ಸಾಂದರ್ಭಿಕ ಚಿತ್ರ 
ವಾಣಿಜ್ಯ

ಆಧಾರ್ ಕಾರಣಕ್ಕಾಗಿ ಮಾಸಿಕ ಪಿಂಚಣಿ ನಿರಾಕರಿಸಬೇಡಿ: ಬ್ಯಾಂಕ್ ಗಳಿಗೆ ನೌಕರರ ಭವಿಷ್ಯನಿಧಿ ಸಂಸ್ಥೆ ಮನವಿ

ಆಧಾರ್ ಕಾರ್ಡು ಇಲ್ಲವೆಂದು ಬ್ಯಾಂಕುಗಳು ತಿಂಗಳ ಪಿಂಚಣಿ ಭತ್ಯೆಯನ್ನು ಪಿಂಚಣಿದಾರರಿಗೆ ...

ನವದೆಹಲಿ: ಆಧಾರ್ ಕಾರ್ಡು ಇಲ್ಲವೆಂದು ಬ್ಯಾಂಕುಗಳು ತಿಂಗಳ ಪಿಂಚಣಿ ಭತ್ಯೆಯನ್ನು ಪಿಂಚಣಿದಾರರಿಗೆ ಕೊಡದೆ ನಿರಾಕರಿಸಬಾರದು ಎಂದು ಉದ್ಯೋಗ ಭವಿಷ್ಯನಿಧಿ ಸಂಸ್ಥೆ(ಇಪಿಎಫ್ಒ) ಮನವಿ ಮಾಡಿದೆ. ಅಗತ್ಯಬಿದ್ದರೆ ಪಿಂಚಣಿದಾರರ ಬದಲಿ ಗುರುತು ಪತ್ರವನ್ನು ಬಳಸಬೇಕೆಂದು ಅದು ಹೇಳಿದೆ.

ಪಿಂಚಣಿ ವಿತರಣೆಯ ಎಲ್ಲಾ ಬ್ಯಾಂಕುಗಳು ಮತ್ತು ಅಂಚೆಸೇವೆಗಳಿಗೆ ನಿನ್ನೆ ಸುತ್ತೋಲೆ ಹೊರಡಿಸಿರುವ ಉದ್ಯೋಗ ಭವಿಷ್ಯನಿಧಿ ಸಂಸ್ಥೆ, ಆಧಾರ್ ಕಾರ್ಡು ಹೊಂದಿಲ್ಲದಿರುವ ಪಿಂಚಣಿದಾರರಿಗೆ ಬದಲಿ ವ್ಯವಸ್ಥೆ ಮಾಡುವ ಪಟ್ಟಿಯನ್ನು ತಯಾರಿಸಿದೆ.

ಆಧಾರ್ ನೋಂದಣಿ ಮಾಡಿಸಿಕೊಳ್ಳಲು ಪಿಂಚಣಿದಾರರಿಗೆ ಬ್ಯಾಂಕು ವ್ಯವಸ್ಥೆ ಮಾಡಿಕೊಡಬೇಕೆಂದು ಕೂಡ ಸಂಸ್ಥೆ ಸೂಚಿಸಿದೆ. ಆಧಾರ್ ಗೆ ನೋಂದಣಿ ಮಾಡಿಕೊಂಡಿರುವ ಪಿಂಚಣಿದಾರರ ಪೇಪರ್ ಸರ್ಟಿಫಿಕೇಟ್ ಗಳನ್ನು ಸ್ವೀಕರಿಸಬಹುದು ಎಂದು ಕೂಡ ಹೇಳಿದೆ. ಅದು ಡಿಜಿಟಲ್ ಚಾಲಿತ ಪ್ರಮಾಣಪತ್ರದ ಮೌಲ್ಯವನ್ನು ಹೊಂದಿರುತ್ತದೆ.

ಪಿಂಚಣಿಯನ್ನು ವಿತರಿಸಲು ಬ್ಯಾಂಕು ಜೊತೆಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಬ್ಯಾಂಕಿನ ಜವಾಬ್ದಾರಿಗಳು ಮತ್ತು ಕರ್ತವ್ಯಗಳು ಸೇರಿಕೊಂಡಿವೆ. ನಿವೃತ್ತಿ ವೇತನದಾರರಿಂದ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಬದುಕಿರುವ ಪ್ರಮಾಣಪತ್ರ / ಮರು ಮದುವೆಯಾಗಿಲ್ಲದಿರುವ ಪ್ರಮಾಣಪತ್ರ ಇತ್ಯಾದಿಗಳನ್ನು ಪಿಂಚಣಿದಾರರಿಂದ ಪಡೆದು ಅಗತ್ಯ ಕ್ರಮಗಳಿಗೆ ಭವಿಷ್ಯನಿಧಿ ಸಂಸ್ಥೆಗಳಿಗೆ ನೀಡಬೇಕಾಗುತ್ತದೆ.

ಬ್ಯಾಂಕುಗಳ ಸಂಬಂಧಪಟ್ಟ ಶಾಖೆಗಳು ಪತ್ರ ವಿಧಾನದಲ್ಲಿ ಬದುಕಿರುವ ಪ್ರಮಾಣಪತ್ರವನ್ನು ನೀಡುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ