ಪತಂಜಲಿ ಜಾಹಿರಾತುಗಳು ಜನರನ್ನು ದಾರಿತಪ್ಪಿಸುತ್ತಿವೆ: ಎಎಸ್ ಸಿಐ 
ವಾಣಿಜ್ಯ

ಪತಂಜಲಿ ಜಾಹಿರಾತುಗಳು ಜನರನ್ನು ದಾರಿತಪ್ಪಿಸುತ್ತಿವೆ: ಎಎಸ್ ಸಿಐ

ಜಾಹಿರಾತು ಗುಣಮಟ್ಟವನ್ನು ಪರೀಕ್ಷಿಸುವ ಸಂಸ್ಥೆ ಎಎಸ್ ಸಿಐ, ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯ ಜಾಹಿರಾತುಗಳ ಬಗ್ಗೆ ತಕರಾರು ತೆಗೆದಿದ್ದು,...

ನವದೆಹಲಿ: ಜಾಹಿರಾತು ಗುಣಮಟ್ಟವನ್ನು ಪರೀಕ್ಷಿಸುವ ಸಂಸ್ಥೆ ಎಎಸ್ ಸಿಐ, ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯ ಜಾಹಿರಾತುಗಳ ಬಗ್ಗೆ ತಕರಾರು ತೆಗೆದಿದ್ದು, ತನಗೆ ಪೈಪೋಟಿ ನೀಡುತ್ತಿರುವ ಸಂಸ್ಥೆಗಳನ್ನು ಹೀಗಳೆಯಲು ಯತ್ನಿಸುತ್ತಿದೆ ಎಂದು ಹೇಳಿದೆ.

ಉಳಿದ ಕಂಪೆನಿಗಳಿಗಿಂತ ತನ್ನ ಕಂಪನಿಯ ಉತ್ಪನ್ನಗಳು ಉತ್ತಮವಾದುದ್ದೆಂದು ಪ್ರಚಾರ ಮಾಡುವ ಭರದಲ್ಲಿ ಪತಂಜಲಿ ಆಯುರ್ವೇದ ತನಗೆ ಪೈಪೋಟಿ ನೀಡುತ್ತಿರುವ ಸಂಸ್ಥೆಗಳನ್ನು ಹೀಗಳೆಯಲು ಯತ್ನಿಸುತ್ತಿರುವುದು ಸೂಕ್ತವಲ್ಲ ಎಂದು ಎಎಸ್ ಸಿಐ ಹೇಳಿದೆ.

ಪತಂಜಲಿ ಉತ್ಪನ್ನಗಳಲ್ಲಿ ಒಂದಾಗಿರುವ ಸಾಸಿವೆ ಎಣ್ಣೆಯ ಜಾಹಿರಾತಿನಲ್ಲಿ ಪತಂಜಲಿ ಸಂಸ್ಥೆ ಬೇರೆಯ ಸಂಸ್ಥೆಗಳು ಮಾರಾಟ ಮಾಡುವ ಸಾಸಿವೆ ಎಣ್ಣೆ ಕಲಬೆರಕೆಯಾಗಿರುತ್ತದೆ ಎಂದು ಜಾಹೀರಾತುಗಳಲ್ಲಿ ಹೇಳಿದೆ. ಆದರೆ ಈ ಅಂಶ ಈವರೆಗೂ ಸಾಬೀತಾಗಿಲ್ಲ. ಅನ್ಯ ಕಂಪನಿಗಳ ಉತ್ಪನ್ನಗಳನ್ನು ಹೀಗಳೆಯುವುದಷ್ಟೇ ಅಲ್ಲದೆ, ಪತಂಜಲಿ ಉತ್ಪನ್ನಗಳು ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಎಎಸ್ ಸಿ ಐ ಹೇಳಿದ್ದು, ಪಂತಂಜಲಿ ಸಂಸ್ಥೆಯ ರೀತಿಯಲ್ಲೇ ಹಲವು ಕಂಪನಿಗಳ ಜಾಹಿರಾತುಗಳ ಬಗ್ಗೆ ಬಂದಿರುವ ದೂರುಗಳನ್ನು ಎಎಸ್ ಸಿ ಐ ಪುರಸ್ಕರಿಸಿದೆ.  ಇನ್ನು ಪತಂಜಲಿ ಆಯುರ್ವೇದದ ದಂತ ಕಾಂತಿ ಟೂತ್ ಪೇಸ್ಟ್ ಸಹ ಜನರನ್ನು ದಾರಿ ತಪ್ಪಿಸುತ್ತಿದ್ದು, ಹಲ್ಲಿನ ಸೂಕ್ಶ್ಮತೆ, ವಸಡುಗಳಲ್ಲಿ ರಕ್ತ ಸ್ರಾವವನ್ನು ತಡೆಯುವುದು ಸೇರಿದಂತೆ ಹಲವು ವಿಷಯಗಳಲ್ಲಿ ಸಂಸ್ಥೆ ಹೇಳಿಕೊಂಡಿರುವ ರೀತಿಯಲ್ಲಿ ಪರಿಣಾಮಕಾರಿಯಾಗಿಲ್ಲ ಎಂದು ಎಎಸ್ ಸಿಐ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

SCROLL FOR NEXT