ಭಾರತೀಯ ಷೇರುಮಾರುಕಟ್ಟೆ 
ವಾಣಿಜ್ಯ

Indian Share Market: ವಾರದ ಭರ್ಜರಿ ಆರಂಭ, ಸೆನ್ಸೆಕ್ಸ್ 612 ಅಂಕ ಏರಿಕೆ, 25 ಸಾವಿರ ಗಡಿ ದಾಟಿದ ನಿಫ್ಟಿ

ಏರಿಕೆಯೊಂದಿಗೆ ಕಳೆದ ವಾರದ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಈ ವಾರದ ಆರಂಭಿಕ ದಿನ ಸೋಮವಾರವೂ ಕೂಡ ಅದೇ ಪ್ರದರ್ಶನ ತೋರುವ ಮುನ್ಸೂಚನೆ ನೀಡಿದೆ.

ಮುಂಬೈ: ವಾರದ ಆರಂಭದ ಮೊದಲ ದಿನವೇ ಭಾರತೀಯ ಷೇರುಮಾರುಕಟ್ಟೆ ಏರಿಕೆ ದಾಖಲಿಸಿದ್ದು, ಸೆನ್ಸೆಕ್ಸ್ 612 ಅಂಕಗಳ ಏರಿಕೆ ಕಂಡರೆ, ನಿಫ್ಟಿ 25 ಸಾವಿರ ಗಡಿ ದಾಟಿ ಚೇತೋಹಾರಿ ವಹಿವಾಟು ನಡೆಸಿದೆ.

ಏರಿಕೆಯೊಂದಿಗೆ ಕಳೆದ ವಾರದ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಈ ವಾರದ ಆರಂಭಿಕ ದಿನ ಸೋಮವಾರವೂ ಕೂಡ ಅದೇ ಪ್ರದರ್ಶನ ತೋರುವ ಮುನ್ಸೂಚನೆ ನೀಡಿದೆ.

ಇಂದು ಸೆನ್ಸೆಕ್ಸ್ ದಿನದ ವಹಿವಾಟು ಅಂತ್ಯಕ್ಕೆ 612 ಅಂಕ ಏರಿಕೆಯಾಗಿ ಒಟ್ಟು 81,698.11 ಅಂಕಗಳಿಗೆ ಏರಿಕೆಯಾಗಿದ್ದು, Nifty50 ಕೂಡ 187.46 ಅಂಕಗಳ ಏರಿಕೆಯೊಂದಿಗೆ 25,010.60. ಅಂಕಗಳಿಗೆ ಏರಿಕೆಯಾಗಿ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ಪಟ್ಟಿಮಾಡಲಾದ 50 ಷೇರುಗಳ ಪೈಕಿ ಬರೊಬ್ಬರಿ 33 ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಪ್ರಮುಖವಾಗಿ HCL Tech, Hindalco, NTPC, ONGC, and Bajaj Finserv ಸಂಸ್ಥೆಗಳ ಷೇರು ಮೌಲ್ಯದಲ್ಲಿ ಶೇ.4.24ರಷ್ಟು ಏರಿಕೆಯಾಗಿದೆ. ನಿಫ್ಟಿ ಮಿಡ್ ಕ್ಯಾಪ್ 100 ಷೇರುಗಳ ಮೌಲ್ಯ ಶೇ.0.64ರಷ್ಟು ಏರಿಕೆಯಾಗಿದ್ದು, ಐಟಿ, ಮೆಟಲ್, ರಿಯಾಲಿಟಿ ಮತ್ತು ಒಎಂಸಿ ಷೇರುಗಳ ಮೌಲ್ಯ ಶೇ.2.16ರಷ್ಟು ಏರಿಕೆಯಾಗಿದೆ.

ಕುಸಿದ ಪೇಟಿಎಂ ಷೇರು

ಆದರೆ ವ್ಯತಿರಿಕ್ತ ಎಂಬಂತೆ ಪೇಟಿಎಂ ಮಾತೃಸಂಸ್ಥೆ One 97 Communications ಷೇರು ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದಿದ್ದು, ಪ್ರತೀ ಷೇರಿನ ಮೌಲ್ಯದಲ್ಲಿ 505.25ರೂ ಅಂದರೆ ಶೇ.8.88 ರಷ್ಟು ಮೌಲ್ಯ ಕುಸಿತವಾಗಿದೆ.

ಪೇಟಿಎಂ ಷೇರು ಕುಸಿತಕ್ಕೆ ಸಂಸ್ಥೆಯ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಗೆ ಸೆಬಿ ಶೋಕಾಸ್ ನೋಟಿಸ್ ನೀಡಿರುವುದು ಕಾರಣ ಎಂದು ಹೇಳಲಾಗಿದೆ. ಇದು ಮಾರುಕಟ್ಟೆಯಲ್ಲಿ ಪೇಟಿಎಂ ಷೇರುಗಳ ಖರೀದಿಗೆ ಹೂಡಿಕೆದಾರರು ನಿರಾಸಕ್ತಿ ತೋರಲು ಕಾರಣ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT