ಅರುಣ್ ಜೇಟ್ಲಿ 
ವಾಣಿಜ್ಯ

ಸರ್ಕಾರಕ್ಕೆ ಆರ್ ಬಿಐ ಮೀಸಲಿನ ಅಗತ್ಯವಿಲ್ಲ: ಹಣಕಾಸು ಸಚಿವ ಜೇಟ್ಲಿ

ಸರ್ಕಾರದ ಹಣಕಾಸು ಅಗತ್ಯವನ್ನು ಪೂರೈಸುವ ಸಲುವಾಗಿ ರಿಸರ್ವ್ ಬ್ಯಾಂಕ್ ಅಥವಾ ಯಾವುದೇ ಇತರ ಸಂಸ್ಥೆಗಳಿಂದ ಹಣ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ನವದೆಹಲಿ: ಸರ್ಕಾರದ ಹಣಕಾಸು ಅಗತ್ಯವನ್ನು ಪೂರೈಸುವ ಸಲುವಾಗಿ  ರಿಸರ್ವ್ ಬ್ಯಾಂಕ್ ಅಥವಾ ಯಾವುದೇ ಇತರ ಸಂಸ್ಥೆಗಳಿಂದ ಹಣ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಅದಾಗ್ಯೂ ಅವರು ರಿಸರ್ವ್ ಬ್ಯಾಂಕ್ ನಿಂದ ನೀಡಲ್ಪಡುವ ಹೆಚ್ಚುವರಿಒ ಹಣವನ್ನು ಪಡೆವ ಮೂಲಕ ಭವಿಷ್ಯದ ಸರ್ಕಾರಗಳು ಬಡತನ ನಿರ್ಮೂಲನೆ ಕಾರ್ಯಕ್ರಮಗಳಿಗಾಗಿ ಅದನ್ನು ಬಳಸಿಕೊಳ್ಳುವಂತೆ ಮಾಡಬಹುದಾಗಿದೆ ಎಂದಿದ್ದಾರೆ.
"ನಮ್ಮ ಹಣಕಾಸಿನ ಕೊರತೆಯನ್ನು ನೀಗಿಸಿಕೊಳ್ಳುವುದಕಾಗಿ ಯಾವುದೇ ಇತರ ಸಂಸ್ಥೆಗಳಿಂದ ನಾವು ಹೆಚ್ಚುವರಿ ಹಣವನ್ನು ಬಯಸುವುದಿಲ್ಲ.ಇದು ಸರ್ಕಾರದ ಉದ್ದೇಶವೂ ಅಲ್ಲ.ಮುಂದಿನ ಆರು ತಿಂಗಳಲ್ಲಿ ನಮಗೆ ಸ್ವಲ್ಪ ಹಣ ಕೊಡಿರೆಂದು ನಾವು ಯಾರಿಗೂ ಕೇಳುವುದಿಲ್ಲ." ಟೈಮ್ಸ್ ನೌ ಟಿವಿ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ಸಚಿವರು ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ದೇಶದ ಹಣಕಾಸಿನ ಕೊರತೆ ಜಿಡಿಪಿ ದರವು 3.3 ಶೇಕಡಕ್ಕೆ ಇಳಿಕೆಯಾಗಲಿದೆ.
ಸರ್ಕಾರವು ಆರ್ ಬಿಐ ಮೀಸಲು ಹಣವನ್ನು ಎದುರು ನೋಡುತ್ತಿದೆ ಎನ್ನುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಜೇಟ್ಲಿ ಜಾಗತಿಕವಾಗಿ  ಕೇಂದ್ರ ಬ್ಯಾಂಕ್  ಬಂಡವಾಳದ ಚೌಕಟ್ಟನ್ನು ಹೊಂದಿದ್ದು ನಿಧಿಗಳನ್ನು ನಿರ್ವಹಿಸಬೇಕಾದ ಹಣವನ್ನು ಅದು ಮಿರ್ಧರಿಸಲಿದೆ.ಮುಂದಿನ ಸರ್ಕಾರಗಳು ಹೆಚ್ಚು ಹಣವನ್ನು ಬಡತನ ನಿರ್ಮೂಲನೆ ಕಾರ್ಯಕ್ಕಾಗಿ ಬಳಸಬೇಕೆಂದ್ಯು ನಾವು ಆಶಿಸುತ್ತೇವೆ ಎಂದಿದ್ದಾರೆ.
ಈ ಮಾಸದ ಪ್ರಾರಂಭದಲ್ಲಿ ಡೆದ ಸಭೆಯಲ್ಲಿ ಕೇಂದ್ರ ಬ್ಯಾಂಕ್ ಮೀಸಲು ನಿಧಿ ಮಟ್ಟವನ್ನು ನಿರ್ಧರಿಸಲು ಆರ್ಥಿಕ ಬಂಡವಾಳ ಚೌಕಟ್ಟನ್ನು ಪರೀಕ್ಷಿಸಲು ಉನ್ನತ ಮಟ್ಟದ ಸಮಿತಿ ಸ್ಥಾಪನೆಗಾಗಿ ನಿರ್ಧರಿಸಿತ್ತು. ಆರ್ ಬಿಐ ರೂ 9.59 ಲಕ್ಷ ಕೋಟಿ ಮೀಸಲು ನಿಧಿ ಹೊಂದಿದೆ ಎಂದು ವರದಿಯಾಗಿದೆ.
ರಿಸರ್ವ್ ಬ್ಯಾಂಕ್ ಸ್ವಾಯತ್ತತೆಗೆ ಸಂಬಂಧಿಸಿದಂತೆ ಪ್ರಶ್ನೆಗಳಿಗೆ ಉತ್ತರಿಸುವ ಜೇಟ್ಲಿ, ಕಾನೂನಿನ ಚೌಕಟ್ಟಿನೊಳಗೆ ಅದನ್ನು ನಿರ್ವಹಿಸಬೇಕು ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT