ಆಥಾರ್-ಪಾನ್ ಜೋಡಣೆ ಮುಂದುವರಿಯಲಿದೆ: 
ವಾಣಿಜ್ಯ

ಆಧಾರ್-ಪಾನ್ ಜೋಡಣೆ ಮುಂದುವರಿಯಲಿದೆ: ಯುಐಡಿಎಐ ಸಿಇಒ

ಬಯೋಮೆಟ್ರಿಕ್ ಐಡೆಂಟಿಫೈಯರ್ ಆಧಾರ್ ಜೊತೆಗೆ ಪ್ಯಾನ್ ಅನ್ನು ಜೋಡಿಸುವ ಕೆಲಸ ಈ ಹಿಂದಿನ ನಿರ್ದೇಶನದಂತೆಯೇ ಮುಂದುವರಿಯಲಿದೆ,

ಹೊಸದಿಲ್ಲಿ: ಬಯೋಮೆಟ್ರಿಕ್ ಐಡೆಂಟಿಫೈಯರ್ ಆಧಾರ್ ಜೊತೆಗೆ ಪ್ಯಾನ್ ಅನ್ನು ಜೋಡಿಸುವ ಕೆಲಸ ಈ ಹಿಂದಿನ ನಿರ್ದೇಶನದಂತೆಯೇ ಮುಂದುವರಿಯಲಿದೆ, ವಿವಿಧ ಸರ್ಕಾರಿ ಸಬ್ಸಿಡಿಗಳನ್ನು ಪಡೆಯಲು 12-ಅಂಕಿಯ ಆಧಾರ್ ಸಂಖ್ಯೆಯನ್ನು ಹೊಂದಿರುವುದು ಅಗತ್ಯ ಎಂದು ಯುಐಡಿಎಐ ಸಿಇಒ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.
ಖಾಸಗಿತನ ಮೂಲಭೂತ ಹಕ್ಕು ಎನ್ನುವ ವ ಸುಪ್ರೀಂ ಕೋರ್ಟ್ ತೀರ್ಪು ಆಧಾರ್ ಮತ್ತು ಪ್ಯಾನ್ ನಂಬರ್ ಜೋಡಣೆ ಮೇಲೆ ಯಾವ ಪರಿಣಾಮ ಉಂಟು ಮಾಡಿಲ್ಲ, ಸಬ್ಸಿಡಿ ಸಹಿತ ಅಡುಗೆ ಅನಿಲವನ್ನು ಪಡೆಯಲು, ಬ್ಯಾಂಕಿನ ಖಾತೆ ತೆರೆಯಲು ಮತ್ತು ಹೊಸ ಫೋನ್ ಸಂಖ್ಯೆಯನ್ನು ಪಡೆದುಕೊಳ್ಳುವುದು ಸೇರಿ ವಿವಿಧ ಸೇವೆಗಳಿಗೆ ಆಧಾರ್ ಕಡ್ದಾಯವಾಗಿದೆ. ಆಧಾರ್ ಅಧಿನಿಯಮವು ಖಾಸಗಿತನದ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದು ಅವರು ಹೇಳಿದರು.
ಜನರ ಖಾಸಗಿ ಮಾಹಿತಿಯನ್ನು ನಾವೆರಂದೂ ಬಹಿರಂಗಪಡಿಸುವುದಿಲ್ಲ ಎಂದು ಪಾಂಡೆ ಪಿಟಿಐಗೆ ತಿಳಿಸಿದ್ದಾರೆ. ಇಂದಿನ ಸುಪ್ರೀಂ ಕೋರ್ಟ್ ತೀರ್ಪು ಆಧಾರ್ ಕಾಯ್ದೆ ಬಗ್ಗೆ ಏನನ್ನೂ ಹೇಳಲಿಲ್ಲ, ಆದ್ದರಿಂದ ಆಧಾರ್ ಕಾಯ್ದೆ ಸಂಸತ್ತು ಜಾರಿಗೊಳಿಸಿದ ಕಾಯ್ದೆ ಆಗಿದೆ  ಇದು ಈ ನೆಲದ ಕಾನೂನುಯಾಗಿದೆ ಎಂದು ಅವರು ಹೇಳಿದರು.
ಆಧಾರ್ ಅಧಿನಿಯಮದ ಸೆಕ್ಷನ್ 7 "ಕೆಲವು ಸಬ್ಸಿಡಿಯನ್ನು ಪಡೆದುಕೊಳ್ಳಲು ಅಥವಾ ಸರ್ಕಾರದ ಯೋಜನೆಗಳ ಪ್ರಯೋಜನಕ್ಕಾಗಿ ಆಧಾರ್ ಸಂಖ್ಯೆಯನ್ನು ಕೇಳಬಹುದು ಎಂದು ಸೂಚಿಸುತ್ತದೆ" ಎಂದು ಅವರು ಹೇಳಿದರು. ಇಂದಿನ ಆದೇಶದ ಹಿನ್ನೆಲೆಯಲ್ಲಿ ಯಾರಾದರೂ ತಮ್ಮ ವಿವರಗಳನ್ನು ನೀಡಲು ನಿರಾಕರಿಸಬಹುದೆ ಎಂದು ಕೇಳಿದಾಗ ಅವರು, "ಇಂದಿನವರೆಗೂ, ಆಧಾರ್ ಕಾಯ್ದೆಯು ಮಾನ್ಯತೆ ಹೊಂದಿದ ಕಾಯಿದೆ ಆಗಿದೆ ಮತ್ತು ಈ ತೀರ್ಪು ಆಧಾರ್ ಅಧಿನಿಯಮದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಆಧಾರ್ ದಾಖಲಾತಿ ನಿಲ್ಲುವುದಿಲ್ಲ ಎಂದು ಪಾಂಡೆ ಹೇಳಿದರು. ಆದಾಯ ತೆರಿಗೆ ಪಾವತಿದಾರರಿಗೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಜೊತೆಗೆ ಆಧಾರ್ ಸಂಪರ್ಕಿಸುವುದನ್ನು ಕಡ್ಡಾಯಗೊಳಿಸಲಾಗಿದೆದ್, ಆದಾಯ ತೆರಿಗೆ ಕಾಯಿದೆಯ ತಿದ್ದುಪಡಿಯಿಂದೀ ನಿಬಂಧನೆ ಜಾರಿಯಾಗಿದೆ ಎಂದು ಅವರು ಹೇಳಿದರು. "ಕಾನೂನಿನ ಅಡಿಯಲ್ಲಿ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದು ಮುಂದುವರಿಯುತ್ತದೆ, ಅದರಲ್ಲಿ ಯಾವುದೇ ಬದಲಾವಣೆಗಳಿಲ್ಲ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!