ಬಿಎಸ್ಎನ್ಎಲ್ PTI
ವಾಣಿಜ್ಯ

4G, 5G ಸೇವೆಗಳಿಲ್ಲದೆ Jio, Airtel ಜೊತೆ BSNL ಸ್ಪರ್ಧೆ ಅಸಾಧ್ಯ: ಕೇಂದ್ರಕ್ಕೆ ನೌಕರರ ಒಕ್ಕೂಟ ಎಚ್ಚರಿಕೆ

ಈ ಮೊದಲು, BSNL ಪೈಪೋಟಿಯಿಂದಾಗಿ ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರರು ತಮ್ಮ ಸುಂಕವನ್ನು ಹೆಚ್ಚಿಸುವುದಕ್ಕೆ ಹಿಂಜರಿಯುತ್ತಿದ್ದವು.

ನವದೆಹಲಿ: 4ಜಿ ಮತ್ತು 5ಜಿ ಸೇವೆಗಳನ್ನು ನೀಡದಿದ್ದರೆ ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಜೊತೆ ಸ್ಪರ್ಧಿಸಲು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ಅಸಾಧ್ಯ ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘ ತಿಳಿಸಿದೆ.

ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಲಾಭದಾಯಕ ಕಂಪನಿಗಳಾಗಿರುವುದರಿಂದ ಅವರು ಇತ್ತೀಚೆಗೆ ಸುಂಕವನ್ನು ಹೆಚ್ಚಿಸಿರುವುದು ಅನಪೇಕ್ಷಿತವಾಗಿದೆ ಎಂದು ಬಿಎಸ್‌ಎನ್‌ಎಲ್ ನೌಕರರ ಒಕ್ಕೂಟ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದಿದೆ.

ಈ ಮೊದಲು, BSNL ಪೈಪೋಟಿಯಿಂದಾಗಿ ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರರು ತಮ್ಮ ಸುಂಕವನ್ನು ಹೆಚ್ಚಿಸುವುದಕ್ಕೆ ಹಿಂಜರಿಯುತ್ತಿದ್ದವು. ಆದರೆ, ಈಗ ಸನ್ನಿವೇಶ ಬದಲಾಗಿದೆ. BSNL ತನ್ನ 4G ಮತ್ತು 5G ಸೇವೆಗಳನ್ನು ಇಲ್ಲಿಯವರೆಗೆ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಇದರ ಪರಿಣಾಮವಾಗಿ ಖಾಸಗಿ ಆಪರೇಟರ್‌ಗಳೊಂದಿಗೆ ಸ್ಪರ್ಧೆ ನೀಡದಿದ್ದರಿಂದ ಖಾಸಗಿ ಟೆಲಿಕಾಂಗಳು ಅನಿಯಂತ್ರಿತ ಸುಂಕ ಹೆಚ್ಚಳವನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ, ಎಲ್ಲಾ ಮೂರು ಖಾಸಗಿ ಆಪರೇಟರ್‌ಗಳು ಮೊಬೈಲ್ ಸೇವಾ ದರಗಳನ್ನು ಶೇಕಡಾ 10-27ರ ವ್ಯಾಪ್ತಿಯಲ್ಲಿ ಹೆಚ್ಚಿಸುವುದಾಗಿ ಘೋಷಿಸಿದರು. ಜಿಯೋ ಮತ್ತು ಏರ್‌ಟೆಲ್ ಘೋಷಿಸಿದ ಹೊಸ ಟ್ಯಾರಿಫ್ ಯೋಜನೆಗಳು ಜಾರಿಗೆ ಬಂದಿದ್ದು, ಜುಲೈ 4 ರಿಂದ Vi ಹೆಚ್ಚಳ ಜಾರಿಗೆ ಬರಲಿದೆ.

ಖಾಸಗಿ ಕಂಪನಿಗಳು ತಮ್ಮ ಸುಂಕವನ್ನು ಇಷ್ಟು ತೀವ್ರವಾಗಿ ಹೆಚ್ಚಿಸಲು ಯಾವುದೇ ಕಾರಣವಿಲ್ಲ. ಗಮನಿಸಬೇಕಾದ ಅಂಶವೆಂದರೆ, ರಿಲಯನ್ಸ್ ಜಿಯೋ 2023-24ರಲ್ಲಿ ರೂ. 20,607 ಕೋಟಿ ನಿವ್ವಳ ಲಾಭ ಗಳಿಸಿದೆ. ಏರ್‌ಟೆಲ್ ರೂ. 7,467 ಕೋಟಿ ನಿವ್ವಳ ಲಾಭ ಗಳಿಸಿದೆ. ಹೀಗಿದ್ದರೂ ಸುಂಕ ಹೆಚ್ಚಳ ಜನ ಸಾಮಾನ್ಯರಿಗೆ ಬರೆ ಎಳೆದಂತಾಗುತ್ತದೆ.

4G ಮತ್ತು 5G ಸೇವೆ ಇಲ್ಲದ ಕಾರಣ BSNL ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ. ಇದರ ಅನುಕೂಲವನ್ನು ಖಾಸಗಿ ಆಪರೇಟರ್‌ಗಳಾದ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಗಳಿಸುತ್ತಿವೆ ಎಂದು ಒಕ್ಕೂಟ ಹೇಳಿದೆ.

BSNL ತನ್ನ ಬಹು ನಿರೀಕ್ಷಿತ 4G ಸೇವೆಗಳನ್ನು ಆಗಸ್ಟ್‌ನಿಂದ ಭಾರತದಾದ್ಯಂತ ಪ್ರಾರಂಭಿಸಲು ತಯಾರಿ ನಡೆಸುತ್ತಿದೆ ಎಂದು ಮೂಲವು ಹಂಚಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT