ಸಂಗ್ರಹ ಚಿತ್ರ 
ವಾಣಿಜ್ಯ

2.5 ಲಕ್ಷ ಕೋಟಿ ಕಪ್ಪುಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಬರುವುದಿಲ್ಲ: ಎಸ್ ಬಿಐ

ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದಿಂದ ಈ ಹಿಂದೆ ಇದ್ದ 2.5 ಲಕ್ಷ ಕೋಟಿ ಕಪ್ಪುಹಣ ಮತ್ತೆ ಬ್ಯಾಕಿಂಗ್ ವ್ಯವಸ್ಥೆಗೆ ವಾಪಸಾಗುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದಿಂದ ಈ ಹಿಂದೆ ಇದ್ದ 2.5 ಲಕ್ಷ ಕೋಟಿ ಕಪ್ಪುಹಣ ಮತ್ತೆ ಬ್ಯಾಕಿಂಗ್ ವ್ಯವಸ್ಥೆಗೆ ವಾಪಸಾಗುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಕಳೆದ ನವೆಂಬಕ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ ಸುಮಾರು 2.5 ಲಕ್ಷ ಕೋಟಿ ರು.ಕಪ್ಪುಹಣ ಮತ್ತೆ ಬ್ಯಾಂಕಿಂಗ್ ವ್ಯವಸ್ಥೆಗೆ  ವಾಪಸಾಗುವುದಿಲ್ಲ ಎಂದು ಎಸ್ ಬಿಐ ಹೇಳಿದೆ. ಆರ್ ಬಿಐ ನ 2016 ಮಾರ್ಚ್ ತಿಂಗಳವರೆಗಿನ ದತ್ತಾಂಶಗಳ ಪ್ರಕಾರ ದೇಶಾದ್ಯಂತ 500 ಮತ್ತು 1000 ರು.ಮುಖಬೆಲೆಯ 14.18 ಲಕ್ಷ ಕೋಟಿ ರು. ನಗದು ಚಲಾವಣೆಯಲ್ಲಿತ್ತು. ಆದರೆ  ನೋಟು ನಿಷೇಧವಾದ ನವೆಂಬರ್ 8ರ ದತ್ತಾಂಶಗಳ ಪ್ರಕಾರ ಈ ಸಂಖ್ಯೆ 15.44 ಲಕ್ಷ ಕೋಟಿಗೇರಿದ್ದು, 1.26 ಲಕ್ಷ ಕೋಟಿ ನಗದು ಹಣ ಏರಿಕೆಯಾಗಿದೆ ಎಂದು ಎಸ್ ಬಿಐ ಹೇಳಿದೆ.

ಅಂತೆಯೇ ನೋಟು ನಿಷೇಧದ ಬಳಿಕ ದೇಶದ ವಿವಿಧ ಬ್ಯಾಂಕುಗಳಿಗೆ ಬರುತ್ತಿರುವ ಠೇವಣಿ ಮೊತ್ತ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ನವೆಂಬರ್ 10-17ರವರೆಗೆ 605 ಬಿಲಿಯನ್ ಹಳೆಯ ಹಣ ಠೇವಣಿಯಾಗಿದೆ.  ಅಂಚೆಯೇ ನವೆಂಬರ್ 19ರಿಂದ 27ರವರೆಗೆ 501 ಬಿಲಿಯನ್ ಹಣ ಠೇವಣಿಯಾಗಿದ್ದು, ಠೇವಣಿ ಪ್ರಮಾಣದಲ್ಲಿ ಶೇ.17ರಷ್ಟು ಕುಸಿತ ಕಂಡುಬಂದಿದೆ. ಒಟ್ಟಾರೆ ನವೆಂಬರ್ 10-27ರವರೆಗೆ ಬ್ಯಾಂಗಳಿಗೆ ಠೇವಣಿಯಾಗಿ ಮತ್ತು ಹಣ  ಬದಲಾವಣೆ ರೂಪದಲ್ಲಿ ಒಟ್ಟು 8.44 ಲಕ್ಷ ಕೋಟಿ ಹರಿದುಬಂದಿದೆ.

ಈ ಅಂಕಿ ಅಂಶಗಳ ಪ್ರಕಾರ ನೋಟು ನಿಷೇಧದ ಬಳಿಕ ಅಂತಿಮ ದಿನಾಂಕದೊಳಗೆ 15.44 ಲಕ್ಷ ಕೋಟಿ ಪೈಕಿ ಸುಮಾರು 13 ಲಕ್ಷ ಕೋಟಿ ರು.ಗಳು ಮಾತ್ರ ಬ್ಯಾಂಕುಗಳಿಗೆ ಹರಿದುಬರಲಿದ್ದು, ಉಳಿದ 2.5 ಲಕ್ಷಕ್ಕೂ ಕೋಟಿ ಹಣ  ಬ್ಯಾಂಕಿಂಗ್ ವ್ಯವಸ್ಥೆಗೆ ಬಾರದೇ ಸ್ಥಗಿತಗೊಳ್ಳುತ್ತದೆ ಎಂದು ಎಸ್ ಬಿಐ ಅಂದಾಜಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT