ಸಾಂದರ್ಭಿಕ ಚಿತ್ರ 
ವಾಣಿಜ್ಯ

ನಗದು ಬಿಕ್ಕಟ್ಟು: 500 ರು. ಮುಖಬೆಲೆಯ ನೋಟುಗಳ ಮುದ್ರಣ ಐದು ಪಟ್ಟು ಹೆಚ್ಚಳ

ನೋಟು ನಿಷೇಧದ ನಂತರ ದೇಶದ ಹಲವು ರಾಜ್ಯಗಳಲ್ಲಿ ಮತ್ತೊಮ್ಮೆ ನಗದು ಬಿಕ್ಕಟ್ಟು ಸೃಷ್ಟಿಯಾಗಿದ್ದು,....

ನವದೆಹಲಿ: ನೋಟು ನಿಷೇಧದ ನಂತರ ದೇಶದ ಹಲವು ರಾಜ್ಯಗಳಲ್ಲಿ ಮತ್ತೊಮ್ಮೆ ನಗದು ಬಿಕ್ಕಟ್ಟು ಸೃಷ್ಟಿಯಾಗಿದ್ದು, ನೋಟುಗಳ ಕೊರತೆ ನೀಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ, 500 ರುಪಾಯಿ ನೋಟುಗಳ ಮುದ್ರಣವನ್ನು ಐದು ಪಟ್ಟು ಹೆಚ್ಚಿಸಲು ನಿರ್ಧರಿಸಿದೆ.
ಸದ್ಯ ದಿನಕ್ಕೆ 500 ನೋಟುಗಳನ್ನು 500 ಕೋಟಿ ರುಪಾಯಿಯಷ್ಟು ಮುದ್ರಣ ಮಾಡಲಾಗುತ್ತಿದೆ. ಇದನ್ನು ಐದು ಪಟ್ಟು ಹೆಚ್ಚಳ ಮಾಡಲಾಗುವುದು ಎಂದು ಆರ್ಥಿಕ ವ್ಯವಹಾರ ಇಲಾಖೆ ಕಾರ್ಯದರ್ಶಿ ಎಸ್.ಸಿ. ಗಾರ್ಗ್‌ ಅವರು ತಿಳಿಸಿದ್ದಾರೆ.
ನೋಟುಗಳ ಕೊರತೆ ನೀಗಿಸಲು ನಾವು ಕೆಲವೊಂದು ಉಪ ಕ್ರಮಗಳನ್ನು ತೆಗೆದುಕೊಂಡಿದೇವೆ. 500 ರುಪಾಯಿ ನೋಟುಗಳ ಮುದ್ರಣ ಐದು ಪಟ್ಟು ಹೆಚ್ಚಳವಾದರೆ ದಿನಕ್ಕೆ 2,500 ಕೋಟಿ ರುಪಾಯಿಷ್ಟು ನೋಟುಗಳು ಮುದ್ರಣವಾಗಲಿವೆ. ಈ ಮೂಲಕ ತಿಂಗಳಿಗೆ 70 ಸಾವಿರದಿಂದ 75 ಸಾವಿರ ಕೋಟಿ ರುಪಾಯಿ ನೋಟುಗಳು ಚಲಾವಣೆಗೆ ಸಿದ್ಧವಾಗಲಿವೆ ಎಂದು ಗಾರ್ಗ್ ಮಾಹಿತಿ ನೀಡಿದ್ದಾರೆ.
ಮುಂದಿನ ಎರಡು ದಿನಗಳಲ್ಲೇ 25 ಸಾವಿರ ನೋಟುಗಳು ಚಲಾವಣೆಗೆ ಬರಲಿವೆ ಎಂದು ಅವರು ತಿಳಿಸಿದ್ದಾರೆ.
ದೇಶಾದ್ಯಂತ ಎಟಿಎಂಗಳಲ್ಲಿ ನೋಟುಗಳೇ ಇಲ್ಲದಂತಾಗಿದೆ. ಎಲ್ಲೆಡೆಯೂ ನೋ ಕ್ಯಾಷ್‌ ಬೋರ್ಡ್‌ ರಾರಾಜಿಸುತ್ತಿದ್ದು, ಹಣಕ್ಕಾಗಿ ಜನ ಪರದಾಡುವಂತಾಗಿದೆ. 
ದೇಶದಲ್ಲಿನ ನಗದು ಬಿಕ್ಕಟ್ಟಿನ ಬಗ್ಗೆ ಪರಾಮರ್ಶೆ ನಡೆಸಲಾಗಿದ್ದು, ದೇಶದಲ್ಲಿ ಸಾಕಷ್ಟು ಕರೆನ್ಸಿ ಚಲಾವಣೆಯಲ್ಲಿದೆ. ಇನ್ನು ತಾತ್ಕಾಲಿಕ ನಗದು ಕೊರತೆ ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT