಾರು 7,400 ಕೋಟಿ ಡಿಜಿಟಲ್ ಪಾವತಿಗಳನ್ನು ಮಾಡಲಾಗಿದೆ ಎಂದು ಅವರು ಸದನದ ಗಮನಕ್ಕೆ ತಂದರು. 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 2022 ರವರೆಗೆ ದೇಶದಾದ್ಯಂತ ಡಿಜಿಟಲ್ ಪಾವತಿಗಳು ಒಂದು ವರ್ಷದಲ್ಲಿ ಶೇ.24.13% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಹೊಸದಾಗಿ ರಚಿತವಾದ RBI ಯ ಡಿಜಿಟಲ್ ಪಾವತಿ ಸೂಚ್ಯಂಕವು (RBI-DPI) 2022 ರ ಸೆಪ್ಟೆಂಬರ್‌ನಲ್ಲಿ 377.46 ರಷ್ಟಿದ್ದು ಮಾರ್ಚ್‌ನಲ್ಲಿ 349.30 ರಷ್ಟಿತ್ತು. 2022 ಮತ್ತು ಸೆಪ್ಟೆಂಬರ್ 2021 ರಲ್ಲಿ 304.06 ರೂ ನಷ್ಟಿತ್ತು ಎಂದು ಅವರು ಮಾಹಿತಿ ನೀಡಿದರು.

"ಆರ್‌ಬಿಐ-ಡಿಪಿಐ ಸೂಚ್ಯಂಕವು ಎಲ್ಲಾ ನಿಯತಾಂಕಗಳಾದ್ಯಂತ ಪಾವತಿ ಮೂಲಸೌಕರ್ಯದಲ್ಲಿನ ಗಮನಾರ್ಹ ಬೆಳವಣಿಗೆ ಮತ್ತು ಅವಧಿಯಲ್ಲಿ ದೇಶಾದ್ಯಂತ ಪಾವತಿ ಕಾರ್ಯಕ್ಷಮತೆಯಿಂದ ಹೆಚ್ಚಿದೆ" ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಅಂತರ್ಗತ ಅಭಿವೃದ್ಧಿಗೆ ಕಾರಣವಾದ "ಹಲವು ಯೋಜನೆಗಳ ಸಮರ್ಥ ಅನುಷ್ಠಾನ" ದ ಮೂಲಕ ಕೇಂದ್ರದ ಸಾಧನೆಗಳನ್ನು ಅವರು ಮತ್ತಷ್ಟು ಗಮನಸೆಳೆದರು. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸುಮಾರು 47.8 ಕೋಟಿ ಪಿಎಂ ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ, 11.4 ಕೋಟಿಗೂ ಹೆಚ್ಚು ರೈತರಿಗೆ 2.2 ಲಕ್ಷ ಕೋಟಿ ರೂ ನಗದು ವರ್ಗಾವಣೆ ಮಾಡಲಾಗಿದೆ ಎಂದು ಸೀತಾರಾಮನ್ ಹೇಳಿದರು.

ಬಲವಾದ ಸಾರ್ವಜನಿಕ ಹಣಕಾಸು ಮತ್ತು ದೃಢವಾದ ಹಣಕಾಸು ವಲಯದೊಂದಿಗೆ ತಂತ್ರಜ್ಞಾನ-ಚಾಲಿತ ಮತ್ತು ಜ್ಞಾನ ಆಧಾರಿತ ಆರ್ಥಿಕತೆಯನ್ನು ಸಾಧಿಸಲು 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಅತ್ಯಗತ್ಯ ಎಂದು ಹಣಕಾಸು ಸಚಿವರು ಹೇಳಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT