ಸಾಂದರ್ಭಿಕ ಚಿತ್ರ 
ವಾಣಿಜ್ಯ

ನಿವೃತ್ತಿಯೊಳಗೆ ಹೇಗೆ ಸಾಲಮುಕ್ತಗೊಳ್ಳಬಹುದು

ಶೇಕಡ 80 ರಷ್ಟು ಮಂದಿ ಸಂಬಳದಾರರು ನಿವೃತ್ತಿಗಾಗಿ ಸಿದ್ಧವಾಗಿಲ್ಲವೆಂದು ಒಪ್ಪಿಕೊಳ್ಳುತ್ತಾರೆ, ಆದರೂ ಹೆಚ್ಚಿನ ಜನರು ಸಾಮಾನ್ಯ ಜನರಿಗಿಂತ ಹೆಚ್ಚು ಖರ್ಚು ಮಾಡುತ್ತಾರೆ. ಆದರೆ, ನಿವೃತ್ತಿಯೊಳಗೆ ಹೇಗೆ ಸಾಲ ಮುಕ್ತಗೊಳ್ಳಬಹುದು ಎಂಬ ಬಗ್ಗೆ ಕೆಲ ಸೂಚನೆಗಳು ಇಂತಿವೆ

ಭುವನೇಶ್ವರ್: ಶೇಕಡ 80 ರಷ್ಟು ಮಂದಿ  ಸಂಬಳದಾರರು ನಿವೃತ್ತಿಗಾಗಿ ಸಿದ್ಧವಾಗಿಲ್ಲವೆಂದು ಒಪ್ಪಿಕೊಳ್ಳುತ್ತಾರೆ, ಆದರೂ ಹೆಚ್ಚಿನ ಜನರು ಸಾಮಾನ್ಯ ಜನರಿಗಿಂತ ಹೆಚ್ಚು ಖರ್ಚು ಮಾಡುತ್ತಾರೆ. ಖರ್ಚನ್ನು ಸರಿದೂಗಿಸಲು ಸಾಲಕ್ಕೆ ಮೊರೆ ಹೋಗುತ್ತಾರೆ. ಆದರೆ, ನಿವೃತ್ತಿಯೊಳಗೆ ಸಾಲದಿಂದ ಮುಕ್ತಗೊಳ್ಳಲು   ನಾವು ಏನು ಮಾಡಬೇಕು?
ಸರಿಯಾದ ಯೋಜನೆ ಹಾಕಿಕೊಂಡರೆ. ಸರಿಯಾದ ವೇಳೆಯಲ್ಲಿಯೇ ಉತ್ತಮ ಫಲಿತಾಂಶ ಪಡೆಯಬಹುದು. ಒಂದು ವೇಳೆ ನೀವು ಬೃಹತ್ ಮೊತ್ತದ  ಸಾಲಗಾರರಾಗಿದ್ದರೆ  ನಿವೃತ್ತಿಯೊಳಗೆ ಹೇಗೆ ಸಾಲಮುಕ್ತಗೊಳ್ಳಬಹುದು ಎಂಬ ಬಗ್ಗೆ ಗುರಿ ಹಾಕಿಕೊಳ್ಳಬೇಕಾಗುತ್ತದೆ. 45 ವರ್ಷದೊಳಗೆ ಎಲ್ಲಾ ಸಾಲವನ್ನು ಮುಕ್ತಗೊಳಿಸಬೇಕಾಗುತ್ತದೆ.
ಬ್ಯಾಂಕ್ ಗೆ ಸಾಲ ಕಟ್ಟುವ ಬದಲು  ನಿವೃತ್ತಿ ನಿಧಿಯನ್ನು  ಹೆಚ್ಚಿಸಲು ಸಾಕಷ್ಟು ಸಮಯವನ್ನು ಇದು ನೀಡುತ್ತದೆ. ತುರ್ತು ಸಂದರ್ಭಕ್ಕಾಗಿ ಉಳಿತಾಯ ಅಥವಾ  ಮನೆ ಮತ್ತಿತರ ಆಸ್ತಿಯ ಮೇಲೆ ಕನಿಷ್ಠ ಶೇ.20 ರಷ್ಟು ಡೌನ್ ಪೇಮೆಂಟ್ ಮಾಡಿದ್ದರೆ, ತಮ್ಮ ಇಟ್ಟಿಕೊಂಡಿದ್ದ ಗುರಿಗಳನ್ನು ಮುಂಚಿತವಾಗಿಯೇ ಸಾಧಿಸಬಹುದಾಗಿದೆ. ಸಾಲ ಮಾಡಬೇಕಾದ ಅನೀವಾರ್ಯತೆ ಇರುವುದಿಲ್ಲ.
1.ಉಳಿತಾಯ ಕಾರ್ಯತಂತ್ರ :  ಒಬ್ಬ ವ್ಯಕ್ತಿ  ಕನಿಷ್ಠ 85 ವರ್ಷ ಬದುಕುತ್ತಾನೆ ಎಂಬ ನಿರೀಕ್ಷೆ ಇಟ್ಟುಕೊಳೋಣ, ಉದಾಹರಣೆಗೆ   25 ರಿಂದ 65 ವರ್ಷದೊಳಗೆ ನೀವು 500  ರೂಪಾಯಿಯನ್ನು  ನಿವೃತ್ತಿ ನಿಧಿಯಾಗಿಯೇ ಮೀಸಲಿಡಬೇಕಾಗುತ್ತದೆ. ನಿವೃತ್ತಿ ನಿಧಿಗಾಗಿ ಕನಿಷ್ಠ 250 ತಿಂಗಳ  ಪಾವತಿಸಬೇಕಾಗುತ್ತದೆ.
ಯಾವುದೇ ಯಶಸ್ವಿ ಉಳಿತಾಯ ಮಾಡಲು ಸಾಲ ಮರುಪಾವತಿ ಯೋಜನೆ ಪ್ರಮುಖವಾಗಿರುತ್ತದೆ. ಇದರಿಂದಾಗಿ   ಸಾಲ ಮುಕ್ತಗೊಂಡು ನಮ್ಮ ಹಣದ ಸ್ಥಿತಿಯನ್ನು ಬದಲಾಯಿಸುತ್ತದೆ. 
ಪ್ರತಿ ತಿಂಗಳು ಕನಿಷ್ಠ ಪಾವತಿ ಮಾಡಿ
ದುಬಾರಿ ಪ್ರಮಾಣದ ಬಡ್ಡಿ ಹಾಗೂ ಶುಲ್ಕವನ್ನು ಕಡಿಮೆಗೊಳಿಸಲು ಪಡೆದಿರುವ ಸಾಲಕ್ಕೆ   ಪ್ರತಿತಿಂಗಳು ಕನಿಷ್ಠ ಪಾವತಿ ಮಾಡುವುದನ್ನು  ಕಲಿಯಬೇಕು.  ಕ್ರೇಡಿಟ್ ಕಾರ್ಡ್ ಮೂಲಕ ಪಾವತಿಯೂ  ಸಾಲದಿಂದ ಮುಕ್ತಗೊಳ್ಳಲು ಒಂದು ಉತ್ತಮವಾದ ಮಾರ್ಗವಾಗಿದೆ. ಕೊನೆಯ ದಿನಾಂಕದಲ್ಲಿ ಪಾವತಿಸಿದ್ದರೆ ಅದು ಮುಂದಿನ ತಿಂಗಳ ಬಿಲ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಯಾವುದೇ ವ್ಯವಹಾರ  ಮುಂದಿನ ತಿಂಗಳ  ಹೇಳಿಕೆಯಲ್ಲಿ ಸೇರಿಕೊಳ್ಳುತ್ತದೆ. ಇದರಿಂದಾಗಿ ಕ್ರೇಡಿಟ್ ಕಾರ್ಡ್ ಮೇಲಿನ ಬಡ್ಡಿ ಮೇಲಿನ ದರ ಕಡಿತಗೊಳ್ಳಿಸುತ್ತದೆ.
ಕಿರು ಅವಧಿಯ ಸಾಲದಿಂದ ದೂರ ಇರಿ
 ಕಿರು ಅವಧಿಯ ಸಾಲದಿಂದ ನಿವೃತ್ತಿ ಯೋಜನೆ ಹಳಿತಪ್ಪುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಪಾವತಿಯೂ ಮುಖ್ಯವಾಗಿದೆ. ಕಿರು ಅವಧಿಯ ಸಾಲದ ಬಗ್ಗೆ ಪಟ್ಟಿ ಮಾಡಿ,  ಕೊನೆಯ ಸಾಲ ಪಾವತಿ ಹಾಗೂ ದಿನಾಂಕವನ್ನು ಲೆಕ್ಕ ಹಾಕಬೇಕು. 
ನಿವೃತ್ತಿಯೊಳಗೆ ಬಡ್ಡಿ ಪಾವತಿಸುವುದಿಲ್ಲ ಎನ್ನುವರು ಹೀಗೆ ಸಾಲಮರುಪಾವತಿ ಕ್ರಮ ಅನುಸರಿಸುವುದರಿಂದ  ಅವರ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ಕಾಣಬಹುದಾಗಿದೆ. ಇದು ಅತ್ಯಂತ ಅವಶ್ಯಕವಾಗಿದ್ದು, ಈ ಅವಧಿಯಲ್ಲಿ ಯಾವುದೇ ರೀತಿಯ ಸಾಲ ಮಾಡಬಾರದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT