ಈರುಳ್ಳಿ ಕಳ್ಳತನ! 
ವಾಣಿಜ್ಯ

ಬೆಲೆ ಏರಿಕೆ ಮೇಲೆ ಕಳ್ಳರ ಕಣ್ಣು: 50 ಸಾವಿರ ಮೌಲ್ಯದ 700 ಕೆ.ಜಿ ಈರುಳ್ಳಿ ಕಳ್ಳತನ!

ಬೆಲೆ ಏರಿಕೆಯಾಗುತ್ತಿರುವುದರಿಂದ ಈರುಳ್ಳಿ ವರ್ತಕರು ತಮ್ಮ ಬಳಿ ಇರುವ ಈರುಳ್ಳಿಗೆ ಭದ್ರತೆ ಒದಗಿಸುತ್ತಿರುವ ವ್ಯಂಗ್ಯ ಚಿತ್ರಗಳನ್ನು ನೋಡಿದ್ದಿರಿ. ಆದರೆ ಈಗ ನಿಜವಾಗಿಯೂ ಅಂಥಾ ಸ್ಥಿತಿ ಬಂದಿದೆ.

ಮುಂಬೈ: ಬೆಲೆ ಏರಿಕೆಯಾಗುತ್ತಿರುವುದರಿಂದ ಈರುಳ್ಳಿ ವರ್ತಕರು ತಮ್ಮ ಬಳಿ ಇರುವ ಈರುಳ್ಳಿಗೆ ಭದ್ರತೆ ಒದಗಿಸುತ್ತಿರುವ ವ್ಯಂಗ್ಯ ಚಿತ್ರಗಳನ್ನು ನೋಡಿದ್ದಿರಿ. ಆದರೆ ಈರುಳ್ಳಿ ವರ್ತಕರು ನಿಜವಾಗಿಯೂ ತಮ್ಮ ಸರಕಿಗೆ ಭದ್ರತೆ ಒದಗಿಸುವ ಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಈರುಳ್ಳಿ ಕದಿಯುವ ಮೂಲಕವೇ ಕಳ್ಳರು ಲಾಭ ಮಾಡಿಕೊಂಡಿದ್ದಾರೆ.

ಮುಂಬೈ ನಲ್ಲಿ ಸುಮಾರು 50 ಸಾವಿರ ಮೌಲ್ಯದ ಬರೋಬ್ಬರಿ 700 ಕೆ.ಜಿಯಷ್ಟು ಇರುಳ್ಳಿ ಕಳ್ಳತನವಾಗಿದೆ. ಮುಂಬೈ ನ ಪ್ರತೀಕ್ಷಾ ನಗರದ ಅನಂತ್ ನಾಯ್ಕ್ ಎಂಬುವ ವ್ಯಾಪಾರಿಗೆ ಸೇರಿದ 14 ಮೂಟೆ ಈರುಳ್ಳಿ ಕಳ್ಳತನವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರ ರಾತ್ರಿ ಅಂಗಡಿಗೆ ಬೀಗ ಹಾಕಿ ತೆರಳಿದ್ದ ನಾಯ್ಕ್, ಶನಿವಾರ ಬೆಳಿಗ್ಗೆ ಬರುವ ವೇಳೆಗೆ ಈರುಳ್ಳಿ ಮೂಟೆಗಳು ಇಲ್ಲದೇ ಇರುವುದನ್ನು ಕಂಡು ಗಾಬರಿಯಾಗಿದ್ದಾರೆ. ಕಳ್ಳತನವಾಗಿರುವ ಇರುಳ್ಳಿ ಮೌಲ್ಯ, ಸುಮಾರು 50 ಸಾವಿರ ಎಂದು ಅಂದಾಜಿಸಲಾಗಿದೆ. ಐಪಿಸಿ ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಮಹಾರಾಷ್ಟ್ರದಲ್ಲಿ ಸಗಟು ಈರುಳ್ಳಿ ದರ ಪ್ರತಿ ಕೆ.ಜಿ ಗೆ ರೂ 57 ರಷ್ಟಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆ.ಜಿಗೆ 80 ರೂಪಾಯಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT