ಸಾಂದರ್ಭಿಕ ಚಿತ್ರ 
ವಾಣಿಜ್ಯ

ನಾಲ್ಕು ಕಂಪನಿಗಳಿಂದ ಕರ್ನಾಟಕ ಬ್ಯಾಂಕ್ ಗೆ 285 ಕೋಟಿ ರೂ. ವಂಚನೆ

ಡಿಎಚ್‌ಎಫ್‌ಎಲ್ ಸೇರಿದಂತೆ ನಾಲ್ಕು ಕಂಪನಿಗಳು ತಮಗೆ ಸಾಲ ನೀಡಿದ ಖಾಸಗಿ ವಲಯದ ಕರ್ನಾಟಕ ಬ್ಯಾಂಕ್ ಗೆ ಬರೋಬ್ಬರಿ 285 ಕೋಟಿ ರೂ.ಗಳ ವಂಚಿಸಿರುವುದಾಗಿ ವರದಿ ಮಾಡಿದೆ.

ನವದೆಹಲಿ: ಡಿಎಚ್‌ಎಫ್‌ಎಲ್ ಸೇರಿದಂತೆ ನಾಲ್ಕು ಕಂಪನಿಗಳು ತಮಗೆ ಸಾಲ ನೀಡಿದ ಖಾಸಗಿ ವಲಯದ ಕರ್ನಾಟಕ ಬ್ಯಾಂಕ್ ಗೆ ಬರೋಬ್ಬರಿ 285 ಕೋಟಿ ರೂ.ಗಳ ವಂಚಿಸಿರುವುದಾಗಿ ವರದಿ ಮಾಡಿದೆ.

ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ (ಡಿಎಚ್‌ಎಫ್‌ಎಲ್), ರಿಲಿಗೇರ್ ಫಿನ್‌ವೆಸ್ಟ್, ಫೆಡರ್ಸ್ ಎಲೆಕ್ಟ್ರಿಕ್ ಮತ್ತು ಎಂಜಿನಿಯರಿಂಗ್ ಲಿಮಿಟೆಡ್ ಮತ್ತು ಲೀಲ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ ನಿಂದ 2009 ರಿಂದ 2014 ರ ಅವಧಿಯಲ್ಲಿ ಒಟ್ಟು 285.52 ಕೋಟಿ ರೂ. ವಂಚಿಸಲಾಗಿದೆ ಎಂದು ಕರ್ನಾಟಕ ಬ್ಯಾಂಕ್ ತಿಳಿಸಿದೆ.

ಈ ಪೈಕಿ ಡಿಎಚ್‌ಎಫ್‌ಎಲ್ ಅತಿ ಹೆಚ್ಚು ಅಂದರೆ 180.13 ಕೋಟಿ ರೂ., ನಂತರ ರಿಲಿಗೇರ್ ಫಿನ್‌ವೆಸ್ಟ್ 43.44 ಕೋಟಿ ರೂ., ಫೆಡರ್ಸ್ ಎಲೆಕ್ಟ್ರಿಕ್ 41.30 ಕೋಟಿ ಮತ್ತು ಲೀಲ್ ಎಲೆಕ್ಟ್ರಿಕಲ್ಸ್ 20.65 ಕೋಟಿ ರೂ. ವಂಚಿಸಿದೆ ಎಂದು ಬ್ಯಾಂಕ್ ತಿಳಿಸಿದೆ.

2014 ರಿಂದ ನಮ್ಮೊಂದಿಗೆ ವ್ಯವಹರಿಸುವ ಡಿಎಚ್‌ಎಫ್‌ಎಲ್(ಡೀಫಾಲ್ಟ್ ಘಟಕ) ಒಕ್ಕೂಟದ ವ್ಯವಸ್ಥೆಯಲ್ಲಿ ವಿವಿಧ ಸಾಲ ಸೌಲಭ್ಯಗಳನ್ನು ಪಡೆದುಕೊಂಡಿದೆ, ಅದರ ಸದಸ್ಯ ಬ್ಯಾಂಕುಗಳಲ್ಲಿ ನಾವು ಒಬ್ಬರಾಗಿದ್ದೇವೆ. ಖಾತೆಯ ನಡವಳಿಕೆ ಮತ್ತು ಇತರ ಬೆಳವಣಿಗೆಗಳಲ್ಲಿ ಆರಂಭಿಕ ಎಚ್ಚರಿಕೆ ಸಂಕೇತಗಳ(ಇಡಬ್ಲ್ಯೂಎಸ್) ಗಮನಿಸಿ, ಅದರ ಖಾತೆಯನ್ನು ನವೆಂಬರ್ 11, 2019 ರಂದು ಕೆಂಪು ಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿದೆ.

ಈ ಕಂಪನಿಗಳ ಸಾಲ ಖಾತೆಗಳನ್ನು ಅಕ್ಟೋಬರ್ 30, 2019 ರಂದು ಅನುತ್ಪಾದಕ ಆಸ್ತಿ(ಎನ್ ಪಿಎ) ಎಂದು ವರ್ಗೀಕರಿಸಲಾಗಿದೆ. ಕಂಪನಿಗೆ ಈ ಹಿಂದೆ ವಿಸ್ತರಿಸಿದ ಸಾಲ ಸೌಲಭ್ಯಗಳಲ್ಲಿ ದುರುಪಯೋಗ ಮತ್ತು ಹಣವನ್ನು ಬೇರೆಡೆಗೆ ತಿರುಗಿಸಿದ್ದಕ್ಕಾಗಿ 180.13 ಕೋಟಿ ರೂ.ಗಳ ವಂಚನೆಯಾಗಿದೆ ಎಂದು ಕರ್ನಾಟಕ ಬ್ಯಾಂಕ್ ಆರ್‌ಬಿಐಗೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT