ಪೇಟಿಎಂ 
ವಾಣಿಜ್ಯ

ಪೇಟಿಎಂ ನಿಂದ ಪೇಮೆಂಟ್ಸ್ ಬ್ಯಾಂಕ್ ಪ್ರಾರಂಭ: ಠೇವಣಿ ಮೇಲೆ ಶೇ.4 ರಷ್ಟು ಬಡ್ಡಿದರ, ಕ್ಯಾಶ್ ಬ್ಯಾಕ್ ಆಫರ್

2020 ರ ವೇಳೆಗೆ 500 ಮಿಲಿಯನ್ ಗ್ರಾಹಕರನ್ನು ಹೊಂದುವ ಗುರಿಯೊಂದಿಗೆ ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ್ನು ಪ್ರಾರಂಭಿಸಿದೆ.

ನವದೆಹಲಿ: 2020 ರ ವೇಳೆಗೆ 500 ಮಿಲಿಯನ್ ಗ್ರಾಹಕರನ್ನು ಹೊಂದುವ ಗುರಿಯೊಂದಿಗೆ ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ್ನು ಪ್ರಾರಂಭಿಸಿದ್ದು, ಠೇವಣಿ ಮೇಲೆ ವಾರ್ಷಿಕ ಶೇ.4 ರಷ್ಟು ಬಡ್ಡಿ ನೀಡುವುದು ಹಾಗೂ ಕ್ಯಾಶ್ ಬ್ಯಾಕ್ ಆಫರ್, ಉಚಿತ ಆನ್ ಲೈನ್ ವಹಿವಾಟು ಸೇರಿದಂತೆ ಆಕರ್ಷಕ ಸೌಲಭ್ಯಗಳನ್ನು ಘೋಷಿಸಿದೆ. 
ಚೀನಾದ ಆಲಿಬಾಬಾ ಹಾಗೂ ಜಪಾನ್ ನ ಕಾಂಗ್ಲೋಮೆರೇಟ್ ಸಾಫ್ಟ್ ಬ್ಯಾಂಕ್ ನ ಸಹಭಾಗಿತ್ವ ಹೊಂದಿರುವ ಪೇಟಿಎಂ ಪೇಮೆಂಟ್ ಬ್ಯಾಂಕ್ ನ ನೆಟ್ವರ್ಕ್ ನ್ನು ನಿರ್ಮಿಸಲು ಮುಂದಿನ 2 ವರ್ಷಗಳಿಗೆ 400 ಕೋಟಿಯನ್ನು ಹೂಡಲಿದೆ.  ಭಾರತದಲ್ಲಿ ಏರ್ ಟೆಲ್ ಹಾಗೂ ಇಂಡಿಯಾ ಪೋಸ್ಟ್ ನ ನಂತರ ಪೇಮೆಂಟ್ಸ್ ಬ್ಯಾಂಕ್ ನ್ನು ಪ್ರಾರಂಭಿಸುತ್ತಿರುವ ಮೂರನೇ ಸಂಸ್ಥೆ ಪೇಟಿಎಂ ಆಗಿದೆ. 
ವಿಶ್ವದಲ್ಲೇ ವಿನೂತನ ಬ್ಯಾಂಕಿಂಗ್ ಮಾಡೆಲ್ ನ್ನು ಪರಿಚಯಿಸಲು ಆರ್ ಬಿಐ ನಮಗೆ ಅವಕಾಶ ನೀಡಿದೆ. ಗ್ರಾಹಕರ ಠೇವಣಿಯನ್ನು ಸರ್ಕಾರಿ ಬಾಂಡ್ ಗಳಲ್ಲಿ ಸುರಕ್ಷಿತವಾಗಿ ಹೂಡಿಕೆ ಮಾಡಿ ದೇಶ ನಿರ್ಮಾಣಕ್ಕೆ ಸಹಕರಿಸುತ್ತೆವೆ ಎಂದು ಪೇಟಿಎಂ ನ ಪೇಮೆಂಟ್ಸ್ ಬ್ಯಾಂಕ್ ಅಧ್ಯಕ್ಷ ವಿಜಯ್ ಶೇಖರ್ ಶರ್ಮಾ ಹೇಳಿದ್ದಾರೆ. 
ಪೇಟಿಎಂ ಸಂಸ್ಥೆ ಪ್ರಸ್ತುತ 220 ಡಿಜಿಟಲ್ ವಾಲೆಟ್ ನ್ನು ಬಳಕೆ ಮಾಡುವ ಗ್ರಾಹಕರನ್ನು ಹೊಂದಿದೆ. ಡಿಜಿಟಲ್ ವಾಲೆಟ್ ಗಳನ್ನು ಪೇಮೆಂಟ್ಸ್ ಬ್ಯಾಂಕ್ ಗೆ ವರ್ಗಾವಣೆ ಮಾಡಲಾಗುತ್ತದೆ. ನಂತರ ಗ್ರಾಹಕರು ಬ್ಯಾಂಕ್ ಖಾತೆಯನ್ನು ತೆರೆಯಬೇಕಾದರೆ ಕೆವೈಸಿ(ನಿಮ್ಮ ಗ್ರಾಹಕರನ್ನು ಅರಿಯಿರಿ-ಕೆವೈಸಿ) ನಿಯಮಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ದೇಶಾದ್ಯಂತ ಇದಕ್ಕಾಗಿ ಕೆವೈಸಿ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಪೇಟಿಎಂ ತಿಳಿಸಿದೆ. 
ಮೊದಲ ಹಂತದಲ್ಲಿ ಆಹ್ವಾನದ ಆಧಾರದಲ್ಲಿ ಮಾತ್ರ ಪೇಟಿಎಂ ನಲ್ಲಿ ಖಾತೆ ತೆರಯಬಹುದಾಗಿದೆ. ಪೇಟಿಎಂ ನ ಉದ್ಯೋಗಿಗಳಿಗೆ ಸಂಸ್ಥೆ ಬೀಟಾ ಬ್ಯಾಂಕಿಂಗ್ ಆಪ್ ನ್ನು ಪರಿಚಯಿಸಲಿದ್ದು 2020 ರ ವೇಳೆಗೆ 500 ಮಿಲಿಯನ್ ಭಾರತೀಯರನ್ನು ಗ್ರಾಹಕರನ್ನಾಗಿಸಿಕೊಳ್ಳುವುದು ಪೇಮೆಂಟ್ಸ್ ಬ್ಯಾಂಕ್ ನ ಗುರಿಯಾಗಿದೆ. 
ಗ್ರಾಹಕರು ತಮ್ಮ ಖಾತೆಗೆ 25,000 ರೂಪಾಯಿ ಠೇವಣಿ ಮಾಡುತ್ತಿದ್ದಂತೆಯೇ ಅವರಿಗೆ 250 ರೂಪಾಯಿ ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ ಹಾಗೂ ಜಿರೋ ಬ್ಯಾಲೆನ್ಸ್, ಉಚಿತ ದರದಲ್ಲಿ ಆನ್ ಲೈನ್ ವಹಿವಾಟುಗಳ ಸೌಲಭ್ಯವನ್ನೂ ಒದಗಿಸಲಾಗುತ್ತದೆ ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT