ಕಾಫಿ ಡೇ 
ವಾಣಿಜ್ಯ

ಕಾಫಿ ಡೇ ಸ್ಥಾಪಕ ಸಿದ್ದಾರ್ಥ್ ಪತ್ರದ ವಿಚಾರ: ಅರ್ನ್ಸ್ಟ್ & ಯಂಗ್ ನಿಂದ ತನಿಖೆಗೆ ತೀರ್ಮಾನ

ಕಾಫಿ ಡೇ ಎಂಟರ್‌ಪ್ರೈಸಸ್ ಮಂಡಳಿಯು ಮಾಜಿ ಅಧ್ಯಕ್ಷ ವಿ.ಜಿ. ಸಿದ್ಧಾರ್ಥ ಅವರ ಸಾವಿಗೆ ಮುಂಚಿತವಾಗಿ ಕಂಪನಿಯ ಮಂಡಳಿಯ ಸದಸ್ಯರು ಮತ್ತು ಉದ್ಯೋಗಿಗಳಿಗೆ....

ಚಿಕ್ಕಮಗಳೂರು: ಕಾಫಿ ಡೇ ಎಂಟರ್‌ಪ್ರೈಸಸ್ ಮಂಡಳಿಯು ಮಾಜಿ ಅಧ್ಯಕ್ಷ ವಿ.ಜಿ. ಸಿದ್ಧಾರ್ಥ ಅವರ ಸಾವಿಗೆ ಮುಂಚಿತವಾಗಿ ಕಂಪನಿಯ ಮಂಡಳಿಯ ಸದಸ್ಯರು ಮತ್ತು ಉದ್ಯೋಗಿಗಳಿಗೆ ಬರೆದಿರುವ ಪತ್ರದ ಕುರಿತಂತೆ  ತನಿಖೆ ನಡೆಸಲು ಅರ್ನ್ಸ್ಟ್ & ಯಂಗ್ (ಇವೈ ) ಅವರನ್ನು ನೇಮಕ ಮಾಡಿದೆ.

ಕಂಪನಿಯ ಮತ್ತು ಅದರ ಅಂಗಸಂಸ್ಥೆಗಳ ಖಾತೆಗಳ ಪುಸ್ತಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಇವೈಗೆ ಕೋರಲಾಗಿದೆ ಎಂದು ಕಾಫಿ ಡೇ ಹೇಳಿಕೆಯಲ್ಲಿ ತಿಳಿಸಲಾಗಿದೆ. ಗುರುವಾರ ಸುಮಾರು ಗಂಟೆಗಳ ಸುದೀರ್ಘ ಕಾಲ ನಡೆದ ಮಂಡಳಿಯ ಸಭೆ ತರುವಾಯ ಈ ಹೇಳಿಕೆ ಬಿಡುಗಡೆಯಾಗಿದೆ.
"ಕಾರ್ಯತಂತ್ರದ ನಿರ್ದೇಶನ ಮತ್ತು ಭವಿಷ್ಯದಲ್ಲಿ ಸೂಕ್ತವಾದ ಮಾರ್ಗವನ್ನು ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಮಧ್ಯಸ್ಥಗಾರರಿಗೆ ಕೆಲಸ ನೀಡಬೇಕೆಂದು ಮಂಡಳಿ ನಿರ್ಧರಿಸಿದೆ. ಇದನ್ನು ಸಾಧಿಸಲು ಶ್ರೇಷ್ಠ ವ್ಯಕ್ತಿ ಅಥವಾ ಹೆಸರಾಂತ ಸಂಸ್ಥೆಯನ್ನು ಕಾರ್ಯತಂತ್ರದ ಸಾಂಸ್ಥಿಕ ಸಲಹೆಗಾರ / ಮಂಡಳಿಗೆ ನೇಮಕ ಮಾಡಲು ನಿರ್ಧರಿಸಲಾಯಿತು, ”ಎಂದು ಅದು ಹೇಳಿದೆ.
ಹಿಂದಿನ ಮಂಡಳಿ ಸಭೆಯಲ್ಲಿ ರಚಿಸಲಾದ ಕಾರ್ಯಕಾರಿ ಸಮಿತಿಯ ಹೆಚ್ಚುವರಿ ಸದಸ್ಯರಾಗಿ ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರನ್ನು ನೇಮಿಸಲಾಗಿತ್ತು.
ಆಡಳಿತ ಮಂಡಳಿ ಹಿರಿಯರು, ಆಡಿಟರ್​ಗಳು ಮತ್ತು ಮಂಡಳಿಯ ಗಮನಕ್ಕೆ ಬಾರದೆ ಇರುವ ಹಣಕಾಸು ವ್ಯವಹಾರಗಳು ಕುರಿತು ವಿ.ಜಿ.ಸಿದ್ಧಾರ್ಥ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿನ ಅಂಶಗಳ ಕುರಿತಾಗಿ ಕಂಪನಿಯು ಗಂಭೀರವಾಗಿ ಪರಿಗಣಿಸಿ ಈ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT