ಫ್ಯಾಬೆಲ್ಲೆ ಲಾ ಟೆರ್ರೆ 
ವಾಣಿಜ್ಯ

'ಫ್ಯಾಬೆಲ್ಲೆ ಲಾ ಟೆರ್ರೆ': ಐಟಿಸಿ ನೂತನ ಉತ್ಪನ್ನ ಅನಾವರಣ

ದೇಶದಲ್ಲಿ ಸರಿಸಾಟಿ ಇಲ್ಲದ ಚಾಕೊಲೇಟ್ ಅನುಭವಗಳನ್ನು ಸೃಷ್ಟಿಸಿ ಪೂರೈಸುತ್ತಿರುವ ಐಟಿಸಿ ಲಿಮಿಟೆಡ್ ನ ಫ್ಯಾಬೆಲ್‍ ಚಾಕೊಲೇಟ್ಸ್ ಫ್ಯಾಬೆಲ್ಲೆ ಲಾ ಟೆರ್ರೆ (‘Fabelle La Terre’) ಬಿಡುಗಡೆ ಮಾಡಿದೆ. 

ನವದೆಹಲಿ: ದೇಶದಲ್ಲಿ ಸರಿಸಾಟಿ ಇಲ್ಲದ ಚಾಕೊಲೇಟ್ ಅನುಭವಗಳನ್ನು ಸೃಷ್ಟಿಸಿ ಪೂರೈಸುತ್ತಿರುವ ಐಟಿಸಿ ಲಿಮಿಟೆಡ್ ನ ಫ್ಯಾಬೆಲ್‍ ಚಾಕೊಲೇಟ್ಸ್ ಫ್ಯಾಬೆಲ್ಲೆ ಲಾ ಟೆರ್ರೆ (‘Fabelle La Terre’) ಬಿಡುಗಡೆ ಮಾಡಿದೆ. 

ಇದು ಶೇ.100ರಷ್ಟು ಅರ್ಥ್ ಪಾಸಿಟಿವ್ ಚಾಕೊಲೇಟ್ ಆಗಿದ್ದು, ಒಂದು ಸೃಜನಶೀಲ ಮರುಕಲ್ಪನೆ, ಆಗಿ ಅನಾವರಣಗೊಂಡಿದೆ. ಈ ಮೂಲಕ ಬ್ರ್ಯಾಂಡ್ ದೀಪಾವಳಿಗೂ ಮುಂಚಿತವಾಗಿ, ವಿಶಿಷ್ಟವಾದ ಒನ್-ಆಫ್‍-ಇಟ್ಸ್ -ಕೈಂಡ್ ಎಂಬಂಥ ಚಾಕೊಲೇಟ್ ವೇರಿಯೆಂಟ್ ಅನ್ನು  ಅನಾವರಣಗೊಳಿಸಿದೆ. 

ವಿಶ್ವಾಸ, ಸುರಕ್ಷತೆ ಮತ್ತು ಶುಚಿತ್ವವನ್ನು ಒದಗಿಸುವ ವಿಶ್ವಾಸಾರ್ಹ ಬ್ರಾಂಡ್ ಗಳ ಉತ್ಪನ್ನಗಳನ್ನು ಖರೀದಿಸುವ ಬಳಕೆದಾರರ ಟ್ರೆಂಡ್‍ ಹೆಚ್ಚಾಗುತ್ತಿದ್ದು, ಅದನ್ನು ವರ್ಚುವಲ್ ಇವೆಂಟ್ ಒಂದರಲ್ಲಿ ಬಿಡುಗಡೆಯಾದ ಇದು ಸಕಾರಾತ್ಮಕ ಪರಿಣಾಮವನ್ನು ಅಂತರ್ಗತಗೊಳಿಸಿಕೊಂಡು  ಈಡೇರಿಸುತ್ತಿದೆ.

ಬಿಡುಗಡೆಯ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಐಟಿಸಿಯ ಚಾಕೊಲೇಟ್, ಕಾಫಿ, ಕಾನ್ಫೆಕ್ಷನರಿ ಆ್ಯಂಡ್ ನ್ಯೂ ಕೆಟಗರಿ ಡೆವಲಪ್ ಮೆಂಟ್ ಸಿಒಒ ಅನುಜ್ ರುಸ್ತಗಿ, ಸರಿಸಾಟಿ ಇಲ್ಲದ ಮತ್ತು ಒನ್-ಆಫ್-ಇಟ್ಸ್-ಕೈಂಡ್ ಚಾಕೊಲೇಟ್ ಅನುಭವದ ಮಾದರಿಯನ್ನು ಪೂರೈಸುವುದು ಫ್ಯಾಬೆಲ್ ನ  ಮೂಲ ತತ್ವದ ಕೇಂದ್ರ ಬಿಂದುವಾಗಿದೆ. 

ಪ್ರಸ್ತುತ ಪರಿಸ್ಥಿತಿಯು ನಮ್ಮೆಲ್ಲರ ಪ್ರಜ್ಞೆಯನ್ನು ಬಡಿದೆಬ್ಬಿಸಿದೆ ಮತ್ತು ಪರಿಸರವನ್ನು ರಕ್ಷಿಸಬೇಕಾದ ತುರ್ತು ಅಗತ್ಯ, ನಮ್ಮ ಚಿಂತನೆ ಮತ್ತು ಕ್ರಿಯೆಗಳಲ್ಲಿ ಸುಸ್ಥಿರತೆ ಇರಬೇಕಾ ಬಗ್ಗೆ ಜಾಗೃತಿಯನ್ನು ಮೂಡಿಸಿದೆ. ಭೂಮಿ ತಾಯಿಗೆ ಕೊಡುಗೆ ನೀಡುವಲ್ಲಿ ‘ಫ್ಯಾಬೆಲ್ ಅರ್ಥ್’ ನ ಬಿಡುಗಡೆ ನಮ್ಮ  ಹೆಜ್ಜೆಯಾಗಿದ್ದು, ಇದಕ್ಕೆ ಗ್ರಾಹಕರ ಬೆಂಬಲವನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದರು. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT