ಸಂಗ್ರಹ ಚಿತ್ರ 
ವಾಣಿಜ್ಯ

ವರಮಹಾಲಕ್ಶ್ಮಿ ಹಬ್ಬದಂದು ಗಗನಕ್ಕೇರಿದ ಬಂಗಾರದ ಬೆಲೆ: 38 ಸಾವಿರ ರೂ. ಗಡಿ ದಾಟಿದ ಚಿನ್ನ, ಬೆಳ್ಳಿ ಕೆಜಿಗೆ 44 ಸಾವಿರ ರೂ.!

ವರಮಹಾಲಕ್ಷ್ಮಿ ದಿನದಂದೇ ಮಹಿಳೆಯರ ಅಚ್ಚುಮೆಚ್ಚಿನ ಚಿನ್ನಾಭರಣಗಳ ಬೆಲೆ ಗಗನಕ್ಕೇರಿ ಬಂಗಾರ ಖರೀದಿಸುವವರಿಗೆ ತೀವ್ರ ನಿರಾಶೆ ಮೂಡಿಸಿದೆ. ಗುರುವಾರ ಬಾರತೀಯ ಚಿನ್ನದ ಮಾರುಕಟ್ಟೆಯಲ್ಲಿ////

ನವದೆಹಲಿ: ವರಮಹಾಲಕ್ಷ್ಮಿ ದಿನದಂದೇ ಮಹಿಳೆಯರ ಅಚ್ಚುಮೆಚ್ಚಿನ ಚಿನ್ನಾಭರಣಗಳ ಬೆಲೆ ಗಗನಕ್ಕೇರಿ ಬಂಗಾರ ಖರೀದಿಸುವವರಿಗೆ ತೀವ್ರ ನಿರಾಶೆ ಮೂಡಿಸಿದೆ. ಗುರುವಾರ ಬಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇದೇ ಮೊದಲ ಬಾರಿಗೆ 38,000 ಗಡಿ ದಾಟಿದೆ. 550 ರೂ ದರ ಏರಿಕೆ ಕಂಡ ಚಿನ್ನದ ಬೆಲೆ  10 ಗ್ರಾಂಗೆ 38,470 ರೂ.ಗೆ ತಲುಪಿದೆ. ಅಮೆರಿಕಾ-ಚೀನಾದೊಂದಿಗಿನ ವ್ಯಾಪಾರದಲ್ಲಿನ ಉದ್ವಿಗ್ನತೆ ಹಾಗೂ ದೇಶೀಯ ಆರ್ಥಿಕ ಕಾಳಜಿಗಳ ಕಾರಣಕ್ಕಾಗಿ ಈ ಏರಿಕೆ ಕಂಡುಬಂದಿದೆ ಎಂದು ಅಂದಾಜಿಸಲಾಗಿದೆ.
ಇನ್ನು ಮಾರುಕಟ್ಟೆಯಲ್ಲಿ ಕೆಜಿ ಬೆಳ್ಳಿಯ ಬೆಲೆ 44,000 ರೂ.ಗಳನ್ನು ದಾಟಿದ್ದು 630 ರೂ.ನಷ್ಟು ಏರಿಕೆಯಾಗಿ  ಪ್ರತಿ ಕೆ.ಜಿ.ಗೆ 44,300 ರೂ. ಗೆ ತಲುಪಿದೆ.
ಹೆಚ್ಚುತ್ತಿರುವ ಯುಎಸ್-ಚೀನಾ ವ್ಯಾಪಾರದ ಉದ್ವಿಗ್ನತೆ ವಾತಾವರಣದ ನಡುವೆ ಆರು ವರ್ಷಗಳಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ  1,500 ಯುಎಸ್ ಡಾಲರ್ ಗಡಿ ದಾಟಿದೆ.ಇದಲ್ಲದೆ, ದೇಶೀಯ ಆರ್ಥಿಕ ಕುಸಿತದ ಬಗೆಗಿನ ಕಳವಳಗಳು ಚಿನ್ನದಂತಹಾ ಅಮೂಲ್ಯ ಲೋಹದ ಮೇಲೆ ಜನರ ಮುತುವರ್ಜಿಯನ್ನು ಹೆಚ್ಚಿಸುತ್ತಿದೆ.
2019-20ರ ಮೂರನೇ ದ್ವಿ-ಮಾಸಿಕ ಪರಿಶೀಲನೆಯಲ್ಲಿ, ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಬುಧವಾರ ಭಾರತೀಯ ಆರ್ಥಿಕತೆಯ ಬೆಳವಣಿಗೆಯ ನಿರೀಕ್ಷೆ ಮಟ್ಟವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6.9 ಕ್ಕೆ ಇಳಿಸಿದೆ. 
ಏತನ್ಮಧ್ಯೆ, ಜಾಗತಿಕವಾಗಿ, ಸ್ಪಾಟ್ ಚಿನ್ನವು ನ್ಯೂಯಾರ್ಕ್ ನಲ್ಲಿ ಔನ್ಸ್ ಒಂದಕ್ಕೆ  1,497.40 ಯುಎಸ್ಡಿಗಳಷ್ಟು ಕಡಿಮೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್ ಗೆ  17.16 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT