ಸಂಗ್ರಹ ಚಿತ್ರ 
ವಾಣಿಜ್ಯ

ಮೇ 14ರಿಂದ ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳ ಪೆಟ್ರೋಲ್ ಪಂಪ್ ಗಳಿಗೆ ಭಾನುವಾರ ರಜೆ

ಪ್ರಧಾನಿ ನರೇಂದ್ರ ಮೋದಿ ಅವರ ತೈಲ ಉಳಿಸಿ ಕರೆಗೆ ಬೆಲೆ ನೀಡಿರುವ ಪೆಟ್ರೋಲ್ ಬಂಕ್ ಮಾಲೀಕರ ಒಕ್ಕೂಟ ಇನ್ನು ಮುಂದೆ ಪ್ರತೀ ಭಾನುವಾರದಂದು ಪೆಟ್ರೋಲ್ ಬಂಕ್ ಗಳ ಸ್ಥಗಿತಗೊಳಿಸಲು ನಿರ್ಧರಿಸಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತೈಲ ಉಳಿಸಿ ಕರೆಗೆ ಬೆಲೆ ನೀಡಿರುವ ಪೆಟ್ರೋಲ್ ಬಂಕ್ ಮಾಲೀಕರ ಒಕ್ಕೂಟ ಇನ್ನು ಮುಂದೆ ಪ್ರತೀ ಭಾನುವಾರದಂದು ಪೆಟ್ರೋಲ್ ಬಂಕ್ ಗಳ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಮೂಲಗಳ ಪ್ರಕಾರ ಮುಂಬರುವ ಮೇ 14ರಿಂದಲೇ ಪೆಟ್ರೋಲ್ ಬಂಕ್ ಮಾಲೀಕರು ಪ್ರತೀ ಭಾನುವಾರ ಪೆಟ್ರೋಲ್ ಬಂಕ್ ಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಒಟ್ಟು 8 ರಾಜ್ಯಗಳಲ್ಲಿ ಭಾನುವಾರದಂದು ಪೆಟ್ರೋಲ್ ಬಂಕ್  ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಈ ಪೈಕಿ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಪುದುಚೇರಿ. ಕೇರಳ, ತೆಲಂಗಾಣ, ಹರ್ಯಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಮೇ 14ರಿಂದ ಪ್ರತೀ ಭಾನುವಾರದ 24 ಗಂಟೆಗಳ  ಪೆಟ್ರೋಲ್ ಬಂಕ್ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕುಮಾರ್ ಅವರು, ಈ ಹಿಂದೆ ಕೆಲ ವರ್ಷಗಳ ಹಿಂದೆಯೇ ನಾವು ಪ್ರತೀ ಭಾನುವಾರ ಪೆಟ್ರೋಲ್  ಬಂಕ್ ಸ್ಥಗಿತಕ್ಕೆ ನಿರ್ಧರಿಸಿದ್ದೆವು. ಆದರೆ ಪೆಟ್ರೋಲಿಯಂ ಉತ್ಪನ್ನ ಸಂಸ್ಥೆಗಳ ಮನವಿ ಮೇರೆಗೆ ಈ ನಿರ್ಧಾರವನ್ನು ಮೂಂದೂಡುತ್ತಾ ಬಂದಿದ್ದೆವು. ಇದೀಗ ಮೇ 14ರಿಂದ ಪ್ರತೀ ಭಾನುವಾರ ಬಂಕ್ ಸ್ಥಗಿತಗೊಳಿಸುತ್ತಿದ್ದೇವೆ ಎಂದು  ಹೇಳಿದ್ದಾರೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕೊರೆತ ಕುರಿತು ಮಾತನಾಡಿದ್ದರು. ಅಂತೆಯೇ ಮುಂದಿನ ಪೀಳಿಗೆ ಪೆಟ್ರೋಲ್ ಉಳಿಸುವ ನಿಟ್ಟಿನಲ್ಲಿ ಕ್ರಮ  ಕೈಗೊಳ್ಳಬೇಕಿದೆ ಎಂದು ಹೇಳಿದ್ದರು. ಅವರ  ಮಾತಿನಂತೆ ಮುಂದಿನ ಪೀಳಿಗೆ ಪೆಟ್ರೋಲಿಯಂ ಉತ್ಪನ್ನ ಉಳಿಸುವ ಉದ್ದೇಶದಿಂದ ಪ್ರತೀ ಭಾನುವಾರ ಬಂಕ್ ಗಳ ಸ್ಥಗಿತಕ್ಕೆ ನಿರ್ಧರಿಸಲಾಗಿದೆ. ಒಕ್ಕೂಟದ ಅಡಿಯಲ್ಲಿ ಸುಮಾರು 20  ಸಾವಿರ ಬಂಕ್ ಗಳಿದ್ದು, ಎಲ್ಲ ಬಂಕ್ ಗಳ ಮಾಲೀಕರು ಒಕ್ಕೂಟದ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು.

ಒತ್ತೂಟದ ನಿರ್ಧಾರದಿಂದಾಗಿ ಸುಮಾರು 150 ಕೋಟಿ ರುಗಳಷ್ಟು ನಷ್ಟ ಸಂಭವಿಸಬಹುದು. ಆದರೆ ಪ್ರತೀಭಾನುವಾರ ಶೇ.40ರಷ್ಟು ಪೆಟ್ರೋಲ್ ಮಾರಾಟ ಕುಸಿದಿರುತ್ತದೆ. ಬಂಕ್ ಸ್ಥಗಿತದ ದಿನ ಓರ್ವ ಸಿಬ್ಬಂದಿ ಇದ್ದರೆ ಸಾಕು, ಆದರೆ  ಸಾಮಾನ್ಯ ದಿನಗಳಲ್ಲಿ 15 ಮಂದಿ ಬೇಕಾಗುತ್ತದೆ. ತೀರಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ  ಮಾತ್ರ ರಜಾದಿನಗಳಲ್ಲಿ ಪೆಟ್ರೋಲ್ ಮಾರಾಟಕ್ಕೆ ಅನುಮತಿ ನೀಡಲಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು.  

ಭಾನುವಾರದಂದು ವಹಿವಾಟು ಕುಂಠಿತವಾಗಿರುವುದರಿಂದ ಬಂಕ್ ಸ್ಥಗಿತದಿಂದ ಉದ್ಯಮದ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ ಎಂದೆನಿಸುತ್ತದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!