ಸಹರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ 
ವಾಣಿಜ್ಯ

ಸಹರಾ ಗ್ರೂಪ್ ನಿಂದ ಹೂಡಿಕೆದಾರರಿಗೆ 62,600 ಕೋಟಿ ರೂ. ಹಣ ಬಾಕಿ: ಸುಪ್ರೀಂ ಕೋರ್ಟ್ ಮೊರೆ ಹೋದ ಸೆಬಿ 

ಸಹರಾ ಗ್ರೂಪ್ ಗೆ ಮತ್ತೊಂದು ಬಾರಿ ಹಿನ್ನೆಡೆಯಾಗಿದೆ. ಭಾರತದ ಷೇರು ಮಾರುಕಟ್ಟೆ ನಿಯಂತ್ರಕ ಪ್ರಾಧಿಕಾರ ಸೆಬಿ, ಹೂಡಿಕೆದಾರರಿಗೆ ನೀಡಲಿರುವ ಬಾಕಿ ಉಳಿಕೆ ಮೊತ್ತ 62 ಸಾವಿರದ 602 ಕೋಟಿ ರೂಪಾಯಿಗಳನ್ನು ಠೇವಣಿಯಿರಿಸಲು ಸಹಾರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ಮತ್ತು ಅವರ ಎರಡು ಕಂಪೆನಿಗಳಿಗೆ ಆದೇಶ ನೀಡಬೇಕೆಂದು ಸೆಬಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ನವದೆಹಲಿ:ಸಹರಾ ಗ್ರೂಪ್ ಗೆ ಮತ್ತೊಂದು ಬಾರಿ ಹಿನ್ನೆಡೆಯಾಗಿದೆ. ಭಾರತದ ಷೇರು ಮಾರುಕಟ್ಟೆ ನಿಯಂತ್ರಕ ಪ್ರಾಧಿಕಾರ ಸೆಬಿ, ಹೂಡಿಕೆದಾರರಿಗೆ ನೀಡಲಿರುವ ಬಾಕಿ ಉಳಿಕೆ ಮೊತ್ತ 62 ಸಾವಿರದ 602 ಕೋಟಿ ರೂಪಾಯಿಗಳನ್ನು ಠೇವಣಿಯಿರಿಸಲು ಸಹಾರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ಮತ್ತು ಅವರ ಎರಡು ಕಂಪೆನಿಗಳಿಗೆ ಆದೇಶ ನೀಡಬೇಕೆಂದು ಸೆಬಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ಸೆಬಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ, ಇಷ್ಟು ಮೊತ್ತವನ್ನು ಭರಿಸಲು ಸುಬ್ರತಾ ರಾಯ್ ಕಂಪೆನಿಗೆ ಸಾಧ್ಯವಾಗದಿದ್ದರೆ ಅವರನ್ನು ಕಸ್ಟಡಿಗೊಪ್ಪಿಸಬೇಕೆಂದು ಸಹ ಒತ್ತಾಯಿಸಿದೆ. 2014ರ ಮಾರ್ಚ್ ನಲ್ಲಿ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಎದುರಿಸಲು ವಿಫಲವಾದ ಹಿನ್ನೆಲೆಯಲ್ಲಿ ಬಂಧನಕ್ಕೀಡಾಗಿದ್ದ ಸುಬ್ರತಾ ರಾಯ್ 2016ರಿಂದ ಜಾಮೀನಿನ ಮೇಲೆ ಹೊರಗಿದ್ದಾರೆ.

ಸಹರಾ ಗ್ರೂಪ್ 2012 ಮತ್ತು 2015ರ ಕೋರ್ಟ್ ಆದೇಶವನ್ನು ಪಾಲಿಸಲು ವಿಫಲವಾಗಿದೆ. ಶೇಕಡಾ 15ರಷ್ಟು ವಾರ್ಷಿಕ ಬಡ್ಡಿ ಮೊತ್ತ ಸೇರಿದಂತೆ ಹೂಡಿಕೆದಾರರಿಂದ ಸಂಗ್ರಹಿಸಿದ ಎಲ್ಲಾ ಮೊತ್ತವನ್ನು ಸೆಬಿಯನ್ನಿ ಠೇವಣಿಯಿರಿಸಲು ಕಂಪೆನಿ ವಿಫಲವಾಗಿದೆ ಎಂದು ಸೆಬಿ ಆರೋಪಿಸಿದೆ. ಆದರೆ ಸಹರಾ ಗ್ರೂಪ್ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. 

ಹೂಡಿಕೆದಾರರಿಂದ ಸಂಗ್ರಹಿಸಿರುವ ಬಹುತೇಕ ಠೇವಣಿಗಳನ್ನು ಹಿಂತಿರುಗಿಸಿದ್ದು, ಸಂಬಂಧಪಟ್ಟ ದಾಖಲೆಗಳನ್ನು ಸೆಬಿಗೆ ನೀಡಲಾಗಿದೆ. ಹೂಡಿಕೆ ಮಾಡಿ ಹಣ ಪಡೆಯಲು ಬಾಕಿ ಇರುವವರು ಹಣ ಪಡೆಯುವಂತೆ ಪತ್ರಿಕೆಗಳಲ್ಲಿ ಜಾಹೀರಾತು ಕೂಡ ನೀಡಿದ್ದೆವು ಎಂದು ಸಹರಾ ಗ್ರೂಪ್ ಈ ಹಿಂದೆ ಕೋರ್ಟ್ ಗೆ ಹೇಳಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT