ಸಾಂದರ್ಭಿಕ ಚಿತ್ರ 
ವಾಣಿಜ್ಯ

ಆಧಾರ್ ಕಾರಣಕ್ಕಾಗಿ ಮಾಸಿಕ ಪಿಂಚಣಿ ನಿರಾಕರಿಸಬೇಡಿ: ಬ್ಯಾಂಕ್ ಗಳಿಗೆ ನೌಕರರ ಭವಿಷ್ಯನಿಧಿ ಸಂಸ್ಥೆ ಮನವಿ

ಆಧಾರ್ ಕಾರ್ಡು ಇಲ್ಲವೆಂದು ಬ್ಯಾಂಕುಗಳು ತಿಂಗಳ ಪಿಂಚಣಿ ಭತ್ಯೆಯನ್ನು ಪಿಂಚಣಿದಾರರಿಗೆ ...

ನವದೆಹಲಿ: ಆಧಾರ್ ಕಾರ್ಡು ಇಲ್ಲವೆಂದು ಬ್ಯಾಂಕುಗಳು ತಿಂಗಳ ಪಿಂಚಣಿ ಭತ್ಯೆಯನ್ನು ಪಿಂಚಣಿದಾರರಿಗೆ ಕೊಡದೆ ನಿರಾಕರಿಸಬಾರದು ಎಂದು ಉದ್ಯೋಗ ಭವಿಷ್ಯನಿಧಿ ಸಂಸ್ಥೆ(ಇಪಿಎಫ್ಒ) ಮನವಿ ಮಾಡಿದೆ. ಅಗತ್ಯಬಿದ್ದರೆ ಪಿಂಚಣಿದಾರರ ಬದಲಿ ಗುರುತು ಪತ್ರವನ್ನು ಬಳಸಬೇಕೆಂದು ಅದು ಹೇಳಿದೆ.

ಪಿಂಚಣಿ ವಿತರಣೆಯ ಎಲ್ಲಾ ಬ್ಯಾಂಕುಗಳು ಮತ್ತು ಅಂಚೆಸೇವೆಗಳಿಗೆ ನಿನ್ನೆ ಸುತ್ತೋಲೆ ಹೊರಡಿಸಿರುವ ಉದ್ಯೋಗ ಭವಿಷ್ಯನಿಧಿ ಸಂಸ್ಥೆ, ಆಧಾರ್ ಕಾರ್ಡು ಹೊಂದಿಲ್ಲದಿರುವ ಪಿಂಚಣಿದಾರರಿಗೆ ಬದಲಿ ವ್ಯವಸ್ಥೆ ಮಾಡುವ ಪಟ್ಟಿಯನ್ನು ತಯಾರಿಸಿದೆ.

ಆಧಾರ್ ನೋಂದಣಿ ಮಾಡಿಸಿಕೊಳ್ಳಲು ಪಿಂಚಣಿದಾರರಿಗೆ ಬ್ಯಾಂಕು ವ್ಯವಸ್ಥೆ ಮಾಡಿಕೊಡಬೇಕೆಂದು ಕೂಡ ಸಂಸ್ಥೆ ಸೂಚಿಸಿದೆ. ಆಧಾರ್ ಗೆ ನೋಂದಣಿ ಮಾಡಿಕೊಂಡಿರುವ ಪಿಂಚಣಿದಾರರ ಪೇಪರ್ ಸರ್ಟಿಫಿಕೇಟ್ ಗಳನ್ನು ಸ್ವೀಕರಿಸಬಹುದು ಎಂದು ಕೂಡ ಹೇಳಿದೆ. ಅದು ಡಿಜಿಟಲ್ ಚಾಲಿತ ಪ್ರಮಾಣಪತ್ರದ ಮೌಲ್ಯವನ್ನು ಹೊಂದಿರುತ್ತದೆ.

ಪಿಂಚಣಿಯನ್ನು ವಿತರಿಸಲು ಬ್ಯಾಂಕು ಜೊತೆಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಬ್ಯಾಂಕಿನ ಜವಾಬ್ದಾರಿಗಳು ಮತ್ತು ಕರ್ತವ್ಯಗಳು ಸೇರಿಕೊಂಡಿವೆ. ನಿವೃತ್ತಿ ವೇತನದಾರರಿಂದ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಬದುಕಿರುವ ಪ್ರಮಾಣಪತ್ರ / ಮರು ಮದುವೆಯಾಗಿಲ್ಲದಿರುವ ಪ್ರಮಾಣಪತ್ರ ಇತ್ಯಾದಿಗಳನ್ನು ಪಿಂಚಣಿದಾರರಿಂದ ಪಡೆದು ಅಗತ್ಯ ಕ್ರಮಗಳಿಗೆ ಭವಿಷ್ಯನಿಧಿ ಸಂಸ್ಥೆಗಳಿಗೆ ನೀಡಬೇಕಾಗುತ್ತದೆ.

ಬ್ಯಾಂಕುಗಳ ಸಂಬಂಧಪಟ್ಟ ಶಾಖೆಗಳು ಪತ್ರ ವಿಧಾನದಲ್ಲಿ ಬದುಕಿರುವ ಪ್ರಮಾಣಪತ್ರವನ್ನು ನೀಡುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT