ಪನ್ನೀರ್ ಟಿಕಾಗೆ ತಿಲಕ ಇಟ್ಟ ಸ್ವಿಗ್ಗಿ 
ವಾಣಿಜ್ಯ

ಪನ್ನೀರ್ ಟಿಕ್ಕಾಗೆ ಕೆಂಪು ನಾಮ! ವಿರೋಧದ ಬೆನ್ನಲ್ಲೇ ವಿವಾದಿತ ಪೋಸ್ಟ್ ಡಿಲೀಟ್ ಮಾಡಿದ Swiggy

ನಿನ್ನೆ ಮಧ್ಯಾಹ್ನ ಸ್ವಿಗ್ಗಿ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಿಂದೂ ಧಾರ್ಮಿಕ ಹಣೆಯ ಗುರುತು ಹೊಂದಿರುವ ಪನೀರ್ ಟಿಕಾವನ್ನು ಪೋಸ್ಟ್ ಮಾಡಿ "ಸ್ಕ್ರೂ ಇಟ್, ಪನೀರ್ ಟಿಕಾ" ಎಂದು ಬರೆಯಲಾಗಿತ್ತು.

ನವದೆಹಲಿ: ಖ್ಯಾತ ಆಹಾರ ವಿತರಣಾ ಆ್ಯಪ್ ಆಧಾರಿತ ಸಂಸ್ಥೆ ಸ್ವಿಗ್ಗಿ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದು, ಪನ್ನೀರ್ ಟಿಕಾಗೆ ಕೆಂಪು ನಾಮ ಇಟ್ಟು ತಾನು ಮಾಡಿದ್ದ ಪೋಸ್ಟ್ ವಿವಾದವಾದ ಹಿನ್ನಲೆಯಲ್ಲಿ ಡಿಲೀಟ್ ಮಾಡಿದೆ.

ನಿನ್ನೆ ಮಧ್ಯಾಹ್ನ ಸ್ವಿಗ್ಗಿ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಿಂದೂ ಧಾರ್ಮಿಕ ಹಣೆಯ ಗುರುತು ಹೊಂದಿರುವ ಪನೀರ್ ಟಿಕಾವನ್ನು ಪೋಸ್ಟ್ ಮಾಡಿ "ಸ್ಕ್ರೂ ಇಟ್, ಪನೀರ್ ಟಿಕಾ" ಎಂದು ಬರೆಯಲಾಗಿತ್ತು.

ಈ ಪೋಸ್ಟ್ ವೈರಲ್ ಆಗುತ್ತಲೇ ಇದಕ್ಕೆ ಪ್ರತಿಕ್ರಿಯಿಸಿದ್ದ ನೆಟ್ಟಿಗರು ''Sickular'' Swiggy.. ಹಿಂದೂ ಸಮುದಾಯದ ಭಾವನೆಗಳನ್ನು ಮತ್ತು ಅವರ ಸಂಪ್ರದಾಯಗಳನ್ನು ಅಪಹಾಸ್ಯ ಮಾಡುತ್ತಿದೆ ಮತ್ತು ಹಿಂದೂಫೋಬಿಕ್ ಸಾಮಾಜಿಕ ಮಾಧ್ಯಮ ವಿಷಯವನ್ನು ಹಂಚಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದರು.

ಮತ್ತೆ ಕೆಲವು ನೆಟ್ಟಿಗರು ಸ್ವಿಗ್ಗಿ ಪೋಸ್ಟ್ ಗೆ ಇದು ಹಿಂದೂ ಸಂಪ್ರದಾಯದ ಅಗೌರವ ಮತ್ತು ಅಪಹಾಸ್ಯದ ಕಾರ್ಯವಾಗಿದೆ. ಸ್ವಿಗ್ಗಿ ಹಿಂದೂಫೋಬಿಕ್ ಸಾಮಾಜಿಕ ಮಾಧ್ಯಮ ವಿಷಯವನ್ನು ಹಂಚಿಕೊಳ್ಳುತ್ತಿದ್ದಾರೆ. ಹಿಂದೂಗಳ ಭಾವನೆಗಳನ್ನು ನೋಯಿಸಿದಕ್ಕಾಗಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.

ಅನೇಕ ಬಳಕೆದಾರರು ಸ್ವಿಗ್ಗಿ ಮತ್ತು ಹಿಂದೂ ಧರ್ಮ ಮತ್ತು ಸಂಪ್ರದಾಯವನ್ನು ಅಗೌರವಿಸುವ, ಅಪಹಾಸ್ಯ ಮಾಡುವ ಮತ್ತು ಹಿಂದೂಫೋಬಿಕ್ ವಿಷಯವನ್ನು ಹಂಚಿಕೊಳ್ಳುವ ಸ್ವಿಗ್ಗಿಯಂತಹ ಎಲ್ಲಾ ಅಪ್ಲಿಕೇಶನ್‌ಗಳನ್ನು ಬಹಿಷ್ಕರಿಸಲು ಕರೆಗಳನ್ನು ನೀಡಿದ್ದಾರೆ.

ಇತ್ತ ತನ್ನ ಪೋಸ್ಟ್ ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಎಚ್ಚೆತ್ತುಕೊಂಡ ಸ್ವಿಗ್ಗಿ ಪೋಸ್ಟ್ ಡಿಲೀಟ್ ಮಾಡಿದೆಯಾದರೂ ಅದಾಗಲೇ ಹಲವು ಬಳಕೆದಾರರು ಅದರ ಸ್ಕ್ರೀನ್ ಶಾಟ್ ತೆಗೆದು ಸ್ವಿಗ್ಗಿ ಕ್ರಮವನ್ನು ಟೀಕಿಸುತ್ತಿದ್ದಾರೆ. ಪೋಸ್ಟ್ ಡಿಲೀಟ್ ಮಾಡಿದರೆ ಸಾಲದು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

SCROLL FOR NEXT