ಸಾಂದರ್ಭಿಕ ಚಿತ್ರ 
ವಾಣಿಜ್ಯ

ಜಾಹಿರಾತುಗಳ ಮೂಲಕ ಸೆಲೆಬ್ರಿಟಿಗಳು ಜನರ ದಿಕ್ಕುತಪ್ಪಿಸಿದರೆ ಜೋಕೆ: ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ

ಸೆಲೆಬ್ರಿಟಿಗಳು, ಸಿನಿಮಾ ನಟ-ನಟಿಯರು ಸೌಂದರ್ಯ ವರ್ಧಕಗಳ ಜಾಹೀರಾತು ನೀಡುವುದು ಸಾಮಾನ್ಯ. ಹಣ ಪಡೆದು ಸೌಂದರ್ಯ ವರ್ಧಕಗಳು ಮತ್ತು ಬ್ಯೂಟಿ ಪ್ರಾಡಕ್ಟ್ ಗಳನ್ನು ಪ್ರಚಾರ ಮಾಡುವ ಸ್ಟಾರ್ ಗಳು ಇನ್ನು ಮುಂದೆ ಹಾಗೆ ಮಾಡುವಂತಿಲ್ಲ. ಕೇಂದ್ರ ಸರ್ಕಾರ ಇಂತಹ ಹಣ ಪಡೆದು ಪ್ರಚಾರ ಮಾಡುವ ಜಾಹೀರಾತುಗಳಿಗೆ ಕಟ್ಟುನಿಟ್ಟಿನ ನಿಯಮ ಹೊರಡಿಸಿದೆ.

ನವದೆಹಲಿ:ಸೆಲೆಬ್ರಿಟಿಗಳು, ಸಿನಿಮಾ ನಟ-ನಟಿಯರು ಸೌಂದರ್ಯ ವರ್ಧಕಗಳ ಜಾಹೀರಾತು ನೀಡುವುದು ಸಾಮಾನ್ಯ. ಹಣ ಪಡೆದು ಸೌಂದರ್ಯ ವರ್ಧಕಗಳು ಮತ್ತು ಬ್ಯೂಟಿ ಪ್ರಾಡಕ್ಟ್ ಗಳನ್ನು ಪ್ರಚಾರ ಮಾಡುವ ಸ್ಟಾರ್ ಗಳು ಇನ್ನು ಮುಂದೆ ಹಾಗೆ ಮಾಡುವಂತಿಲ್ಲ. ಕೇಂದ್ರ ಸರ್ಕಾರ ಇಂತಹ ಹಣ ಪಡೆದು ಪ್ರಚಾರ ಮಾಡುವ ಜಾಹೀರಾತುಗಳಿಗೆ ಕಟ್ಟುನಿಟ್ಟಿನ ನಿಯಮ ಹೊರಡಿಸಿದೆ.

ಸೌಂದರ್ಯವರ್ಧಕ ಬಳಸಿ ಸುಂದರಾಗಿ ಎಂದು ಕ್ಯಾಮರಾ, ಫೋಟೋ ಮುಂದೆ ಸಾಧನಗಳೊಂದಿಗೆ ನಗುತ್ತಾ ಫೋಸ್ ಕೊಡುವ ಸೆಲೆಬ್ರಿಟಿಗಳು ನಾಗರಿಕರು ಖರೀದಿಸುವಂತೆ ಉತ್ತೇಜಿಸುವ ಮುನ್ನ ಸಾಧನಗಳು ಅಥವಾ ಸೇವೆಗಳೊಂದಿಗೆ ತಾವು ಪ್ರಚಾರ ಮಾಡುವ ವಸ್ತುಗಳ ಕಂಪೆನಿಯೊಂದಿಗೆ ಮಾಡಿಕೊಂಡಿರುವ ವಾಣಿಜ್ಯ ಸಂಬಂಧವನ್ನು ಬಹಿರಂಗಪಡಿಸಬೇಕೆಂದು ಸರ್ಕಾರ ಷರತ್ತು ವಿಧಿಸಿದೆ.

ಗ್ರಾಹಕ ವ್ಯವಹಾರಗಳ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ, ಸೆಲೆಬ್ರಿಟಿಗಳು, ಪ್ರಭಾವಶಾಲಿಗಳು ಮತ್ತು ಅಗಾಧ ಅನುಯಾಯಿಗಳನ್ನು ಹೊಂದಿರುವ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಪ್ರಚಾರ ಮಾಡುವವರು ತಾವು ನಿರ್ದಿಷ್ಟ ಸಾಧನಗಳು ಮತ್ತು ಸೇವೆಗಳನ್ನು ಯಾವ ಉದ್ದೇಶಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಕಡ್ಡಾಯವಾಗಿ ತಿಳಿಸಬೇಕು, ಹಣದ ಲಾಭಕ್ಕೋಸ್ಕರವೇ, ಕೊಡುಗೆಗಾಗಿಯೇ, ವಿನಿಮಯ ವ್ಯವಹಾರಗಳಿಗಾಗಿಯೇ ಅಥವಾ ಯಾವುದೇ ಇತರ ಕ್ವಿಡ್-ಪ್ರೊ-ಕ್ವೋ ವ್ಯವಸ್ಥೆಗಾಗಿಯೇ ಎಂದು ತಿಳಿಸಬೇಕು ಎಂದು ಹೇಳಿದೆ.

ಪಾವತಿಸಿದ ಅಥವಾ ವಿನಿಮಯದ ಬ್ರ್ಯಾಂಡ್ ಅನುಮೋದನೆಯ ಸಂದರ್ಭದಲ್ಲಿ, ಬಹಿರಂಗಪಡಿಸುವಿಕೆಯು 'ಜಾಹೀರಾತು', 'ಪ್ರಾಯೋಜಿತ', 'ಸಹಯೋಗ' ಅಥವಾ 'ಪಾಲುದಾರಿಕೆ' ಎಂದು ಹೇಳಬೇಕು. ಇದಲ್ಲದೆ, ಪದವನ್ನು ಹ್ಯಾಶ್‌ಟ್ಯಾಗ್ ಅಥವಾ ಹೆಡ್‌ಲೈನ್ ಪಠ್ಯವಾಗಿ ಸೂಚಿಸಬೇಕು ಎಂದು ಮಾರ್ಗಸೂಚಿಗಳು ಹೇಳುತ್ತವೆ.

ಅಲ್ಲದೆ, ವ್ಯಕ್ತಿಗಳು ತಾವು ವೈಯಕ್ತಿಕವಾಗಿ ಬಳಸದ, ವಸ್ತುಗಳನ್ನು, ಸಾಧನಗಳನ್ನು ಬಳಸಿ ಅನುಭವ ಇಲ್ಲದಿದ್ದರೆ ಉತ್ಪನ್ನ ಅಥವಾ ಸೇವೆಯನ್ನು ಅನುಮೋದಿಸಬಾರದು. ಅತ್ಯಂತ ಕಷ್ಟಕರವಾದ ರೀತಿಯಲ್ಲಿ ಅನುಮೋದನೆ ಸಂದೇಶದಲ್ಲಿ ಇರಿಸಬೇಕು ಎಂದು ಮಾರ್ಗಸೂಚಿಗಳು ಹೇಳುತ್ತವೆ. ಹ್ಯಾಶ್‌ಟ್ಯಾಗ್‌ಗಳು ಅಥವಾ ಲಿಂಕ್‌ಗಳ ಗುಂಪಿನೊಂದಿಗೆ ಬಹಿರಂಗಪಡಿಸುವಿಕೆಯನ್ನು ಬೆರೆಸಬಾರದು.

ವೀಡಿಯೊ ಅಥವಾ ಲೈವ್ ಸ್ಟ್ರೀಮ್ ಎಂಡಾರ್ಸ್‌ಮೆಂಟ್‌ಗಳಿಗಾಗಿ, ಬಹಿರಂಗಪಡಿಸುವಿಕೆಗಳನ್ನು ಆಡಿಯೊ ಮತ್ತು ವೀಡಿಯೊ ಸ್ವರೂಪದಲ್ಲಿ ಮಾಡಬೇಕು ಮತ್ತು ಸಂಪೂರ್ಣ ಸ್ಟ್ರೀಮ್‌ನಲ್ಲಿ ನಿರಂತರವಾಗಿ ಮತ್ತು ಪ್ರಮುಖವಾಗಿ ಪ್ರದರ್ಶಿಸಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT