ಟ್ವಿಟ್ಟರ್ ತ್ರೈಮಾಸಿಕ ವರದಿ: ಲಾಭಗಳಿಕೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಸಾಮಾಜಿಕ ತಾಣ 
ವಾಣಿಜ್ಯ

ಟ್ವಿಟ್ಟರ್ ತ್ರೈಮಾಸಿಕ ವರದಿ: ಲಾಭಗಳಿಕೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಸಾಮಾಜಿಕ ತಾಣ

ಜನಪ್ರಿಯ ಸಾಮಾಜಿಕ ತಾಣ ಟ್ವಿಟ್ಟರ್ ಇದೇ ಮೊದಲ ಬಾರಿಗೆ ತ್ರೈಮಾಸಿಕ ಲಾಭ ಗಳಿಸಿಕೊಂಡಿರುವುದಾಗಿ ಪ್ರಕಟಣೆ ತಿಳಿಸಿದೆ.

ವಾಷಿಂಗ್ ಟನ್: ಜನಪ್ರಿಯ ಸಾಮಾಜಿಕ ತಾಣ ಟ್ವಿಟ್ಟರ್ ಇದೇ ಮೊದಲ ಬಾರಿಗೆ ತ್ರೈಮಾಸಿಕ ಲಾಭ ಗಳಿಸಿಕೊಂಡಿರುವುದಾಗಿ  ಪ್ರಕಟಣೆ ತಿಳಿಸಿದೆ. ನಾಲ್ಕನೇ ತ್ರೈಮಾಸಿಕದಲ್ಲಿ 91 ಮಿಲಿಯನ್ ಡಾಲರ್ ಗಳಿಕೆಯಾಗಿದ್ದು, 2013ರ ತರುವಾಯ ಸಂಸ್ಥೆಗೆ ದೊರಕಿದ ಮೊದಲ ಧನಾತ್ಮಕ ನಿವ್ವಳ ಆದಾಯ ಇದೆಂದು  ಸ್ಯಾನ್ ಫ್ರಾನಿಸ್ಸ್ಕೋ ಮೂಲದ ಸಂಸ್ಥೆ ಹೇಳಿದೆ.
ಟ್ವಿಟರ್ ಷೇರುಗಳು 12 ಪ್ರತಿಶತದಷ್ಟು ಏರಿಕೆ ಕಂಡಿದ್ದು 30.18 ಡಾಲರ್ ತಲುಪಿದೆ. ಇದು ವರ್ಷದಲ್ಲಿ ಸಂಸ್ಥೆಗೆ ದೊರಕಿದ ಗರಿಷ್ಟ ಆದಾಯವಾಗಿದೆ. ಪ್ರಮುಖ ಸ್ಟಾಕ್ ಗಳ ಜಕುಸಿತದ ಹೊರತಾಗಿಯೂ ಸಂಸ್ಥೆ ಶೇ.26ರಷ್ಟು ಲಾಭ ಗಳಿಸಿದೆ. ಟ್ವಿಟ್ಟರ್ ಆದಾಯವು ಒಂದು ವರ್ಷದ ಹಿಂದೆ ಎರಡು ಶೇಕಡ ಏರಿಕೆಯಾಗಿದ್ದು, ನಿರೀಕ್ಷಿತ 732 ಮಿಲಿಯನ್ ಡಾಲರ್ ಗಿಂತ ಹೆಚ್ಚಾಗಿದೆ.
ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ 330 ಮಿಲಿಯನ್ ಆಗಿದ್ದು, ಹಿಂದಿನ ತ್ರೈಮಾಸಿಕದಲ್ಲಿ ಸಹ ಇದೇ ಪ್ರಮಾಣದ ಬಳಕೆದಾರರ ಸಂಖ್ಯೆಯನ್ನು ಟ್ವಿತ್ಟರ್ ಹೊಂದಿತ್ತು. ಈ ಲಾಭಗಳಿಕೆಯು ಟ್ವಿಟ್ಟರ್ ಗೆ ಒಂದು ಪ್ರಮುಖ ಸಾಧನೆಯಾಗಿದ್ದು,ಇದು ಕೆಲ ತಿಂಗಳುಗಳಿಂದ ನಿರಂತರವಾಗಿ ಹಣ ಕಳೆದುಕೊಳ್ಳುತ್ತಿದ್ದ ಸಂಸ್ಥೆಗೆ ಬಹುದೊಡ್ಡ ಪುಟಿದೇಳುವಿಕೆ ಎನ್ನಿಸಿದೆ.
"ವರ್ಷವೊದರ ಮುಕ್ತಾಯಕ್ಕೆ ನಮಗೆ ಬಲ ಸಿಕ್ಕಿದೆ. 2017 ರಲ್ಲಿ ನಾವು ಸಾಧಿಸಿದ ಸ್ಥಿರ ಪ್ರಗತಿಯ ಬಗ್ಗೆ ಹೆಮ್ಮೆಯಿದೆ, ಮತ್ತು ಮುಂದೆ ನಮ್ಮ ಭವಿಷ್ಯದ ಬಗೆಗೆ ವಿಶ್ವಾಸವಿದೆ." ಟ್ವಿಟ್ಟರ್ ತ್ರೈಮಾಸಿಕ ಲಾಭದ ವಿಚಾರವಾಗಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಜ್ಯಾಕ್ ಡಾರ್ಸೆ ಹೇಳಿದ್ದಾರೆ.
ಪ್ರಸಿದ್ದ ವ್ಯಕ್ತಿಗಳು, ರಾಜಕಾರಣಿಗಳು, ಪತ್ರಕರ್ತರು ಹೆಚ್ಚಾಗಿ ಟ್ವಿತ್ಟರ್ ಬಳಸುತ್ತಾರೆ, ಆದರೆ ಪೇಸ್ ಬುಕ್ ನಂತಹಾ ವಿಶಾಲ ವೇದಿಕೆಯ ಸಾಮಾಜಿಕ ತಾಣಗಳಿಗೆ ಹೋಲಿಸಿದಾಗ ಟ್ವಿಟ್ಟ್ರ್ ಗೆ ಸಾಕಷ್ಟು ನಿರ್ಬಂಧವಿರುವುದು ಕಾಣುತ್ತೇವೆ. ಇನ್ನು ಜಾಹೀರಾತು ಆದಾಯದಲ್ಲಿಯೂ ಟ್ವಿಟ್ಟರ್ ಸಾಕಷ್ಟು ಹಿಂದೆ ಇದೆ ಎಂದೆನ್ನುವುದು ಸುಳ್ಳಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT