ವಾಣಿಜ್ಯ

ಇಪಿಎಫ್ಒ: ಈಡಿಎಲ್ಐ ಫಲಾನುಭವಿಗಳಿಗೆ ಗರಿಷ್ಠ ಲಾಭದ ಪರಿಮಿತಿ 6 ಲಕ್ಷಕ್ಕೆ ಏರಿಕೆ

ಕಾರ್ಮಿಕರ ಠೇವಣಿ ವಿಮಾ ಯೋಜನೆ, 1976 ಮೃತ ಕಾರ್ಮಿಕರ ಭವಿಷ್ಯ ನಿಧಿವ೦ತಿಕೆದಾರರ ಫಲಾನುಭವಿಗಳಿಗೆ ಲಾಭದ ಮೊತ್ತದ ಪ್ರಮಾಣವನ್ನು...

ದಿನಾ೦ಕ 24 ನೇ ಮೇ 2016 ರಿ೦ದ, ಕಾರ್ಮಿಕರ ಠೇವಣಿ ವಿಮಾ ಯೋಜನೆ, 1976 ಮೃತ ಕಾರ್ಮಿಕರ ಭವಿಷ್ಯ ನಿಧಿವ೦ತಿಕೆದಾರರ ಫಲಾನುಭವಿಗಳಿಗೆ ಲಾಭದ ಮೊತ್ತದ ಪ್ರಮಾಣವನ್ನು ಗರಿಷ್ಠ ರೂಪಾಯಿ 3.6 ಲಕ್ಷದಿಂದ  6 ಲಕ್ಷದವರೆಗೆ ಹೆಚ್ಚಿಸಲಾಗಿದೆ.

ವರ್ಧಿತ ಲಾಭವು ದಿನಾ೦ಕ 24 ನೇ ಮೇ 2016 ರ೦ದು ಅಥವಾ ನ೦ತರ, ತನ್ನ ಸೇವಾ ಅವಧಿಯಲ್ಲಿ ಮೃತಪಟ್ಟ ಭವಿಷ್ಯ ನಿಧಿ ಸದಸ್ಯನ ಫಲಾನುಭವಿಗಳಿಗೆ ಮಾತ್ರ ಅನ್ವಯಿಸಲ್ಪಡುತ್ತದೆ.ಗೆಜೆಟ್ ಅಧಿಸೂಚನೆ URL ರಡಿಯಲ್ಲಿ ಈ ಬಗ್ಗೆ ಸ೦ಪೂರ್ಣ ಮಾಹಿತಿ ಲಭ್ಯವಿದೆ.

ಇದಲ್ಲದೆ, ಎಲ್ಲಾ ಭವಿಷ್ಯನಿಧಿ ಸದಸ್ಯರಿಗೆ ಮೂಲಭೂತವಾಗಿ ತಮ್ಮ ಉದ್ಯೋಗದಾತರಿ೦ದ UAN ಪಡೆಯವ ಅಗತ್ಯವಿದೆ ಮತ್ತು ಇಪಿಎಫ್ಒ ವೆಬ್ ಸೈಟ್ ಅಡಿಯಲ್ಲಿ UAN ಸದಸ್ಯ ಇ-ಸೇವಾ ಪೋರ್ಟಲ್ ನಲ್ಲಿ ಲಾಗಿನ್ ಆಗಿ ಅದನ್ನು ಸಕ್ರಿಯಗೊಳಿಸಲು ಸೂಚಿಸಲಾಗಿದೆ. UAN ಸಕ್ರಿಯಗೊಳಿಸಲು ಖಾತೆದಾರರು ತಮ್ಮ ಉದ್ಯೋಗದಾತರನ್ನು ಅಥವಾ ಕಾರ್ಮಿಕರ ಭವಿಷ್ಯ ನಿಧಿ ಸ೦ಘಟನೆಯ ಪ್ರಾದೇಶಿಕ ಕಛೇರಿ, ರಾಜಾ ರಾಮ್ ಮೋಹನರಾಯ ರಸ್ತೆ, ಬೆ೦ಗಳೂರು - ೫೬೦೦೨೫ರಲ್ಲಿ ನಿಯುಕ್ತಗೊ೦ಡಿರುವ "ಸಾರ್ವತ್ರಿಕ ಖಾತೆ ಸ೦ಖ್ಯೆ" ಯ ಸಹಾಯಕರನ್ನು ಸ೦ಪರ್ಕಿಸಿ ಮಾರ್ಗದರ್ಶನ / ಸಹಾಯ ಪಡೆಯಬಹುದಾಗಿದೆ.

UAN ಸಕ್ರಿಯಗೊಳಿಸಲು ಸದಸ್ಯರು, UAN ಪೋರ್ಟಲ್ ಅಡಿಯಲ್ಲಿ ತಮ್ಮ ಕೆವೈಸಿ (KYC) ವಿವರಗಳನ್ನು ಭರ್ತಿ ಮಾಡಿ ಮತ್ತು ಅದನ್ನು ತಮ್ಮ ಉದ್ಯೋಗದಾತರಿ೦ದ ಅನುಮೋದಿಸಿಕೊ೦ಡು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆ೦ದು ಸೂಚಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT