ಝೀರೋಧ ಸಿಇಒ ನಿಖಿಲ್ ಕಾಮತ್ 
ವಾಣಿಜ್ಯ

ಸಿಲಿಕಾನ್ ವ್ಯಾಲಿ ಬ್ಯಾಂಕ್ ವೈಫಲ್ಯದಿಂದ ಕಲಿಯಬೇಕಿರುವ ಪಾಠ ಏನು?: ಝೀರೋಧ ಸಿಇಒ ನಿಖಿಲ್ ಕಾಮತ್ ವಿವರಣೆ ಹೀಗಿದೆ..

ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್ ವಿಬಿ) ಕುಸಿತದ ಬಗ್ಗೆ ಚರ್ಚೆಗಳಾಗುತ್ತಿದ್ದು, ಈ ಕುಸಿತದಿಂದ ನಾವು ಕಲಿಯಬೇಕಿರುವ ಪಾಠಗಳೇನು ಎಂಬುದರ ಬಗ್ಗೆ ಝೀರೋಧ ಸ್ಥಾಪಕ ಹಾಗೂ ಇನ್ವೆಸ್ಟರ್ ನಿತಿನ್ ಕಾಮತ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಬೆಂಗಳೂರು: ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್ ವಿಬಿ) ಕುಸಿತದ ಬಗ್ಗೆ ಚರ್ಚೆಗಳಾಗುತ್ತಿದ್ದು, ಈ ಕುಸಿತದಿಂದ ನಾವು ಕಲಿಯಬೇಕಿರುವ ಪಾಠಗಳೇನು ಎಂಬುದರ ಬಗ್ಗೆ ಝೀರೋಧ ಸ್ಥಾಪಕ ಹಾಗೂ ಇನ್ವೆಸ್ಟರ್ ನಿತಿನ್ ಕಾಮತ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
 
ಎಸ್ ವಿಬಿ ಆಗಿರಬಹುದು ಅಥವಾ ಇತ್ತೀಚಿನ ಯೆಸ್ ಬ್ಯಾಂಕ್ ಆಗಿರಬಹುದು ಇದರ ಕುಸಿತದ ಬಗ್ಗೆ ಟ್ವೀಟ್ ಮಾಡಿರುವ ಕಾಮತ್, ಎಲ್ಲಾ ಉದ್ಯಮದಲ್ಲೂ ಒಂದಲ್ಲಾ ಒಂದು ಹಂತದಲ್ಲಿ, ಅನಿರೀಕ್ಷಿತ ಬದಲಾವಣೆಗಳು ಎದುರಾಗಬಹುದು. ಆದ್ದರಿಂದ ಪ್ರತಿಯೊಂದನ್ನೂ ರಿಸ್ಕ್ ಎಂದೇ ಪರಿಗಣಿಸಿ ಹಾಗೂ ಅದನ್ನು ಎದುರಿಸಲು ಅಥವಾ ನಿವಾರಿಸಲು ಅಗತ್ಯವಿರುವ ಎಲ್ಲವನ್ನೂ ಮಾಡಿ. ಉದ್ಯಮದಲ್ಲಿ ಅಂತಹ ಸನ್ನಿವೇಶಗಳನ್ನು ಎದುರಿಸಿ ದಾಟಿ ಮುಂದೆ ಸಾಗಬೇಕು ಎಂದು ವಿವರಿಸಿದ್ದಾರೆ.

"ಎಸ್ ವಿಬಿ ಅಥವಾ ಯೆಸ್ ಬ್ಯಾಂಕ್ ಕುಸಿತದ ಉದಾಹರಣೆಯಿಂದ ಕಲಿಯಬೇಕಾಗಿರುವುದೇನು ಎಂದರೆ, ಭಾರತೀಯ ಪರಿಭಾಷೆಯಲ್ಲಿ, ಕಾರ್ಯನಿರ್ವಹಣೆಯ ಬಂಡವಾಳವನ್ನು ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಇಡುವ ಕ್ರಮ ಒಳಿತು ಎಂಬ ಪಾಠ" ಎಂದು ನಿತಿನ್ ಕಾಮತ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT