ವಾಣಿಜ್ಯ

ಹೆರಿಗೆ ವಿಮೆಯ ಮಹಿಮೆ

ಹೆರಿಗೆ ಎಂಬುದು ಮಹಿಳೆಯರ ಬದುಕಿನ ಅತ್ಯಮೂಲ್ಯ ಘಳಿಗೆ. ಇಂದು...

ಹೆರಿಗೆ ಎಂಬುದು ಮಹಿಳೆಯರ ಬದುಕಿನ ಅತ್ಯಮೂಲ್ಯ ಘಳಿಗೆ. ಇಂದು ವೈದ್ಯಕೀಯ ವೆಚ್ಚಗಲು ತುಂಬಾ ದುಬಾರಿಯಾಗಿವೆ. ಈ ಸಂದರ್ಭದಲ್ಲಿ ಹೆರಿಗೆಗೂ ಮುನ್ನ ಪ್ರತಿ ಮಹಿಳೆಯರು ಪೂರ್ವಸಿದ್ಧತೆ ಕೈಗೊಳ್ಳುವಂತೆ, ವೈದ್ಯಕೀಯ ಖರ್ಚುವೆಚ್ಚಗಳ ಯೋಜನೆಯನ್ನು ರೂಪಿಸಿಕೊಳ್ಳುವ ಅಗತ್ಯವಿದೆ.

ಕೆಲವು ರ್ಷಗಲಿಂದೀಚೆಗೆ ಬೆಳದ ಹೆರಿಗೆ ವಿಮೆ ಪರಿಕಲ್ಪನೆಯು ಭಾರತದಲ್ಲಿ ಈಗಷ್ಟೇ ಈ ವಿಮೆ ಸೌಲಭ್ಯವೂ ಪ್ರಚಾರಕ್ಕೆ ಬರುತ್ತಿದೆ. ಹೆರಿಗೆ ವಿಮೆ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಪ್ರಮುಖವಾಗಿ ಮಿತಿ, ಜನಸಂಖ್ಯೆ ಗುರಿ, ಎಷ್ಟು ಹೆರಿಗೆಗೆ(1 ಅಥವಾ 2 ಮಾತ್ರ) ವಿಮೆ, ಕಾಲಾವಧಿ, ಹಿಂದಿನ ಹೆರಿಗೆಯಲ್ಲಾದ ತೊಂದರೆಗಳು, ಹೆಚ್ಚು ಪ್ರೀಮಿಯಂ ಕಟ್ಟಿದರೆ ಆಗುವ ಲಾಭಗಳು.

ಹೆರಿಗೆ ವಿಮೆಯು ಗರ್ಭಧಾರಣೆ ವೇಳೆ ಮಹಿಳೆಗೆ ಎದುರಾಗುವ ಅನಿರೀಕ್ಷಿತ ತೊಂದರೆ ಸಂದರ್ಭದಲ್ಲಿ ಆರ್ಥಿಕ ಸುರಕ್ಷತೆ ಒದಗಿಸುತ್ತದೆ. ಗರ್ಭಧಾರಣೆಗೆ ಮೊದಲು ಈ ವಿಮೆಯನ್ನು ಪಡೆಯಬೇಕಾಗುತ್ತದೆ. ಗರ್ಭಧಾರಣೆ ನಂತರವಾದರೆ ಕಾಯುವ ಅವಧಿಯನ್ನು ಪರಿಶೀಲಸಬೇಕಾಗುತ್ತದೆ.

ಹೆರಿಗೆ ವಿಮೆ ಪಡೆಯುವ ಮುನ್ನ ನಿಮ್ಮ ಸಾಮೂಹಿಕ ವಿಮೆ ಮತ್ತು ಆರೋಗ್ಯ ವಿಮೆ ಪಡೆದಿದ್ದರೆ ಅದರಲ್ಲಿ ಹೆರಿಗೆ ವಿಮೆ ಇದೆಯೋ ಇಲ್ಲವೋ ಎಂದು ಪರಿಶೀಲಿಸಿ. ಕೆಲವೊಂದು ಕಂಪನಿಗಳು ಉದ್ಯೋಗಿಗಳಿಗೆ ನೀಡುವ ಸಾಮೂಹಿಕ ವಿಮೆಯಲ್ಲಿ ಮೊದಲ ಮಗುವಿಗೆ ಹೆರಿಗೆ ವಿಮೆ, ನವಜಾತ ಶಿಶುವಿನ ರಕ್ಷಣೆ ಸೌಲಭ್ಯವನ್ನು ಒದಗಿಸಿರುತ್ತದೆ.

ಹೆರಿಗೆ ವಿಮೆ ಪಡೆಯಬೇಕಾದ ವಿಮಾದಾರ 10ರಿಂದ 48 ತಿಂಗಳು ಕಾಯಬೇಕಾಗುತ್ತದೆ. ಕಂಪನಿಗಳು ನೀಡುವ ಸಾಮೂಹಿಕ ವಿಮೆಯಲ್ಲಿ ಕಾಯುವ ಅವಧಿ 9 ತಿಂಗಳದ್ದಾಗಿರುತ್ತದೆ. ಸಾಮಾನ್ಯ ಮತ್ತು ಸಿಸರೀನ್ ಹೆರಿಗೆಗೆ 20,000ದಿಂದ 1.5 ಲಕ್ಷ ರು.ವರೆಗೆ ವಿಮೆ ಪರಿಹಾರ ಪಡೆಯಲು ಅವಕಾಶವಿದೆ. ಪ್ರಮುಖ ವಿಚಾರವೆಂದರೆ ಇದರಲ್ಲಿ ಎರಡು ಮಗುವಿನ ಹೆರಿಗೆಗೆ ಮಾತ್ರ ವಿಮೆ ಸೌಲಭ್ಯವನ್ನು ಒದಿಗಿಸಲಾಗುತ್ತದೆ.

ಹೆರಿಗೆ ವಿಮೆಯು ಗರ್ಭಧಾರಣೆ ವೇಳೆ ಎದುರಾಗುವ ಅನಿರೀಕ್ಷಿತ ತೊಂದರೆಗಳಿಂದ ತಾಯಿ-ಮಗುವಿನ ಸುರಕ್ಷತೆಗೆ ಆರ್ಥಿಕ ನೆರವಿನ ಭರವಸೆಯನ್ನು ನೀಡುತ್ತದೆ ಎನ್ನುತ್ತಾರೆ ಡಾ.ಎಸ್ ಪ್ರಕಾಶ್(ಎಫ್‌ಆರ್‌ಸಿಎಸ್ (ಗ್ಲಾಸ್ಗ್), ಎಫ್‌ಎಐಎಸ್, ಎಕ್ಸಿಕ್ಯೂಟಿವ್ ಡೈರೆಕ್ಟರ್, ಸ್ಟಾರ್ ಹೆಲ್ತ್ ಆ್ಯಂಡ್ ಎಲೈಡ್ ಇನ್ಸ್‌ರೆನ್ಸ್ ಕೋ- ಅಪರೇಟಿವ್ ಲಿಮಿಟೆಡ್).

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT