ಸಾಂದರ್ಭಿಕ ಚಿತ್ರ 
ವಾಣಿಜ್ಯ

ಹಳ್ಳಿ ತೆರಿಗೆದಾರರ ಮೇಲೆ ಐಟಿ ಕಣ್ಣು

ವಾರ್ಷಿಕ ರು.4 ಲಕ್ಷ ಆದಾಯವಿದ್ದರೂ ತೆರಿಗೆ ಪಾವತಿಸದ ಗ್ರಾಮೀಣ ಪ್ರದೇಶದ ಜನರ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದೆ...

ನವದೆಹಲಿ: ವಾರ್ಷಿಕ ರು.4 ಲಕ್ಷ ಆದಾಯವಿದ್ದರೂ ತೆರಿಗೆ ಪಾವತಿಸದ ಗ್ರಾಮೀಣ ಪ್ರದೇಶದ ಜನರ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದೆ. ಹೆಚ್ಚೆಚ್ಚು ಮಂದಿ ತಮ್ಮ ಬಾಕಿಯಿರುವ ತೆರಿಗೆಗಳನ್ನು ಪಾವತಿಸಲು ಶುರು ಮಾಡಿದರೆ, ಆದಾಯ ತೆರಿಗೆಯ ಹೊರೆ ಇಳಿಯಲಿದೆ.

ತೆರಿಗೆ ವ್ಯಾಪ್ತಿಯೊಳಗೆ ಬರುವ ಆದಾಯ ಹೊಂದಿರುವವರು ಕನಿಷ್ಠ ಪಕ್ಷ ರಿಟರ್ನ್ಸ್ ಸಲ್ಲಿಸಲು ಆರಂಭಿಸಬೇಕು. 2ನೇ ಮತ್ತು 3ನೇ ಹಂತದ ನಗರಗಳಲ್ಲಿರುವ ಅನೇಕರು ತೆರಿಗೆ ಹಾಕ ಬಹುದಾದ ಆದಾಯ ಹೊಂದಿದ್ದರೂ ತೆರಿಗೆ ಪಾವತಿಸುತ್ತಿಲ್ಲ. ಈ ವ್ಯಾಪ್ತಿಗೆ ಬರುವವರ ಮೇಲೆ ನಾವು ಕಣ್ಣಿಡಲು ಆರಂಭಿಸಿದ್ದೇವೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ತಿಳಿಸಿದೆ.

ರು.4 ಲಕ್ಷದಷ್ಟು ಆದಾಯ ಹೊಂದಿರುವವರ ವ್ಯಾಪ್ತಿಯಲ್ಲಿ ಬರುವಶೇ.18-20ರಷ್ಟು ಮಂದಿ ನಮಗೆ ಸಿಗುತ್ತಿಲ್ಲ. ಯಾರು ತೆರಿಗೆ ಪಾವತಿಸುತ್ತಿಲ್ಲವೋ ಅಂಥವರು ತೆರಿಗೆ ಪಾವತಿಸುತ್ತಿರುವವರ ಹೊರೆಯನ್ನು ಹೆಚ್ಚಿಸಿದಂತೆ. ಅದಕ್ಕಾಗಿಯೇ ನಾವು ಹೆಚ್ಚೆಚ್ಚು ಮಂದಿಯನ್ನು ತೆರಿಗೆ ವ್ಯಾಪ್ತಿಯೊಳಗೆ ತರಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ ಸಿಬಿಡಿಟಿ ಮುಖ್ಯಸ್ಥೆ ಅನಿತಾ ಕಪೂರ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT