ಅದಾನಿ ಸಮೂಹ 
ವಾಣಿಜ್ಯ

ಬ್ಯಾಂಕ್ ಗಳಿಂದ ಅದಾನಿ ಸಮೂಹಕ್ಕೆ ನೀಡಿರುವ ಸಾಲದ ವಿವರ ಕೇಳಿದ ಆರ್ ಬಿಐ 

 ಆರ್ ಬಿಐ ಅದಾನಿ ಸಮೂಹಕ್ಕೆ ಸಾಲ ನೀಡಿರುವ ವಿವರಗಳನ್ನು ಕೇಳಿದೆ ಎಂದು ಬ್ಯಾಂಕ್ ಮೂಲಗಳು ಹೇಳಿವೆ.

ಮುಂಬೈ: ಆರ್ ಬಿಐ ಅದಾನಿ ಸಮೂಹಕ್ಕೆ ಸಾಲ ನೀಡಿರುವ ವಿವರಗಳನ್ನು ಕೇಳಿದೆ ಎಂದು ಬ್ಯಾಂಕ್ ಮೂಲಗಳು ಹೇಳಿವೆ.

ಷೇರುಗಳ ಬೆಲೆಯಲ್ಲಿ ತೀವ್ರ ಕುಸಿತದ ನಡುವೆ ಅದಾನಿ ಸಮೂಹ ರೂ.20,000 ಕೋಟಿ ರೂಗಳ ಫಾಲೋ ಆನ್ ಷೇರುಗಳ ಮಾರಾಟವನ್ನು ಹಿಂಪಡೆಯುವುದಾಗಿ ಫೆ.1 ರಂದು ಘೋಷಿಸಿದ 24 ಗಂಟೆಗಳಲ್ಲಿ ಆರ್ ಬಿಐ ಬ್ಯಾಂಕ್ ಗಳಿಂದ ಸಾಲದ ಮಾಹಿತಿಯನ್ನು ಕೇಳಿದೆ.

ಇನ್ನು ಎಫ್ ಪಿಒ ಗಳನ್ನು ಹಿಂಪಡೆಯುವ ನಿರ್ಧಾರ ಘೋಷಿಸಿದ ಬೆನ್ನಲ್ಲೇ ಸ್ವಿಸ್ ಬ್ಯಾಂಕ್ ಕ್ರೆಡಿಟ್ ಸ್ಯೂಸ್ಸೆ ಅದಾನಿ ಸಂಸ್ಥೆಯ ಬಾಂಡ್ ಗಳನ್ನು ಸಾಲ ನೀಡುವ ಪ್ರಕ್ರಿಯೆಯಲ್ಲಿ ಆಧಾರವಾಗಿ ಪರಿಗಣಿಸುವುದನ್ನು ನಿಲ್ಲಿಸಿರುವುದಾಗಿ ಘೋಷಿಸಿದೆ. 

ಅಮೇರಿಕಾದ ಶಾರ್ಟ್ ಸೆಲ್ಲರ್ ಹಿಂಡನ್ ಬರ್ಗ್ ಸಂಶೋಧನೆ ವರದಿ ಅದಾನಿ ಸಮೂಹ ಷೇರು ಮಾರುಕಟ್ಟೆಗೆ ಸಂಬಂಧಿಸಿದಂತೆ ಅಕ್ರಮವೆಸಗಿದೆ ಎಂದು ಆರೋಪಿಸಿದಾಗಿನಿಂದಲೂ ಅದಾನಿ ಷೇರುಗಳು ಕುಸಿತ ದಾಖಲಿಸಿವೆ, 

ದೊಡ್ಡ ಸಾಲಗಳ ಮೇಲಿನ ಮಾಹಿತಿಯ ಕೇಂದ್ರ ಭಂಡಾರ (ಸಿಆರ್ ಐಎಲ್ ಸಿ) ಡೇಟಾ ಬೇಸ್ ನ ಭಾಗವಾಗಿ ಆರ್ ಬಿಐ ಬ್ಯಾಂಕ್ ಗಳ ದೊಡ್ಡ ಕಾರ್ಪೊರೇಟ್ ಸಾಲಗಾರರ ಕುರಿತ ಮಾಹಿತಿಗೆ ಪ್ರವೇಶ ಹೊಂದಿರುತ್ತವೆ ಎಂದು ಬ್ಯಾಂಕಿಂಗ್ ಮೂಲಗಳು ತಿಳಿಸಿವೆ,
 
ಬ್ಯಾಂಕ್ ಗಳು ಹಲವು ಬಾರಿ ಹೊಣೆಗಾರಿಗೆ ಭದ್ರತೆಗಳನ್ನಿಟ್ಟುಕೊಂಡು ಸಾಲ ನೀಡುತ್ತವೆ ಹಾಗೂ ಅದಾನಿ ಸಮೂಹದ 10 ಲಿಸ್ಟೆಡ್ ಸಂಸ್ಥೆಗಳ ಈಕ್ವಿಟಿ ಷೇರುಗಳ ಬೆಲೆಯಲ್ಲಿ ಭರಿ ಕುಸಿತ ಕಂಡಿರುವುದರಿಂದ ಈ ಹೊಣೆಗಾರಿಗೆ ಭದ್ರತೆಗಳ ಮೌಲ್ಯವೂ ಕುಸಿತ ಕಂಡಿರುತ್ತದೆ.
 
ಹಿಂಡನ್ ಬರ್ಗ್ ಸಂಶೋಧನೆ ವರದಿ ಪ್ರಕಟವಾದ ಬೆನ್ನಲ್ಲೆ ಹೂಡಿಕೆದಾರರಲ್ಲಿ ಆತಂಕ ಮೂಡಿದ್ದು, ಬ್ಯಾಂಕ್ ಗಳ ಷೇರುಗಳ ಮಾರಾಟಕ್ಕೆ ಒತ್ತಡ ಹೆಚ್ಚಿದೆ. ಹೂಡಿಕೆದಾರರ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿಐ ಅದಾನಿ ಸಮೂಹಕ್ಕೆ ನೀಡಿರುವ ಸಾಲ ನಗದು ಉತ್ಪಾದಿಸುವ ಆಸ್ತಿಗಳ ಮೂಲಕ ಸುರಕ್ಷಿತವಾಗಿದೆ ಎಂದು ಹೇಳಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT