ಅರುಣ್ ಜೇಟ್ಲಿ 
ವಾಣಿಜ್ಯ

ನಾಗರಿಕರು 'ಪ್ರಾಮಾಣಿಕವಾಗಿ' ತೆರಿಗೆ ಪಾವತಿಸಿದರೆ ತೈಲದ ಆದಾಯದ ಮೇಲೆ ಅವಲಂಬನೆ ತಗ್ಗುತ್ತದೆ: ಅರುಣ್ ಜೇಟ್ಲಿ

ತೈಲವನ್ನೇ ಆದಾಯ ಮೂಲವಾಗಿ ಅವಲಂಬಿಸುವುದನ್ನು ತಪ್ಪಿಸಲು ತೆರಿಗೆದಾರರು "ಪಾರಾಮಾಣಿಕವಾಗಿ" ತೆರಿಗೆ ಪಾವತಿ ಮಾಡಬೇಕು ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ನವದೆಹಲಿ: ತೈಲವನ್ನೇ ಆದಾಯ ಮೂಲವಾಗಿ ಅವಲಂಬಿಸುವುದನ್ನು ತಪ್ಪಿಸಲು ತೆರಿಗೆದಾರರು "ಪಾರಾಮಾಣಿಕವಾಗಿ" ತೆರಿಗೆ ಪಾವತಿ ಮಾಡಬೇಕು ಎಂದು ಕೇಂದ್ರ  ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಇದೇ ವೇಳೆ ಪೆಟ್ರೋಲ್ ಹಾಗೂ ಡೀಸಲ್ ಮೇಲಿನ ಎಕ್ಸೈಸ್ ಸುಂಕವನ್ನು ಕಡಿತ ಮಾಡಲಾಗದು ಎಂದು ತಿಳಿಸಿದ ಅವರು ಇದರಿಂದ ಉತ್ಪಾದಕರ ಮೇಲೆ ಹೊಡೆತ ಬೀಳಲಿದೆ ಎಂದಿದ್ದಾರೆ.
"ವೇತನ ಪಡೆಯುವ ವರ್ಗ ತೆರಿಗೆ ಪಾವತಿಯನ್ನು ಮಾಡುವಂತೆ ಇತರೆ ವರ್ಗದ ಜನ ಸಹ  ತೆರಿಗೆ ಪಾವತಿಯನ್ನು ಮಾಡಿದಲ್ಲಿ ಭಾರತ  "ತೆರಿಗೆ ಸಂಬಂಧಿ ದೂರುಗಳಿಂದ" ಮುಕ್ತವಾಗಲಿದೆ" ಜೇಟ್ಲಿ ಹೇಳಿದ್ದಾರೆ.
"ರಾಜಕೀಯ ನಾಯಕರಿಗೆ, ಆರ್ಥಿಕ ಪರಿಣತರಿಗೆ ನಾನು ಮನವಿ ಮಾಡುವುದೆಂದರೆ ತೈಲದ ಮೇಲಿನ ತೆರಿಗೆ ಆದಾಯದ ಅವಲಂಬನೆ ಕಡಿಮೆಯಾಗಬೇಕು, ಅದಕ್ಕಾಗಿ ತೆರಿಗೆ ತಪ್ಪಿಸುವಿಕೆ ನಿಲ್ಲಬೇಕು. ಜನರು ತಮ್ಮ ತೆರಿಗೆಗಳನ್ನು ಪ್ರಾಮಾಣಿಕವಾಗಿ ಪಾವತಿಸಬೇಕಿದೆ. ಹಾಗಾದಲ್ಲಿ ತೈಲದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ."
'The Economy and the Markets Reward Structural Reforms and Fiscal Prudence' ಎನ್ನುವ ತಲೆಬರಹದಲ್ಲಿ ಜೇಟ್ಲಿ ತಮ್ಮ ಫೇಸ್ ಬುಕ್ ಕಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರದ ತೆರಿಗೆ -ಜಿಡಿಪಿ ಅನುಪಾತವು ಶೇಕಡಾ 10 ರಿಂದ 11.5 ಕ್ಕೆ ಏರಿದೆ ಎಂದು ಜೇಟ್ಲಿ ಹೇಳಿದ್ದಾರೆ. ಈ ಪೈಕಿ ಅರ್ಧದಷ್ಟು ಜಿಡಿಪಿ ಯ 0.72 ಶೇಕಡದಷ್ಟು ತೈಲದ ಮೇಲಿನ ತೆರಿಗೆ ಹೊರತಾದ ಅನುಪಾತದಲ್ಲಿ  ಹೆಚ್ಚಳಕ್ಕೆ ಕಾರಣವಾಗಿದೆ. 2017-18ರಲ್ಲಿ ಜಿಡಿಪಿ ಪ್ರಮಾಣ 9.8 ಶೇಕಡಾ ಗೆ ತಲುಪಿದ್ದು ಇದು  2007-08ರ ನಂತರದ ಅತ್ಯಧಿಕ ಪ್ರಮಾಣವಾಗಿತ್ತು. ಅಂತರಾಷ್ಟ್ರೀಯ ಮಟ್ಟದ ಕೆಲ ಬದಲಾವಣೆಗಳಿಂದಾಗಿ ಈ ವರ್ಷ ನಮ್ಮ ಆದಾಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT