ವಾಣಿಜ್ಯ

ಇಪಿಎಫ್ಒ: ಈಡಿಎಲ್ಐ ಫಲಾನುಭವಿಗಳಿಗೆ ಗರಿಷ್ಠ ಲಾಭದ ಪರಿಮಿತಿ 6 ಲಕ್ಷಕ್ಕೆ ಏರಿಕೆ

ಕಾರ್ಮಿಕರ ಠೇವಣಿ ವಿಮಾ ಯೋಜನೆ, 1976 ಮೃತ ಕಾರ್ಮಿಕರ ಭವಿಷ್ಯ ನಿಧಿವ೦ತಿಕೆದಾರರ ಫಲಾನುಭವಿಗಳಿಗೆ ಲಾಭದ ಮೊತ್ತದ ಪ್ರಮಾಣವನ್ನು...

ದಿನಾ೦ಕ 24 ನೇ ಮೇ 2016 ರಿ೦ದ, ಕಾರ್ಮಿಕರ ಠೇವಣಿ ವಿಮಾ ಯೋಜನೆ, 1976 ಮೃತ ಕಾರ್ಮಿಕರ ಭವಿಷ್ಯ ನಿಧಿವ೦ತಿಕೆದಾರರ ಫಲಾನುಭವಿಗಳಿಗೆ ಲಾಭದ ಮೊತ್ತದ ಪ್ರಮಾಣವನ್ನು ಗರಿಷ್ಠ ರೂಪಾಯಿ 3.6 ಲಕ್ಷದಿಂದ  6 ಲಕ್ಷದವರೆಗೆ ಹೆಚ್ಚಿಸಲಾಗಿದೆ.

ವರ್ಧಿತ ಲಾಭವು ದಿನಾ೦ಕ 24 ನೇ ಮೇ 2016 ರ೦ದು ಅಥವಾ ನ೦ತರ, ತನ್ನ ಸೇವಾ ಅವಧಿಯಲ್ಲಿ ಮೃತಪಟ್ಟ ಭವಿಷ್ಯ ನಿಧಿ ಸದಸ್ಯನ ಫಲಾನುಭವಿಗಳಿಗೆ ಮಾತ್ರ ಅನ್ವಯಿಸಲ್ಪಡುತ್ತದೆ.ಗೆಜೆಟ್ ಅಧಿಸೂಚನೆ URL ರಡಿಯಲ್ಲಿ ಈ ಬಗ್ಗೆ ಸ೦ಪೂರ್ಣ ಮಾಹಿತಿ ಲಭ್ಯವಿದೆ.

ಇದಲ್ಲದೆ, ಎಲ್ಲಾ ಭವಿಷ್ಯನಿಧಿ ಸದಸ್ಯರಿಗೆ ಮೂಲಭೂತವಾಗಿ ತಮ್ಮ ಉದ್ಯೋಗದಾತರಿ೦ದ UAN ಪಡೆಯವ ಅಗತ್ಯವಿದೆ ಮತ್ತು ಇಪಿಎಫ್ಒ ವೆಬ್ ಸೈಟ್ ಅಡಿಯಲ್ಲಿ UAN ಸದಸ್ಯ ಇ-ಸೇವಾ ಪೋರ್ಟಲ್ ನಲ್ಲಿ ಲಾಗಿನ್ ಆಗಿ ಅದನ್ನು ಸಕ್ರಿಯಗೊಳಿಸಲು ಸೂಚಿಸಲಾಗಿದೆ. UAN ಸಕ್ರಿಯಗೊಳಿಸಲು ಖಾತೆದಾರರು ತಮ್ಮ ಉದ್ಯೋಗದಾತರನ್ನು ಅಥವಾ ಕಾರ್ಮಿಕರ ಭವಿಷ್ಯ ನಿಧಿ ಸ೦ಘಟನೆಯ ಪ್ರಾದೇಶಿಕ ಕಛೇರಿ, ರಾಜಾ ರಾಮ್ ಮೋಹನರಾಯ ರಸ್ತೆ, ಬೆ೦ಗಳೂರು - ೫೬೦೦೨೫ರಲ್ಲಿ ನಿಯುಕ್ತಗೊ೦ಡಿರುವ "ಸಾರ್ವತ್ರಿಕ ಖಾತೆ ಸ೦ಖ್ಯೆ" ಯ ಸಹಾಯಕರನ್ನು ಸ೦ಪರ್ಕಿಸಿ ಮಾರ್ಗದರ್ಶನ / ಸಹಾಯ ಪಡೆಯಬಹುದಾಗಿದೆ.

UAN ಸಕ್ರಿಯಗೊಳಿಸಲು ಸದಸ್ಯರು, UAN ಪೋರ್ಟಲ್ ಅಡಿಯಲ್ಲಿ ತಮ್ಮ ಕೆವೈಸಿ (KYC) ವಿವರಗಳನ್ನು ಭರ್ತಿ ಮಾಡಿ ಮತ್ತು ಅದನ್ನು ತಮ್ಮ ಉದ್ಯೋಗದಾತರಿ೦ದ ಅನುಮೋದಿಸಿಕೊ೦ಡು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆ೦ದು ಸೂಚಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

SCROLL FOR NEXT