ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ 
ವಾಣಿಜ್ಯ

ಜುಲೈ 31 ರವರೆಗೆ 6.77 ಕೋಟಿ ಐಟಿಆರ್ ಸಲ್ಲಿಕೆ; ಮೊದಲ ಬಾರಿ ಸಲ್ಲಿಸಿದವರ ಸಂಖ್ಯೆ 53.67 ಲಕ್ಷ!

ದಂಡ ರಹಿತ ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಜುಲೈ 31ಕ್ಕೆ ಕೊನೆಯಾಗಿದ್ದು, ಈ ವರೆಗೂ 6.77 ಕೋಟಿ ಐಟಿಆರ್ ಸಲ್ಲಿಕೆಯಾಗಿದ್ದು, ಈ ಪೈಕಿ 53.67 ಲಕ್ಷ ಐಟಿಆರ್ ಸಲ್ಲಿಕೆಗಳು ಮೊದಲ ಬಾರಿ ಸಲ್ಲಿಸಿದವರಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.

ನವದೆಹಲಿ: ದಂಡ ರಹಿತ ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಜುಲೈ 31ಕ್ಕೆ ಕೊನೆಯಾಗಿದ್ದು, ಈ ವರೆಗೂ 6.77 ಕೋಟಿ ಐಟಿಆರ್ ಸಲ್ಲಿಕೆಯಾಗಿದ್ದು, ಈ ಪೈಕಿ 53.67 ಲಕ್ಷ ಐಟಿಆರ್ ಸಲ್ಲಿಕೆಗಳು ಮೊದಲ ಬಾರಿ ಸಲ್ಲಿಸಿದವರಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.

ತೆರಿಗೆ ಇಲಾಖೆ ಮಾಹಿತಿ ಪ್ರಕಾರ, 2023-24ರ ಮೌಲ್ಯಮಾಪನ ವರ್ಷಕ್ಕೆ (ಎವೈ) 6.77 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಗಳನ್ನು ಜುಲೈ 31, 2023 ರವರೆಗೆ ಸಲ್ಲಿಸಲಾಗಿದೆ. 31 ಜುಲೈ 2023 ರವರೆಗೆ 53.67 ಲಕ್ಷ ಐಟಿಆರ್‌ಗಳನ್ನು ಮೊದಲ ಬಾರಿಗೆ ಸಲ್ಲಿಸಿದವರು ಸಲ್ಲಿಸಿದ್ದಾರೆ, ಇದು ತೆರಿಗೆ ಮೂಲವನ್ನು ವಿಸ್ತರಿಸುವ ನ್ಯಾಯೋಚಿತ ಸೂಚನೆಯಾಗಿದೆ ಎಂದು ತೆರಿಗೆ ಇಲಾಖೆ ಹೇಳಿದೆ. 

 ಮೌಲ್ಯಮಾಪನ ವರ್ಷ AY2023-24 ಗಾಗಿ ಸಲ್ಲಿಸಿದ 6.77 ಕೋಟಿ ITR ಗಳಲ್ಲಿ ಶೇ.49.18 ITR ಗಳು ITR-1 (3.33 ಕೋಟಿ) ಆಗಿದ್ದು, ಶೇ.11.97ರಷ್ಟು ಅಂದರೆ 81.12 ಲಕ್ಷ ಸಲ್ಲಿಕೆಗಳು  ITR-2 ಆಗಿವೆ. ಅಂತೆಯೇ ಶೇ.11.13ರಷ್ಟು ಅಂದರೆ 75.40 ಲಕ್ಷ ಸಲ್ಲಿಕೆಗಳು  ITR-3ಯದ್ದಾಗಿದ್ದು, ಶೇ. 26.77 ಅಂದರೆ 1.81 ಕೋಟಿ ಐಟಿಆರ್ ಸಲ್ಲಿಕೆಗಳು ITR-4ನದ್ದಾಗಿವೆ. ಕಡಿಮೆ ಪ್ರಮಾಣದಲ್ಲಿ ಅಂದರೆ ಶೇ.0.94% ಅಂದರೆ 6.40 ಲಕ್ಷ ಐಟಿಆರ್ ಸಲ್ಲಿಕೆಗಳು ITR-5 ನದ್ದಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಈ ಐಟಿಆರ್‌ಗಳಲ್ಲಿ 46% ಕ್ಕಿಂತ ಹೆಚ್ಚು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿರುವ ಆನ್‌ಲೈನ್ ಐಟಿಆರ್ ಸೌಲಭ್ಯವನ್ನು ಬಳಸಿಕೊಂಡು ಸಲ್ಲಿಸಲಾಗಿದೆ ಮತ್ತು ಬಾಕಿಯನ್ನು ಆಫ್‌ಲೈನ್ ಐಟಿಆರ್ ಉಪಯುಕ್ತತೆಗಳನ್ನು ಬಳಸಿಕೊಂಡು ಸಲ್ಲಿಸಲಾಗಿದೆ. ಗರಿಷ್ಠ ಫೈಲಿಂಗ್ ಅವಧಿಯಲ್ಲಿ ಇ-ಫೈಲಿಂಗ್ ಪೋರ್ಟಲ್ ಬೃಹತ್ ದಟ್ಟಣೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ತೆರಿಗೆದಾರರಿಗೆ ಐಟಿಆರ್‌ಗಳನ್ನು ಸಲ್ಲಿಸಲು ತಡೆರಹಿತ ಅನುಭವವನ್ನು ನೀಡುತ್ತದೆ ಎಂದು ತೆರಿಗೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಜುಲೈನಲ್ಲಿ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ 32 ಕೋಟಿಗೂ ಹೆಚ್ಚು ಯಶಸ್ವಿ ಲಾಗಿನ್‌ಗಳಾಗಿದ್ದು, ಜುಲೈ 31 ರಂದು, ಯಶಸ್ವಿ ಲಾಗಿನ್‌ಗಳು 2.74 ಕೋಟಿಗಳಾಗಿವೆ. ಇ-ಫೈಲಿಂಗ್ ಪೋರ್ಟಲ್ ಪ್ರತಿ ಗಂಟೆಗೆ 4,96,559 ITR ಫೈಲಿಂಗ್ ಅನ್ನು ಜುಲೈ 31, 2023 ರಂದು ಸಂಜೆ 5 ರಿಂದ 6 ರವರೆಗೆ ಗಮನಿಸಿದೆ, ಪ್ರತಿ ಸೆಕೆಂಡಿಗೆ ITR ಫೈಲಿಂಗ್‌ನ ಗರಿಷ್ಠ ದರ 486 (31-ಜುಲೈ-2023: 16:35) ರವೇಳೆಗೆ) ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

SCROLL FOR NEXT