ಕೇವಲ ಒಂದು ವಾಟ್ಸ್ ಆಪ್ ಮೆಸೇಜ್ ನಿಂದ ಪಾತಾಳಕ್ಕಿಳಿಯಿತು ಆ ಕಂಪನಿಯ ಷೇರು! 
ವಾಣಿಜ್ಯ

ಕೇವಲ ಒಂದು ವಾಟ್ಸ್ ಆಪ್ ಮೆಸೇಜ್ ನಿಂದ ಪಾತಾಳಕ್ಕಿಳಿಯಿತು ಆ ಕಂಪನಿಯ ಷೇರು!

ವಾಟ್ಸ್ ಆಪ್ ನಲ್ಲಿ ವೈರಲ್ ಆಗುವ ಸಂದೇಶಗಳಿಂದ ಗುಂಪು ಹಲ್ಲೆ ನಡೆಯುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಈಗ ವಾಟ್ಸ್ ಆಪ್ ನಲ್ಲಿ ವೈರಲ್ ಆಗುವ ಸಂದೇಶಗಳಿಂದ ಉದ್ಯಮ ವಲಯಕ್ಕೂ ತಲೆ

ವಾಟ್ಸ್ ಆಪ್ ನಲ್ಲಿ ವೈರಲ್ ಆಗುವ ಸಂದೇಶಗಳಿಂದ ಗುಂಪು ಹಲ್ಲೆ ನಡೆಯುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಈಗ ವಾಟ್ಸ್ ಆಪ್ ನಲ್ಲಿ ವೈರಲ್ ಆಗುವ ಸಂದೇಶಗಳಿಂದ ಉದ್ಯಮ ವಲಯಕ್ಕೂ ತಲೆ ಬಿಸಿ ಶುರುವಾಗಿದೆ. 
ಇನ್ಫಿಬೀಮ್ ಅವೆನ್ಯೂಸ್ ಸಂಸ್ಥೆಯ ಷೇರುಗಳು ಕೇವಲ ಒಂದೇ ಒಂದು ವಾಟ್ಸ್ ಆಪ್ ಮೆಸೇಜ್ ನಿಂದ ಬರೊಬ್ಬರಿ ಶೇ. 70 ರಷ್ಟು ಇಳಿಕೆಯಾಗದೆ. ವಾರ್ಷಿಕ ಸಮಾನ್ಯ ಸಭೆಗೂ ಮುನ್ನ ಈ ಘಟನೆ ನಡೆದಿದ್ದು 2016 ರ ನವೆಂಬರ್ ನಿಂದ ಇದೇ ಮೊದಲ ಬಾರಿಗೆ ಸಂಸ್ಥೆಯ ಷೇರುಗಳು ಈ ಪ್ರಮಾಣದಲ್ಲಿ ಕುಸಿದಿದೆ. ಸಂಸ್ಥೆಯ ಅಕೌಂಟಿಂಗ್ ಪದ್ಧತಿಗಳಲ್ಲಿ ಮೋಸ ನಡೆಯುತ್ತಿದೆ ಎಂಬ ವಾಟ್ಸ್ ಆಪ್ ಮೆಸೇಜ್ ಟ್ರೇಡರ್ ಗಳಲ್ಲಿ ಆತಂಕ ಮೂಡಿಸಿದ್ದ ಹಿನ್ನೆಲೆಯಲ್ಲಿ ಸಂಸ್ಥೆಯ ಷೇರುಗಳು ಬೃಹತ್ ಪ್ರಮಾಣದಲ್ಲಿ ಕುಸಿದಿದೆ ಎಂದು ತಿಳಿದುಬಂದಿದೆ. 
ವರದಿಗಳ ಪ್ರಕಾರ ಹೂಡಿಕೆದಾರರಿಗೆ ಬಂಡವಾಳ ಮಾರುಕಟ್ಟೆಯಲ್ಲಿ ಬರೊಬ್ಬರಿ 9,200 ಕೋಟಿ ರೂಪಾಯಿ ನಷ್ಟವಾಗಿದ್ದು,  2009 ರ ಜನವರಿಯಲ್ಲಿ ಸತ್ಯಂ ಕಂಪ್ಯೂಟರ್ಸ್ ಹಗರಣ ಬೆಳಕಿಗೆ ಬಂದ ನಂತರ ಸತ್ಯಂ ಕಂಪ್ಯೂಟರ್ಸ್ ಸರ್ವೀಸ್ ನ ಷೇರುಗಳು ಒಂದೇ ದಿನದಲ್ಲಿ ಶೇ.83 ರಷ್ಟು ಕುಸಿದಿದ್ದನ್ನು ಬಿಟ್ಟರೆ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಕಂಪನಿಯೊಂದರ ಷೇರುಗಳು ಭಾರಿ ಪ್ರಮಾಣದಲ್ಲಿ ಕುಸಿದಿರುವುದು ದಾಖಲಾಗಿದೆ. 
ಇನ್ಫಿಬೀಮ್ ಅವೆನ್ಯೂಸ್ ಕುರಿತು ಆತಂಕ ಮೂಡಿಸುವ ವಾಟ್ಸ್ ಆಪ್ ಮೆಸೇಜ್ ಗಳು ಹಲವು ತಿಂಗಳುಗಳಿಂದ ಹರಿದಾಡುತ್ತಿತ್ತು. ಬಡ್ಡಿ ರಹಿತ ಹಾಗೂ ಯಾವುದೇ ಆಧಾರ ಇಲ್ಲದೇ,  ಇನ್ಫಿಬೀಮ್ ಅವೆನ್ಯೂಸ್ ಸಂಸ್ಥೆಯ ಋಣಾತ್ಮಕ ಆಸ್ತಿ ಹೊಂದಿರುವ ಸಂಸ್ಥೆಯ ಒಂದು ಯುನಿಟ್ ಗೆ ಸಾಲ ನೀಡಲಾಗಿದೆ.  ಅಷ್ಟೇ ಅಲ್ಲದೇ ಸಂಸ್ಥೆಯ ಸಹ ಸಂಸ್ಥಾಪಕ ಈಗ  ನಾನ್ ಪ್ರೊಮೋಟರ್ ಆಗಿದ್ದಾರೆ ಆದರೆ ಹೆಚ್ಚು ಷೇರುಗಳನ್ನು ಹೊಂದಿದ್ದಾರೆ ಎಂದು ಮೆಸೇಜ್ ನಲ್ಲಿ ಆರೋಪಿಸಲಾಗಿತ್ತು, ಆದರೆ ಇನ್ವೆಸ್ಟರ್ ಬ್ಯಾಂಕ್ ಈಕ್ವಿರಸ್ ಕ್ಯಾಪಿಟಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂದು ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್