ಬೈಜೂಸ್ 
ವಾಣಿಜ್ಯ

ಬೈಜೂಸ್‌ಗೆ ಮತ್ತೊಂದು ಸಂಕಷ್ಟ: ಆಡಿಟರ್ ಸಂಸ್ಥೆ ಹೊರಕ್ಕೆ!

ಬೆಂಗಳೂರು ಮೂಲದ ಎಜುಟೆಕ್‌ ಸ್ಟಾರ್ಟಪ್‌ ಕಂಪನಿ 'ಬೈಜೂಸ್‌' ಇದೀಗ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಈ ಬಾರಿ, 2021-2022 ರ ಹಣಕಾಸು ವರ್ಷಕ್ಕೆ ಆರ್ಥಿಕ ಹೇಳಿಕೆಗಳ ಸಲ್ಲಿಕೆ ವಿಳಂಬದಿಂದಾಗಿ ಲೆಕ್ಕಪರಿಶೋಧಕ 'ಡೆಲಾಯ್ಟ್ ಹ್ಯಾಸ್ಕಿನ್ಸ್ & ಸೇಲ್ಸ್' ಕಂಪನಿಯು ಬೈಜೂಸ್‌ಗೆ ತನ್ನ ಆಡಿಟಿಂಗ್ ಸೇವೆಗಳನ್ನು ನಿಲ್ಲಿಸಲು ನಿರ್ಧರಿಸಿದೆ. 

ಬೆಂಗಳೂರು: ಬೆಂಗಳೂರು ಮೂಲದ ಎಜುಟೆಕ್‌ ಸ್ಟಾರ್ಟಪ್‌ ಕಂಪನಿ 'ಬೈಜೂಸ್‌' ಇದೀಗ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಈ ಬಾರಿ, 2021-2022 ರ ಹಣಕಾಸು ವರ್ಷಕ್ಕೆ ಆರ್ಥಿಕ ಹೇಳಿಕೆಗಳ ಸಲ್ಲಿಕೆ ವಿಳಂಬದಿಂದಾಗಿ ಲೆಕ್ಕಪರಿಶೋಧಕ 'ಡೆಲಾಯ್ಟ್ ಹ್ಯಾಸ್ಕಿನ್ಸ್ ಮತ್ತು ಸೇಲ್ಸ್' ಕಂಪನಿಯು ಬೈಜೂಸ್‌ಗೆ ತನ್ನ ಆಡಿಟಿಂಗ್ ಸೇವೆಗಳನ್ನು ನಿಲ್ಲಿಸಲು ನಿರ್ಧರಿಸಿದೆ. 

ತಕ್ಷಣವೇ ಜಾರಿಗೆ ಬರುವಂತೆ ಸೇವೆಯನ್ನು ನಿಲ್ಲಿಸುವುದರಿಂದ ಬೈಜೂಸ್ ತನ್ನ ಹಣಕಾಸು ವರದಿ ಮತ್ತು ಅನುಸರಣೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುತ್ತಿದೆ. ಇದು ಕಂಪನಿಗೆ ವಿವಿಧ ಪರಿಣಾಮಗಳನ್ನು ಉಂಟುಮಾಡಬಹುದು ಎನ್ನಲಾಗಿದೆ.

2020-2021ನೇ ಆರ್ಥಿಕ ವರ್ಷಕ್ಕೆ ತನ್ನ ಹಣಕಾಸಿನ ಹೇಳಿಕೆಗಳನ್ನು ಸಲ್ಲಿಸುವಲ್ಲಿ ಬೈಜೂಸ್ 18 ತಿಂಗಳ ವಿಳಂಬ ಮಾಡಿದೆ. ಅಂತಿಮವಾಗಿ ಅದನ್ನು 2022ರ ಸೆಪ್ಟೆಂಬರ್‌ನಲ್ಲಿ ಸಲ್ಲಿಸಲಾಯಿತು. ಆದಾಗ್ಯೂ, ಬೈಜೂಸ್ 2022ನೇ ಆರ್ಥಿಕ ವರ್ಷದ ತನ್ನ ಹಣಕಾಸು ಹೇಳಿಕೆಯನ್ನು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿಲ್ಲ. 

ಮಾರ್ಚ್ 31, 2021ರಂದು ಕೊನೆಗೊಳ್ಳುವ ವರ್ಷದ ಆಡಿಟ್ ವರದಿ ಮಾರ್ಪಾಡುಗಳಲ್ಲಿ ಗುರುತಿಸಲಾದ ಸಮಸ್ಯೆಗಳ ಪರಿಹಾರದ ಕುರಿತು, ಹಣಕಾಸಿನ ಹೇಳಿಕೆಗಳ ಸಿದ್ಧತೆ ಮತ್ತು ಪುಸ್ತಕಗಳು ಮತ್ತು ದಾಖಲೆಗಳ ಸ್ಥಿತಿಗೆ ಸಂಬಂಧಿಸಿದಂತೆ ಯಾವುದೇ ಮಾತುಕತೆ ಆಗಿಲ್ಲ ಎಂದು ಡೆಲಾಯ್ಟ್ ಹೇಳಿದೆ. 

ವಿಳಂಬವಾದ 2021ನೇ ಆರ್ಥಿಕ ವರ್ಷದ ಆರ್ಥಿಕ ಹೇಳಿಕೆಗಳು, ಉದ್ಯೋಗ ಕಡಿತಗಳು, ಇ.ಡಿ ಶೋಧ, ಹೂಡಿಕೆದಾರರಿಂದ ಮೌಲ್ಯಮಾಪನ ಕಡಿತಗಳು ಮತ್ತು 1.2 ಶತಕೋಟಿ ಡಾಲರ್ ಟರ್ಮ್ ಸಾಲಕ್ಕಿಂತ ಹೆಚ್ಚಿನ ಸಾಲದಾತರೊಂದಿಗೆ ಕಾನೂನು ಹೋರಾಟ ಸೇರಿದಂತೆ ಬೈಜೂಸ್ 2022ರ ಆರಂಭದಿಂದಲೂ ಸಮಸ್ಯೆಗಳನ್ನು ಎದುರಿಸುತ್ತಿದೆ. 

ಈಮಧ್ಯೆ, ಬೈಜೂಸ್ ಬಿಡಿಒ (ಎಂಎಸ್‌ಕೆಎ & ಅಸೋಸಿಯೇಟ್ಸ್) ಅನ್ನು ಐದು ವರ್ಷಗಳ ಕಾಲ ತನ್ನ ಆಡಿಟರ್ ಆಗಿ ನೇಮಿಸಿದೆ.
ಜನರಲ್ ಅಟ್ಲಾಂಟಿಕ್, ಟೆನ್ಸೆಂಟ್, ಮುಂತಾದ ಉನ್ನತ ಹೂಡಿಕೆದಾರರಿಂದ ಬೈಜುಸ್ ಬೆಂಬಲಿತವಾಗಿದೆ. Tracxn ಪ್ರಕಾರ, ಇದು ಹೂಡಿಕೆದಾರರಿಂದ ಇದುವರೆಗೆ 5.78 ಬಿಲಿಯನ್ ಡಾಲರ್ ಸಂಗ್ರಹಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT