ಸಾಂದರ್ಭಿಕ ಚಿತ್ರ 
ವಾಣಿಜ್ಯ

ಮಾರ್ಚ್ 31ರ ನಂತರ ಹಳೆಯ ನೋಟು ಹೊಂದಿದ್ದರೆ ದಂಡ, ಜೈಲು ಶಿಕ್ಷೆ; ವಿಧೇಯಕ ಜಾರಿಗೆ ಸರ್ಕಾರ ಒಪ್ಪಿಗೆ

ಮಾರ್ಚ್ 31ರ ನಂತರ ಹಳೆಯ ನಿಷೇಧಿತ 500 ಮತ್ತು 1000 ರೂಪಾಯಿಗಳ ನೋಟುಗಳನ್ನು...

ನವದೆಹಲಿ: ಮಾರ್ಚ್ 31ರಿಂದ ನಂತರ ಹಳೆಯ ನಿಷೇಧಿತ 500 ಮತ್ತು 1000 ರೂಪಾಯಿಗಳ ನೋಟುಗಳನ್ನು ಹೊಂದಿರುವವರಿಗೆ ದಂಡ ಬೀಳುತ್ತದೆ. ಹಳೆಯ ನೋಟುಗಳನ್ನು ಇಟ್ಟುಕೊಂಡಿದ್ದರೆ ಅವುಗಳಿಗೆ ದಂಡ ವಿಧಿಸುವ ಸುಗ್ರೀವಾಜ್ಞೆಗೆ  ಕೇಂದ್ರ ಸರ್ಕಾರ ಬುಧವಾರ ಒಪ್ಪಿಗೆ ನೀಡಿದೆ. 
ಪ್ರಧಾನ ಮಂತ್ರಿ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕಕ್ಕೆ ಒಪ್ಪಿಗೆ ನೀಡಲಾಯಿತು. ಸ್ಪೆಸಿಫಿಕ್ ಬ್ಯಾಂಕ್ ನೋಟ್ ಸೆಸ್ಸೇಷನ್ ಆಫ್ ಲೈಯಬಿಲಿಟೀಸ್ ಆರ್ಡಿನೆನ್ಸ್ ಎಂದು ವಿಧೇಯಕಕ್ಕೆ ಹೆಸರಿಡಲಾಗಿದೆ. ಇದರ ಪ್ರಕಾರ, ಮಾರ್ಚ್ 31ರ ನಂತರ 10ಕ್ಕಿಂತ ಹೆಚ್ಚು ಹಳೆಯ 500 ಮತ್ತು 1000ದ ನೋಟುಗಳನ್ನು ಹೊಂದಿದ್ದರೆ 4 ವರ್ಷಗಳ ಜೈಲು ಶಿಕ್ಷೆ ಮತ್ತು ಹೊಂದಿರುವ ನೋಟಿನ ಮೊತ್ತದ 5 ಪಟ್ಟು ಹೆಚ್ಚು ದಂಡ ಕಟ್ಟಬೇಕಾಗುತ್ತದೆ.
ಮುಂದಿನ ತಿಂಗಳ ಕೇಂದ್ರ ಬಜೆಟ್  ಅಧಿವೇಶನದಲ್ಲಿ ವಿಧೇಯಕ ಕಾನೂನಾಗಿ ಜಾರಿಗೆ ಬರುವ ನಿರೀಕ್ಷೆಯಿದೆ. 
ವಿಧೇಯಕದ ಪ್ರಕಾರ, ಹಳೆಯ ನೋಟುಗಳನ್ನು ಸಂಶೋಧನೆಗೆ, ನಾಣ್ಯಶಾಸ್ತ್ರ ಅಧ್ಯಯನಕ್ಕೆ ಮಾತ್ರ ಇಟ್ಟುಕೊಳ್ಳಬಹುದು. ಪರ್ಯಾಯವಾಗಿ ಅಕ್ರಮವಾಗಿ ಯಾವುದೇ ಕಾರಣಕ್ಕೂ ಹಳೆಯ ನೋಟುಗಳನ್ನು ಬಳಸದಂತೆ ತಡೆಯಲು ಸರ್ಕಾರ ಈ ನಿಯಮ ಜಾರಿಗೆ ತರಲಿದೆ.
ಹಳೆಯ ನೋಟುಗಳು ಹೊಂದಿದ್ದು ನಿರ್ದಿಷ್ಟ ಕಾರಣಗಳಿಂದ ಮಾರ್ಚ್ 31ರೊಳಗೆ ಬ್ಯಾಂಕಿನಲ್ಲಿ ಇಡಲು ಸಾಧ್ಯವಾಗದವರಿಗೆ ಆ ಬಳಿಕ ಒಂದು ನಿರ್ದಿಷ್ಟ ಷರತ್ತುಬದ್ಧ ನಿಯಮದ ಮೂಲಕ ಠೇವಣಿಯಿಡಲು ಅವಕಾಶವಿದೆ. ಮಾರ್ಚ್ 31ರೊಳಗೆ ಹಳೆಯ ನೋಟುಗಳನ್ನು ಏಕೆ ನೀಡಲಿಲ್ಲ ಎಂದು ಸ್ಪಷ್ಟ ಕಾರಣ ನೀಡಬೇಕಾಗುತ್ತದೆ.
ವಿಧೇಯಕದ ಪ್ರಕಾರ ಈ ತಿಂಗಳ 30ರ ನಂತರ ನಿಷೇಧಿತ ನೋಟುಗಳನ್ನು ನೇರವಾಗಿ ಆರ್ ಬಿಐಯಲ್ಲಿ ಠೇಣಿಯಿಡಬೇಕು ಮತ್ತು ರಿಯಾಯಿತಿಯ ಅವಧಿ ನಂತರ ನಿರ್ಧರಿಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

SCROLL FOR NEXT