ಎಸ್‏ಬಿಐ ಗ್ರಾಹಕರಿಗೆ ಸಂತಸದ ಸುದ್ದಿ, ಎಫ್ ಡಿ ಬಡ್ಡಿ ದರ ಏರಿಕೆ 
ವಾಣಿಜ್ಯ

ಎಸ್‏ಬಿಐ ಗ್ರಾಹಕರಿಗೆ ಸಂತಸದ ಸುದ್ದಿ, ಎಫ್ ಡಿ ಬಡ್ಡಿ ದರ ಏರಿಕೆ

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ದೀರ್ಘಾವಧಿ ನಿರಖು ಠೇವಣಿಯ ಎಫ್ ಡಿ) ಬಡ್ಡಿ ದರಗಳನ್ನು ಪರಿಷ್ಕರಿಸಿದೆ.

ಮುಂಬೈ: ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ದೀರ್ಘಾವಧಿ ನಿರಖು ಠೇವಣಿಯ (ಎಫ್ ಡಿ) ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಚಿಲ್ಲರೆ ದೇಶೀಯ ಠೇವಣಿ(ಒಂದು ಕೋಟಿ ರೂ.ಗಿಂತ ಕಡಿಮೆ) ಯ ಮೇಲೆ ಬಡ್ಡಿದರಗಳನ್ನು ಬ್ಯಾಂಕ್ ಪರಿಷ್ಕರಿಸಿದ್ದು ಇಂದು (ಫೆಬ್ರವರಿ 28)ನಿಂದ ಈ ಹೊಸ ದರ ಜಾರಿಗೆ ಬರಲಿದೆ.
ಒಂದು ಕೋಟಿ ರೂ. ಗಿಂತ ಕಡಿಮೆ ದೀರ್ಘಾವಧಿ ನಿರಖು ಠೇವಣಿಗಳಿಗೆ ಈ ಹಿಂದೆ ಶೇ. 6.25 ಬಡ್ಡಿ ನೀಡಲಾಗುತ್ತಿತ್ತು. ಆದರೆ ಇನ್ನು ಹೊಸ ದರದಂತೆ ಒಂದು ವರ್ಷದ ಠೇವಣಿಗೆ ಶೇ.6.40 ಬಡ್ಡಿ ದೊರೆಯಲಿದೆ. ಅದೇ ರೀತಿ ಎರಡರಿಂದ ಹತ್ತು ವರ್ಷಗಳ ಠೇವಣಿಗೆ ಶೇ.6.50(ಶೇ. 6), ಏಳರಿಂದ ನಲವತ್ತೈದು ದಿನಗಳ ಅಲ್ಪಾವಧಿ ಠೇವಣಿಗೆ ಶೇ. 5.75( ಶೇ.5.25) ಬಡ್ಡಿ ದರ ನಿಗದಿಪಡಿಸಲಾಗಿದೆ.
ಇನ್ನು ಹಿರಿಯ ನಾಗರಿಕರು ಸಹ ನಿರಖು ಠೇವಣಿ ಬಡ್ಡಿ ದರಗಳ ಏರಿಕೆ ಸಂತಸವನ್ನು ಅನುಭವಿಸಬಹುದಾಗಿದೆ. ಎರಡರಿಂದ ಹತ್ತು ವರ್ಷಗಳ ಅವಧಿಗೆ ಠೇವಣಿ ಇಟ್ಟ ಹಿರಿಯ ನಾಗರಿಕರು ಈ ಹಿಂದೆ ಶೇ.6.50 ಬಡ್ಡಿ ಪಡೆಯುತ್ತಿದ್ದರು ಆದರೆ ನೂತನ ಬಡ್ಡಿ ದರದ ಅನುಸಾರ ಅವರು ಮುಂದಿನ ದಿನಗಳಲ್ಲಿ ಶೇ.7 ಬಡ್ಡಿ ಪಡೆಯಲಿದ್ದಾರೆ. ಹಾಗೆಯೇ ಒಂದು ವರ್ಷ ಅವಧಿಯ ಠೇವಣಿ ಇರಿಸಿದ ಹಿರಿಯ ನಾಗರಿಕರು ಈ ಹಿಂದೆ ಪಡೆಯುತ್ತಿದ್ದ ಶೇ. 6.75ರ ಬಡ್ಡಿಯ ಹೊರತಾಗಿ ಶೇ.6.9 ಬಡ್ಡಿ ಪಡೆಯುತ್ತಾರೆ.
ಒಂದು ಕೋಟಿಯಿಂದ ಹತ್ತು ಕೋಟಿ ರೂ. ದೇಶೀಯ ಬೃಹತ್ ಅವಧಿಯ ಠೇವಣಿಗಳ ಮೇಲೆ ಒಂದು ವರ್ಷದಿಂದ 455 ದಿನಗಳ ಅವಧಿಗೆ ಶೇ.6.75 ಬಡ್ಡಿ ಸಿಗಲಿದೆ. ಐದರಿಂದ ಹತ್ತು ವರ್ಷಗಳ ಅವಧಿಗೆ ಈ ಬೃಹತ್ ಠೇವಣಿಗೆ ಶೇ. 6.25 ಬದ್ಡಿ ದೊರೆಯಲಿದೆ. ಒಂದರಿಂದ ಹತ್ತು ಕೋಟಿ ವರೆಗೆ ಠೇವಣಿ ಇರಿಇಸುವ ಹಿರಿಯ ಣಾಗರಿಕರಿಗೆ ಕ್ರಮವಾಗಿ ಶೇ.7.25 (ಒಂದು ವರ್ಷದಿಂದ 455 ದಿನಗಳ ಅವಧಿ), ಶೇ.6.75 (ಐದರಿಂದ ಹತ್ತು ವರ್ಷಗಳ ಕಾಲದ ಅವಧಿ), ಶೇ.7.15 (ಮೂರರಿಂದ ಐದು ವರ್ಷಗಳ ಅವಧಿ), ಶೇ.6.25 (ಏಳರಿಂದ 45 ದಿನಗಳ ಅವಧಿ) ಬಡ್ಡಿ ಪಡೆಯಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT