ಏರ್ ಟೆಲ್, ವೊಡಾಫೋನ್, ಐಡಿಯಾ 3 ಸಾವಿರ ಕೋಟಿ ದಂಡ 
ವಾಣಿಜ್ಯ

ಜಿಯೋ ದೂರು: ಏರ್ ಟೆಲ್, ವೊಡಾಫೋನ್, ಐಡಿಯಾಗೆ 3 ಸಾವಿರ ಕೋಟಿಗೂ ಅಧಿಕ ದಂಡ!

ಉಚಿತ ಕರೆ ಸೇವೆ ಘೋಷಣೆ ಮಾಡಿದ್ದ ಜಿಯೋ ಸಂಸ್ಥೆಗೆ ಸಹಕರಿಸದ ಹಿನ್ನಲೆಯಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಏರ್ ಟೆಲ್, ವೊಡಾಫೋನ್ ಹಾಗೂ ಐಡಿಯಾ ಸಂಸ್ಥೆಗಳಿಗೆ ಬರೊಬ್ಬರಿ 3 ಸಾವಿರ ಕೋಟಿ ದಂಡ ವಿಧಿಸಿದೆ.

ನವದೆಹಲಿ: ಉಚಿತ ಕರೆ ಸೇವೆ ಘೋಷಣೆ ಮಾಡಿದ್ದ ಜಿಯೋ ಸಂಸ್ಥೆಗೆ ಸಹಕರಿಸದ ಹಿನ್ನಲೆಯಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಏರ್ ಟೆಲ್, ವೊಡಾಫೋನ್ ಹಾಗೂ  ಐಡಿಯಾ ಸಂಸ್ಥೆಗಳಿಗೆ ಬರೊಬ್ಬರಿ 3 ಸಾವಿರ ಕೋಟಿ ದಂಡ ವಿಧಿಸಿದೆ.

ರಿಲಯನ್ಸ್ ಜಿಯೋ ಸಂಸ್ಥೆ ನೀಡಿದ್ದ ದೂರಿನ ವಿಚಾರಣೆ ನಡೆಸಿದ ಟ್ರಾಯ್ ನಿನ್ನೆ ತನ್ನ ಅಂತಿಮ ತೀರ್ಪು ನೀಡಿದ್ದು, ಮೂರು ಪ್ರಮುಖ ಟೆಲಿಕಾಮ್ ಸಂಸ್ಥೆಗಳಿಗೆ ಭಾರಿ ದಂಡ ವಿಧಿಸಿದೆ.

ತನ್ನ ಅಗ್ಗದ ಸೇವೆಗಳಿಂದಾಗಿಯೇ ಟೆಲಿಕಾಮ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಜಿಯೋ, ತನ್ನ ಗ್ರಾಹಕರಿಗೆ ಉಚಿತ ಕರೆ ಸೇವೆ ಘೋಷಣೆ ಮಾಡಿತ್ತು. ಈ ಹಿನ್ನಲೆಯಲ್ಲಿ ಏರ್ ಟೆಲ್,  ವೊಡಾಫೋನ್, ಐಡಿಯಾ ಸಂಸ್ಥೆಗಳೊಂದಿಗೆ ಸೇರಿ ಪರಸ್ಪರ ನೆಟ್ವರ್ಕ್ ಸಿಗ್ನಲ್ ಪಡೆಯುವ ಪಿಒಐ (Point of interface) ಒಪ್ಪಂದ ಮಾಡಿಕೊಂಡಿತ್ತು. ಆದರೆ ಜಿಯೋ ಗ್ರಾಹಕರಿಗೆ  ಉತ್ತಮ ನೆಟ್ವರ್ಕ್ ಸಿಗದೇ ಕಾಲ್ ಡ್ರಾಪ್ ಆಗುತ್ತಿರುವ ಕುರಿತು ಸಾಕಷ್ಟು ದೂರುಗಳು ಕೇಳಿಬಂದಿದ್ದವು.

ಈ ಹಿನ್ನಲೆಯಲ್ಲಿ ರಿಲಯನ್ಸ್ ಜಿಯೋ ಟ್ರಾಯ್ ಗೆ ದೂರು ನೀಡಿತ್ತು. ದೂರಿನಲ್ಲಿ ಒಪ್ಪಂದದ ಹೊರತಾಗಿಯೂ ಈ ಸಂಸ್ಥೆಗಳು ನೆಟ್ವರ್ಕ್ ಸೇವೆ ನೀಡುತ್ತಿಲ್ಲ. ಸಂಸ್ಥೆಯ ಮಾರುಕಟ್ಟೆ  ಪೈಪೋಟಿಯನ್ನು ತಡೆಯುವ ನಿಟ್ಟಿನಲ್ಲಿ ಜಿಯೋ ಗ್ರಾಹಕರಿಗೆ ನೆಟ್ವರ್ಕ್ ಸಮಸ್ಯೆಯನ್ನೊಡ್ಡುತ್ತಿವೆ ಎಂದು ಜಿಯೋ ಆರೋಪಿಸಿತ್ತು. ಜಿಯೋ ವಾದಕ್ಕೆ ಮನ್ನಣೆ ನೀಡಿರುವ ಟ್ರಾಯ್  ಏರ್ ಟೆಲ್,  ವೊಡಾಫೋನ್, ಐಡಿಯಾ 3 ಸಾವಿರ ಕೋಟಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಟ್ರಾಯ್ ಆದೇಶದ ವಿರುದ್ಧ ಮೇಲ್ಮನವಿಗೆ ನಿರ್ಧಾರ

ಇನ್ನು ಟ್ರಾಯ್ ನೀಡಿರುವ ದಂಡದ ಆದೇಶದ ವಿರುದ್ಧ  ಏರ್ ಟೆಲ್, ವೊಡಾಫೋನ್, ಐಡಿಯಾ ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದು, ಟ್ರಾಯ್ ಆದೇಶ ಏಕಪಕ್ಷೀಯವಾಗಿದೆ ಎಂದು  ಆರೋಪಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಮಮತಾಗೆ ಬಿಗ್ ಶಾಕ್; TMC ವಿಭಜನೆ? ತೃಣಮೂಲ ಕಾಂಗ್ರೆಸ್ ನ 50 ಶಾಸಕರು, 20 ಸಂಸದರು ಬಿಜೆಪಿ ಸೇರ್ಪಡೆ?

KPCCಗೆ ಮೇಜರ್ ಸರ್ಜರಿ: ನಟಿ ಭಾವನಾ, ನಿಕೇತ್ ರಾಜ್ ಮೌರ್ಯ ಸೇರಿ 31 ಪದಾಧಿಕಾರಿಗಳಿಗೆ ಗೇಟ್‌ಪಾಸ್‌!

ನಾವು ಕಳವಳ ವ್ಯಕ್ತಪಡಿಸಿದೆವು, ಆದ್ರೆ ಸಿದ್ದರಾಮಯ್ಯ ಸೈಲೆಂಟ್ ಆಗಿದ್ದರು: ಸಚಿವ ಎಚ್.ಕೆ.ಪಾಟೀಲ್

ಗ್ಯಾಂಗ್ ರೇಪ್ ಪ್ರಕರಣ: ವಿವಾದಿತ ದೇವಮಾನವ Asaram Bapu ಖುಲಾಸೆ

SCROLL FOR NEXT