ಸಾಂದರ್ಭಿಕ ಚಿತ್ರ 
ವಾಣಿಜ್ಯ

ಬಿಎಸ್ಎನ್ಎಲ್, ಎಂಟಿಎನ್ಎಲ್ ಗೆ ಇದುವರೆಗೆ 73,000 ಕೋಟಿ ರೂ. ನಷ್ಟ

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಪರೇಟರ್ ಬಿಎಸ್‌ಎನ್‌ಎಲ್ ಆರಂಭದಿಂದ ಮಾರ್ಚ್ 2022 ರವರೆಗೆ 57,671 ಕೋಟಿ ರೂಪಾಯಿ ಹಾಗೂ ಎಂಟಿಎನ್‌ಎಲ್ ಸುಮಾರು 14,989 ಕೋಟಿ ರೂಪಾಯಿ ನಷ್ಟ ಅನುಭವಿಸಿವೆ.

ನವದೆಹಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಪರೇಟರ್ ಬಿಎಸ್‌ಎನ್‌ಎಲ್ ಆರಂಭದಿಂದ ಮಾರ್ಚ್ 2022 ರವರೆಗೆ 57,671 ಕೋಟಿ ರೂಪಾಯಿ ಹಾಗೂ ಎಂಟಿಎನ್‌ಎಲ್ ಸುಮಾರು 14,989 ಕೋಟಿ ರೂಪಾಯಿ ನಷ್ಟ ಅನುಭವಿಸಿವೆ. ಹಲವು ವರ್ಷಗಳ ಕಾಲ ಅತಿ ಹೆಚ್ಚು ಉದ್ಯೋಗಿಗಳಿದ್ದದ್ದು, ಸಾಲದ ಹೊರೆ, ಮಾರುಕಟ್ಟೆಯಲ್ಲಿ ಕಠಿಣ ಸ್ಪರ್ಧೆ ಮತ್ತು 4ಜಿ ಸೇವೆಗಳ ಕೊರತೆ ಈ ನಷ್ಟಕ್ಕೆ ಕಾರಣ ಎಂದು ಟೆಲಿಕಾಂ ಖಾತೆ ರಾಜ್ಯ ಸಚಿವ ದೇವುಸಿನ್ಹ ಚೌಹಾಣ್ ಅವರು ತಿಳಿಸಿದ್ದಾರೆ.

ನಷ್ಟದಲ್ಲಿರುವ ಟೆಲ್ಕೊಗೆ ಹಣ ನೀಡುತ್ತಿರುವ ಬಗ್ಗೆ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಸಚಿವರು, ಸರ್ಕಾರದ ನಾಗರಿಕ-ಕೇಂದ್ರಿತ ಯೋಜನೆಗಳನ್ನು ಜಾರಿಗೆ ತರಲು ಈ ಎರಡೂ ಟೆಲಿಕಾಂಗಳು ಪ್ರಮುಖವಾಗಿವೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಮತ್ತು ದೂರದ ಬಯಲು ಪ್ರದೇಶಗಳಲ್ಲಿ ಇವುಗಳ ಅಗತ್ಯ ಇದೆ. ಬಿಎಸ್ಎನ್ಎಲ್ ಸೆಪ್ಟೆಂಬರ್ 30, 2022 ರವರೆಗೆ 24,58,827 FTTH (ಮನೆಗೆ ಫೈಬರ್) ಸಂಪರ್ಕಗಳನ್ನು ಒದಗಿಸಿದೆ ಎಂದು ಹೇಳಿದ್ದಾರೆ.

ಇದಲ್ಲದೆ, ಸರ್ಕಾರದ ಆತ್ಮ-ನಿರ್ಭರ್ ಉಪಕ್ರಮಕ್ಕೆ ಅನುಗುಣವಾಗಿ, ಭಾರತೀಯ 4G ಸ್ಟಾಕ್ ಅನ್ನು ನಿಯೋಜಿಸಲು BSNL ಗೆ ನಿರ್ದೇಶಿಸಲಾಯಿತು ಎಂದು ಸಚಿವರು ತಿಳಿಸಿದ್ದಾರೆ.

ಇತ್ತೀಚೆಗೆ, ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು BSNL ನ 4G ತಂತ್ರಜ್ಞಾನವನ್ನು ಮುಂದಿನ ಐದರಿಂದ ಏಳು ತಿಂಗಳಲ್ಲಿ 5G ಗೆ ಅಪ್‌ಗ್ರೇಡ್ ಮಾಡಲಾಗುವುದು ಎಂದು ಹೇಳಿದ್ದಾರೆ. 

BSNL ದೇಶಾದ್ಯಂತ ಸುಮಾರು 1,35,000 ಮೊಬೈಲ್ ಟವರ್‌ಗಳನ್ನು ಹೊಂದಿದ್ದು, ಗ್ರಾಮೀಣ ಬೆಲ್ಟ್‌ನಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿದೆ. ಖಾಸಗಿ ಟೆಲಿಕಾಂ ಆಪರೇಟರ್‌ಗಳು ಗ್ರಾಮೀಣ ಪ್ರದೇಶಗಳನ್ನು ಇನ್ನೂ ಒಳಗೊಳ್ಳಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT