ಸಾಂದರ್ಭಿಕ ಚಿತ್ರ 
ವಾಣಿಜ್ಯ

ಟಿಸಿಎಸ್ 2 ಸಾವಿರಕ್ಕೂ ಹೆಚ್ಚು ನೌಕರರನ್ನು ಒತ್ತಾಯಪೂರ್ವಕವಾಗಿ ಬೇರೆ ನಗರಗಳಿಗೆ ವರ್ಗಾಯಿಸುತ್ತಿದೆ: ಕಾರ್ಮಿಕ ಸಚಿವಾಲಯಕ್ಕೆ ದೂರು

ಟಿಸಿಎಸ್ ವ್ಯವಸ್ಥಿತವಾಗಿ 2,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸರಿಯಾದ ಸೂಚನೆ ಅಥವಾ ಸಮಾಲೋಚನೆಯಿಲ್ಲದೆ ವಿವಿಧ ನಗರಗಳಿಗೆ ವರ್ಗಾವಣೆಗೆ ಒತ್ತಾಯಿಸುತ್ತಿದೆ ಎಂದು 180 ಕ್ಕೂ ಹೆಚ್ಚು ದೂರುಗಳು ಕಾರ್ಮಿಕ ಸಚಿವಾಲಯಕ್ಕೆ ಬಂದಿವೆ.

ಚೆನ್ನೈ: ದೇಶದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಮತ್ತೆ ವಿವಾದದಲ್ಲಿದೆ. ಐಟಿ ಉದ್ಯೋಗಿಗಳ ಹಕ್ಕುಗಳ ಸಂಘಟನೆಯಾದ ನೇಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (NITES) ಕಂಪೆನಿಯು ಉದ್ಯೋಗಿಗಳ ಹಿತಾಸಕ್ತಿಗೆ ವಿರುದ್ಧವಾಗಿ ಕಾನೂನು ಬಾಹಿರವಾಗಿ ವರ್ಗಾವಣೆ ಮಾಡುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಔಪಚಾರಿಕ ದೂರು ಸಲ್ಲಿಸಿದೆ.

ಈ ಬಗ್ಗೆ ಎನ್ ಐಟಿಇಎಸ್ ಪ್ರಕಟಣೆಯಲ್ಲಿ ತಿಳಿಸಿದ್ದು, ಟಿಸಿಎಸ್ ವ್ಯವಸ್ಥಿತವಾಗಿ 2,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸರಿಯಾದ ಸೂಚನೆ ಅಥವಾ ಸಮಾಲೋಚನೆಯಿಲ್ಲದೆ ವಿವಿಧ ನಗರಗಳಿಗೆ ವರ್ಗಾವಣೆಗೆ ಒತ್ತಾಯಿಸುತ್ತಿದೆ ಎಂದು 180 ಕ್ಕೂ ಹೆಚ್ಚು ದೂರುಗಳು ಕಾರ್ಮಿಕ ಸಚಿವಾಲಯಕ್ಕೆ ಬಂದಿವೆ. ಈ ರೀತಿ ನೌಕರರನ್ನು ವರ್ಗಾವಣೆ ಮಾಡಿದರೆ ಅವರಿಗೆ ಮತ್ತು ಅವರ ಕುಟುಂಬಗಳಿಗೆ ಅಪಾರ ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗಿದೆ. 

ವರ್ಗಾವಣೆ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಕಂಪನಿಯು ಉದ್ಯೋಗಿಗಳಿಗೆ ಬೆದರಿಕೆ ಹಾಕಿದೆ ಎಂದು ಅದು ಹೇಳಿದೆ. ಈ ಬಲವಂತದ ವರ್ಗಾವಣೆಗಳು ಉದ್ಯೋಗಿಗಳಿಗೆ ಉಂಟುಮಾಡುವ ಆರ್ಥಿಕ ಸಂಕಷ್ಟ, ಕೌಟುಂಬಿಕ ಅಡ್ಡಿ, ಒತ್ತಡ ಮತ್ತು ಆತಂಕಗಳನ್ನು ಕಂಪನಿ ನಿರ್ಲಕ್ಷಿಸುತ್ತಿದೆ ಎಂದು ದೂರಿನಲ್ಲಿ ತಿಳಿಸಿದೆ. 

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ಅನೈತಿಕ ವರ್ಗಾವಣೆ ಅಭ್ಯಾಸಗಳ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ. ಟಿಸಿಎಸ್ ತನ್ನ ಉದ್ಯೋಗಿಗಳನ್ನು ಅನಗತ್ಯ ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಅವರ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ. ನಾವು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವನ್ನು ಟಿಸಿಎಸ್ ವಿರುದ್ಧ ತನಿಖೆ ಮಾಡಲು ಮತ್ತು ಐಟಿ ಉದ್ಯೋಗಿಗಳನ್ನು ಇಂತಹ ಅನೈತಿಕ ಕ್ರಮಗಳಿಂದ ರಕ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದೇವೆ. ಎನ್ಐಟಿಇಎಸ್ ತನ್ನ ದೂರಿನಲ್ಲಿ ಟಿಸಿಎಸ್ ನ ವರ್ಗಾವಣೆ ಪದ್ಧತಿಗಳನ್ನು ತನಿಖೆ ಮಾಡಲು ಮತ್ತು ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದರೆ ಟಿಸಿಎಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವಾಲಯವನ್ನು ಒತ್ತಾಯಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಿ-ಫೋರ್ಸ್ ಬ್ಲಾಕೌಟ್ ನಿಂದ ಪತನ ಸಾಧ್ಯತೆ: ತೇಜಸ್ ಅಪಘಾತ ಬಗ್ಗೆ ತಜ್ಞರು; ಮಗನ ಸಾವಿನ ಸುದ್ದಿ Youtube ನೋಡಿ ತಿಳಿದುಕೊಂಡ ಪೈಲಟ್ ತಂದೆ !

ಬೆಂಗಳೂರು ಎಟಿಎಂ ದರೋಡೆ: ಮತ್ತೋರ್ವ ಪ್ರಮುಖ ಆರೋಪಿ Xavier ತಮಿಳುನಾಡಿನಲ್ಲಿ ಬಂಧನ!

ತಪ್ಪಿಗಿಲ್ಲ ಅವಕಾಶ: ದುಬೈನಲ್ಲಿ ತೇಜಸ್ ವಿಮಾನದ ಇಜೆಕ್ಷನ್ ಸೀಟನ್ನು ಮಣಿಸಿದ ಭೌತಶಾಸ್ತ್ರ

ಐಟಿ ಸಿಟಿ ಬೆಂಗಳೂರಿನ ಮಕ್ಕಳು ಕಲಿಕೆಯಲ್ಲಿ ಹಿಂದೆ: 3ರಿಂದ 5ನೇ ಕ್ಲಾಸಿನ ಶೇ.18ರಷ್ಟು ಮಕ್ಕಳು ಮಾತ್ರ 2ನೇ ತರಗತಿ ಪಠ್ಯ ಓದಬಲ್ಲರು !

ಮತ್ತೆ ಶಾಕ್ ಕೊಟ್ಟ Amazon, ಅಕ್ಟೋಬರ್‌ನಲ್ಲಿ 1800ಕ್ಕೂ ಅಧಿಕ ಎಂಜಿನಿಯರ್ ಗಳ ಉದ್ಯೋಗ ಕಡಿತ, ಒಟ್ಟಾರೆ 14 ಸಾವಿರ ಮಂದಿ ವಜಾ!

SCROLL FOR NEXT