ಪಾತಾಳಕ್ಕೆ ಕುಸಿದ ಷೇರುಮಾರುಕಟ್ಟೆ (ಸಂಗ್ರಹ ಚಿತ್ರ) 
ವಾಣಿಜ್ಯ

ಷೇರುಪೇಟೆಗೆ ಕರಾಳ ಬುಧವಾರ, ವಹಿವಾಟಿನಲ್ಲಿ 1.84 ಲಕ್ಷ ಕೋಟಿ ರುಪಾಯಿ ನಷ್ಟ

ದೇಶೀಯ ಷೇರುಮಾರುಕಟ್ಟೆ ಕುಸಿತ ಬುಧವಾರವೂ ಮುಂದುವರೆದಿದ್ದು, ಬುಧವಾರ ಷೇರುಪೇಟೆ ವ್ಯವಹಾರ ಪಾತಳಕ್ಕೆ ಕುಸಿಯಿತು....

ಮುಂಬೈ: ದೇಶೀಯ ಷೇರುಮಾರುಕಟ್ಟೆ ಕುಸಿತ ಬುಧವಾರವೂ ಮುಂದುವರೆದಿದ್ದು, ಬುಧವಾರ ಷೇರುಪೇಟೆ ವ್ಯವಹಾರ ಪಾತಳಕ್ಕೆ ಕುಸಿಯಿತು.

ಚೀನಾದ ದುರ್ಬಲ ಆರ್ಥಿಕತೆ ಮತ್ತು ಕಚ್ಚಾತೈಲ ದರ ಕುಸಿತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೀವ್ರ ಪರಿಣಾಮ ಬೀರಿದ್ದು, ಬುಧವಾರ ಭಾರತೀಯ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ  ಕಲ್ಲೋಲ ಸೃಷ್ಟಿಯಾಯಿತು. ದಿನದ ಆರಂಭಿಕ ವಹಿವಾಟಿನಲ್ಲೇ ಕುಸಿತಕ್ಕೊಳಗಾದ ಬಿಎಸ್‌ಇ ಸೆನ್ಸೆಕ್ಸ್ ಮಧ್ಯಾಹ್ನದ ವೇಳೆಗೆ 616 ಅಂಕ ಇಳಿಕೆ ಕಂಡು ದಿನದ ಕನಿಷ್ಠ ಮಟ್ಟ 23,864ಕ್ಕೆ  ತಲುಪಿತ್ತು. ಇದೇ ವೇಳೆ ನಿಫ್ಟಿ ಕೂಡ 188 ಅಂಶಗಳ ಕುಸಿತ ಕಂಡು 7,247ಕ್ಕೆ ತಲುಪಿತ್ತು. ಆದರೆ ದಿನದ ವಹಿವಾಟು ಮುಕ್ತಾಯವಾಗುವ ವೇಳೆ ತುಸು ಚೇತರಿಕೆ ಕಂಡಿತಾದರು, ಒಟ್ಟಾರೆ ಸೆನ್ಸೆಕ್ಸ್  417.80 ಅಂಕ ಪತನಗೊಂಡು 24,062 ಹಾಗೂ ನಿಫ್ಟಿ 125.80 ಅಂಶ ನಷ್ಟ ಅನುಭವಿಸಿ 7,309.30ಕ್ಕೆ ಅಂತ್ಯಗೊಂಡಿತು.

1.84 ಲಕ್ಷ ಕೋಟಿ ರು.ನಷ್ಟ
ಬ್ಲೂಚಿಪ್ ಪಟ್ಟಿಯಲ್ಲಿರುವ ಅದಾನಿ ಪೋರ್ಟ್ ಆಂಡ್ ಎಸ್‌ಇಜೆಡ್, ಲಾರ್ಸನ್ ಆಂಡ್ ಟ್ಯೂಬ್ರೊ, ಒಎನ್‌ಜಿಸಿ, ರಿಲಯನ್ಸ್ ಇಂಡಸ್ಟ್ರಿ, ಟಾಟಾ ಸ್ಟೀಲ್ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಶೇ. 3ರಷ್ಟು ಕುಸಿತ ಕಂಡುಬಂತು. ಅಂತೆಯೇ ಒಟ್ಟಾರೆ ವಹಿವಾಟಿನಲ್ಲಿ ಹೂಡಿಕೆದಾರರ ಒಟ್ಟು 1.84 ಲಕ್ಷ ಕೋಟಿ ರು.ನಷ್ಟು ಉಂಟಾಯಿತು.

ತಗ್ಗಿದ ಪ್ರಧಾನಿ ಮೋದಿ ಪ್ರಭಾವ!
2014 ಮೇ 26ರಂದು ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ್ದರು. ಆರ್ಥಿಕ ಅಭಿವೃದ್ಧಿಗೆ ಅವರು ಆದ್ಯತೆ ನೀಡುವ ನಿರೀಕ್ಷೆ ಹೊಂದಿದ್ದ ಕಾರಣ ಷೇರುಪೇಟೆ ದಾಖಲೆಯ  ಮಟ್ಟಕ್ಕೆ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ 2015 ಮಾರ್ಚ್‌ನಲ್ಲಿ ಸೆನ್ಸೆಕ್ಸ್ 30 ಸಾವಿರ ಗಡಿ ದಾಟಿತ್ತು. ನಿಫ್ಟಿ ಕೂಡ 9100 ಮುಟ್ಟಿತ್ತು. ಆ ಬಳಿಕ ಆರಂಭವಾದ ಕುಸಿತ ನಿಯಂತ್ರಣಕ್ಕೆ ಬರಲೇ  ಇಲ್ಲ. ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾಗ ಷೇರು ಮಾರುಕಟ್ಟೆ ಯಾವ ಮಟ್ಟದಲ್ಲಿತ್ತೊ ಈಗ ಪುನಃ ಅದೇ ಮಟ್ಟಕ್ಕೆ ಬಂದು ತಲುಪಿದೆ.

ನೆಲಕಚ್ಚಿದ ಕಚ್ಚಾತೈಲ
ಏಷ್ಯಾ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್‌ಗೆ 28 ಅಮೆರಿಕನ್ ಡಾಲರ್ (1, 903 ರು.) ಗಿಂತ ಕಡಿಮೆಯಾಗುವ ಮೂಲಕ 12 ವರ್ಷದ ಕನಿಷ್ಠ ಮಟ್ಟಕ್ಕೆ ತಲುಪಿದೆ. ಅಮೆರಿಕ  ಮಾರುಕಟ್ಟೆಯಲ್ಲಿ ದಿನದ ಕನಿಷ್ಠ ದರ ಪ್ರತಿ ಬ್ಯಾರಲ್‌ಗೆ 27.55 ಡಾಲರ್ ಆಗಿತ್ತು. 2003 ಸೆಪ್ಟೆಂಬರ್‌ನಲ್ಲಿ ಕಚ್ಚಾತೈಲ ಈ ಮಟ್ಟ ತಲುಪಿತ್ತು. ಕಚ್ಚಾತೈಲ ಪೂರೈಕೆಯಲ್ಲಿ ನಿರಂತರ ಏರಿಕೆ  ಕಂಡುಬರುತ್ತಿರುವ ಕಾರಣ ಮತ್ತು ಬೇಡಿಕೆಯಲ್ಲಿ ಕುಸಿತ ಕಂಡಬಂದ ಹಿನ್ನಲೆಯಲ್ಲಿ ದರ ಕುಸಿಯುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT