ಸಂಗ್ರಹ ಚಿತ್ರ 
ವಾಣಿಜ್ಯ

ಬ್ಲಿಂಕಿಟ್‌ 2023: ಗ್ರಾಹಕನೋರ್ವನಿಂದ ಬರೋಬ್ಬರಿ 9,940 ಕಾಂಡೋಮ್‌ ಖರೀದಿ!

ದಕ್ಷಿಣ ದೆಹಲಿಯ ಗ್ರಾಹಕರೊಬ್ಬರು 2023ರಲ್ಲಿ ಜೊಮಾಟೊ ಒಡೆತನದ ತ್ವರಿತ ವಿತರಣಾ ವೇದಿಕೆ ಬ್ಲಿಂಕಿಟ್‌ನಿಂದ 9,940 ಕಾಂಡೋಮ್‌ಗಳನ್ನು ಆರ್ಡರ್ ಮಾಡಿದ್ದಾನೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ನವದೆಹಲಿ: ದಕ್ಷಿಣ ದೆಹಲಿಯ ಗ್ರಾಹಕರೊಬ್ಬರು 2023ರಲ್ಲಿ ಜೊಮಾಟೊ ಒಡೆತನದ ತ್ವರಿತ ವಿತರಣಾ ವೇದಿಕೆ ಬ್ಲಿಂಕಿಟ್‌ನಿಂದ 9,940 ಕಾಂಡೋಮ್‌ಗಳನ್ನು ಆರ್ಡರ್ ಮಾಡಿದ್ದಾನೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

'ಬ್ಲಿಂಕಿಟ್ ಟ್ರೆಂಡ್ಸ್ 2023' ಪ್ರಕಾರ, ಗುರುಗ್ರಾಮ್ 2023ರಲ್ಲಿ 65,973 ಲೈಟರ್‌ಗಳನ್ನು ಆರ್ಡರ್ ಮಾಡಿದರೆ, ನಗರವು ಈ ವರ್ಷ ತಂಪು ಪಾನೀಯಗಳಿಗಿಂತ ಹೆಚ್ಚು ಟಾನಿಕ್ ನೀರನ್ನು (ಕಾರ್ಬೊನೇಟೆಡ್ ಪಾನೀಯಗಳು) ಆರ್ಡರ್ ಮಾಡಿದೆ.

ಕಂಪನಿಯ ಪ್ರಕಾರ, ಈ ವರ್ಷ ಸುಮಾರು 30,02,080 ಪಾರ್ಟಿಸ್ಮಾರ್ಟ್ ಟ್ಯಾಬ್ಲೆಟ್‌ಗಳನ್ನು (ಮದ್ಯ ಸೇವಿಸಿದ ನಂತರದ ಹ್ಯಾಂಗೊವರ್ ತಪ್ಪಿಸಲು) ಖರೀದಿಸಲಾಗಿದೆ. ಬೆಂಗಳೂರಿನಿಂದ ಗ್ರಾಹಕರೊಬ್ಬರು 1,59,900 ರೂಪಾಯಿ ಮೌಲ್ಯದ iPhone 15 Pro Max, ಲೇಸ್ ಪ್ಯಾಕ್ ಮತ್ತು ಆರು ಬಾಳೆಹಣ್ಣುಗಳನ್ನು ಆರ್ಡರ್ ಮಾಡಿದ್ದಾರೆ.

ಮಧ್ಯರಾತ್ರಿಯಲ್ಲಿ ಸುಮಾರು 3,20,04,725 ಮ್ಯಾಗಿ ಪ್ಯಾಕೆಟ್‌ಗಳನ್ನು ವಿತರಿಸಲಾಗಿದೆ. ಗ್ರಾಹಕರೊಬ್ಬರು ಒಂದು ಆರ್ಡರ್ ನಲ್ಲಿ 101 ಲೀಟರ್ ಮಿನರಲ್ ವಾಟರ್ ಖರೀದಿಸಿದ್ದರು. ಈ ವರ್ಷ ಸುಮಾರು 80,267 ಗಂಗಾಜಲ್ ಬಾಟಲಿಗಳನ್ನು ಬ್ಲಿಂಕಿಟ್ ಮೂಲಕ ವಿತರಿಸಲಾಗಿದೆ. 2023ರಲ್ಲಿ ಓರ್ವ ಗ್ರಾಹಕ 4,832 ಸ್ನಾನದ ಸಾಬೂನುಗಳನ್ನು ಖರೀದಿಸಿದ್ದಾನೆ.

ಈ ವರ್ಷದಲ್ಲಿ ಸುಮಾರು 351,033 ಪ್ರಿಂಟ್‌ಔಟ್‌ಗಳನ್ನು ಡೆಲಿವರಿ ಮಾಡಲಾಗಿದೆ. 45,16,490 ಎನೋ ಪೌಚ್‌ಗಳು,  1,22,38,740 ಐಸ್‌ಕ್ರೀಮ್‌ಗಳು ಮತ್ತು 8,50,011 ಐಸ್ ಕ್ಯೂಬ್ ಪ್ಯಾಕೆಟ್‌ಗಳನ್ನು ಡೆಲಿವರಿ ಮಾಡಲಾಗಿದೆ.

2023ರಲ್ಲಿ ಹೈದರಾಬಾದ್‌ನಿಂದ ಗ್ರಾಹಕನೊಬ್ಬ 17,009 ಕೆಜಿ ಅಕ್ಕಿಯನ್ನು ಆರ್ಡರ್ ಮಾಡಿದ್ದಾರೆ. ಇನ್ನು ಒಂದು ತಿಂಗಳಲ್ಲಿ 38 ಒಳ ಉಡುಪುಗಳ ಆರ್ಡರ್ ಮಾಡಿದ್ದರು. ಓರ್ವ ಗ್ರಾಹಕ 972 ಮೊಬೈಲ್ ಚಾರ್ಜರ್‌ಗಳನ್ನು ಆರ್ಡರ್ ಮಾಡಿದ್ದಾರೆ.

ಈ ಆರ್ಡರ್ ಪಟ್ಟಿಯನ್ನು ಬ್ಲಿಂಕಿಟ್ ಸಿಇಒ ಅಲ್ಬಿಂದರ್ ದಿಂಡ್ಸಾ ಅವರು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 2023ರ ಬ್ಲಿಂಕಿಟ್‌ನಲ್ಲಿ ಮಾದರಿಗಳನ್ನು ಖರೀದಿಸುವ ಕುರಿತು ಬಹಳಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!

ಕೇವಲ 4 ಚಿತ್ರ ಮಾಡಿದ ನಟನಿಗೆ 'ಸರ್' ಅಂತೀರಲ್ಲ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರ ಬೇಸರ, Video!

ಶ್ರೀಲಂಕಾ ವಿರುದ್ಧ 165 ರನ್ ಗಳಿಂದ ಗೆಲುವು: WTC ಪಾಯಿಂಟ್ ಪಟ್ಟಿಯಲ್ಲಿ ಭಾರತದ ಸ್ಥಾನ ಬದಲಾವಣೆ ಆಯ್ತಾ?

ಸಿಎಂ ವಿಜಯ್ ಯು- ಟರ್ನ್: ಮತ್ತೊಂದು ಮಹತ್ವದ ಆದೇಶ ಹಿಂಪಡೆದ ತಮಿಳುನಾಡು ಸರ್ಕಾರ!