ಸಾಂದರ್ಭಿಕ ಚಿತ್ರ 
ವಾಣಿಜ್ಯ

ಮೋದಿ 3.0 ಸರ್ಕಾರಕ್ಕೆ ಸಂತೋಷದ ಸ್ವಾಗತ: ಸೆನ್ಸೆಕ್ಸ್, ನಿಫ್ಟಿ ಏರಿಕೆ; ಹಣಕಾಸು, ಇಂಧನ ವಲಯ ಷೇರುಗಳು ಲಾಭದಲ್ಲಿ

ಹಣಕಾಸು ಸೇವೆಗಳು ಮತ್ತು ಇಂಧನ ಷೇರುಗಳು ಲಾಭಕ್ಕೆ ಕಾರಣವಾದರೆ, ಐಟಿ ಷೇರುಗಳು ಹಿಂದುಳಿದಿವೆ. ನಿಫ್ಟಿ ಐಟಿಯನ್ನು ಹೊರತುಪಡಿಸಿ, ಸುಮಾರು ಶೇಕಡಾ 1ರಷ್ಟು ಕುಸಿದಿದೆ, ಉಳಿದ 12 ವಲಯದ ಸೂಚ್ಯಂಕಗಳು ಲಾಭ ಗಳಿಸಿದವು.

ಮುಂಬೈ: ನಿಫ್ಟಿ ಮತ್ತು ಸೆನ್ಸೆಕ್ಸ್ ಇಂದು ಜೂನ್ 10 ವಾರದ ಆರಂಭ ದಿನ ಬೆಳಗಿನ ವಹಿವಾಟಿನಲ್ಲಿ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು. ನಿನ್ನೆ ವಾರಾಂತ್ಯ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಹೊಸ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರ, ಇಂದು ಷೇರುಮಾರುಕಟ್ಟೆ ವ್ಯವಹಾರ ಮತ್ತೆ ಪುಟಿದೆದ್ದಿದೆ.

ಹಣಕಾಸು ಸೇವೆಗಳು ಮತ್ತು ಇಂಧನ ಷೇರುಗಳು ಲಾಭಕ್ಕೆ ಕಾರಣವಾದರೆ, ಐಟಿ ಷೇರುಗಳು ಹಿಂದುಳಿದಿವೆ. ನಿಫ್ಟಿ ಐಟಿಯನ್ನು ಹೊರತುಪಡಿಸಿ, ಸುಮಾರು ಶೇಕಡಾ 1ರಷ್ಟು ಕುಸಿದಿದೆ, ಉಳಿದ 12 ವಲಯದ ಸೂಚ್ಯಂಕಗಳು ಲಾಭ ಗಳಿಸಿದವು.

ಇಂದು ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 233 ಪಾಯಿಂಟ್ ಅಥವಾ 0.3 ರಷ್ಟು ಏರಿಕೆಯಾಗಿ 76,926 ಕ್ಕೆ ತಲುಪಿತು. ನಿಫ್ಟಿ 50 79 ಪಾಯಿಂಟ್ ಏರಿಕೆಯಾಗಿ 23,369 ಕ್ಕೆ ತಲುಪಿತು. ಸುಮಾರು 2,297 ಷೇರುಗಳು ಮುಂದುವರಿದವು, 608 ಷೇರುಗಳು ಕುಸಿತ ಕಂಡವು ಮತ್ತು 129 ಷೇರುಗಳು ಬದಲಾಗದೆ ಉಳಿದಿವೆ.

ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ರಚನೆಯಾಗಿ ಹಲವಾರು ಕ್ಯಾಬಿನೆಟ್ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ ನಂತರ, ಈಗ ಎಲ್ಲರ ಕುತೂಹಲ ಖಾತೆ ಹಂಚಿಕೆ ಮೇಲಿದೆ. ಯಾರು ಯಾವ ಸಚಿವಾಲಯದ ಮುಖ್ಯಸ್ಥರಾಗುತ್ತಾರೆ. ಸಚಿವಾಲಯದ ಹಂಚಿಕೆಗಳು ಇಂದು ಜಾಗತಿಕ ಅಂಶಗಳಿಗಿಂತ ಹೆಚ್ಚು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಫಿಡೆಂಟ್ ಅಸೆಟ್ ಮ್ಯಾನೇಜ್‌ಮೆಂಟ್‌ನ ಸಂಸ್ಥಾಪಕ ಮತ್ತು CIO ಐಶ್ವರ್ಯ ದಧೀಚ್ ಹೇಳುತ್ತಾರೆ.

ಒಕ್ಕೂಟದ ಸಮಸ್ಯೆಗಳು ಹೂಡಿಕೆದಾರರ ಭಾವನೆಯ ಮೇಲೆ ಪರಿಣಾಮ ಬೀರುತ್ತವೆಯಾದರೂ, ನೀತಿಯ ನಿರಂತರತೆಯ ಬಗ್ಗೆ ಕಾಳಜಿಯು ತಾತ್ಕಾಲಿಕವಾಗಿ ಕಡಿಮೆಯಾಗಿದೆ ಎಂದು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡವರು ಹೇಳುತ್ತಾರೆ.

ಭಾರತದ ಚುನಾವಣಾ ಫಲಿತಾಂಶಗಳು ಉತ್ತೇಜಕವಾಗಿದ್ದು, ಮೋದಿಯವರ ನೀತಿಗಳು ಭಾರತವನ್ನು ಮುನ್ನಡೆಸಲಿವೆ ಎಂದು ಯರ್ಡೆನಿ ರಿಸರ್ಚ್‌ನ ಅಧ್ಯಕ್ಷ ಎಡ್ ಯರ್ಡೆನಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಹೂಡಿಕೆದಾರರು ಈಗ 2-ದಿನಗಳ ಫೆಡರಲ್ ರಿಸರ್ವ್ ನೀತಿ ಸಭೆಯ ಫಲಿತಾಂಶಕ್ಕಾಗಿ ಮತ್ತು ಮುಂಬರುವ ಹಣದುಬ್ಬರ ಅಂಕಿಅಂಶಗಳನ್ನು ಜೂನ್ 12 ರಂದು ಬಿಡುಗಡೆ ಮಾಡಲಿರುವುದರಿಂದ, ಬಡ್ಡಿದರಗಳ ಭವಿಷ್ಯದ ದಿಕ್ಕಿನ ಕುರಿತು ಹೆಚ್ಚಿನ ಒಳನೋಟವನ್ನು ಹೊಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT