ಸ್ಪೈಸ್‌ಜೆಟ್ ವಿಮಾನ 
ವಾಣಿಜ್ಯ

ಪ್ರಯಾಣಿಕರ ಕೊರತೆ: ಹೈದರಾಬಾದ್-ಅಯೋಧ್ಯೆ ವಿಮಾನ ರದ್ದುಗೊಳಿಸಿದ SpiceJet

ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆ, ಪ್ರಯಾಣಿಕರ ಕೊರತೆಯನ್ನು ಉಲ್ಲೇಖಿಸಿ, ಪ್ರಾರಂಭವಾದ ಎರಡು ತಿಂಗಳೊಳಗೆ ಹೈದರಾಬಾದ್‌ನಿಂದ ಅಯೋಧ್ಯೆ ತನ್ನ ನೇರ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಹೈದರಾಬಾದ್: ಅಜಯ್ ಸಿಂಗ್ ಒಡೆತನದ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆ, ಪ್ರಯಾಣಿಕರ ಕೊರತೆಯನ್ನು ಉಲ್ಲೇಖಿಸಿ, ಪ್ರಾರಂಭವಾದ ಎರಡು ತಿಂಗಳೊಳಗೆ ಹೈದರಾಬಾದ್‌ನಿಂದ ಅಯೋಧ್ಯೆ ತನ್ನ ನೇರ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಗುರುಗ್ರಾಮ್ ಮೂಲದ ವಿಮಾನಯಾನ ಸಂಸ್ಥೆಯು ಈ ವರ್ಷದ ಏಪ್ರಿಲ್ ನಲ್ಲಿ ಹೈದರಾಬಾದ್-ಅಯೋಧ್ಯೆ ಮಾರ್ಗದಲ್ಲಿ ವಾರಕ್ಕೆ ಮೂರು ಬಾರಿ ತಡೆರಹಿತ ವಿಮಾನ ಸೇವೆಗಳನ್ನು ಪ್ರಾರಂಭಿಸಿತ್ತು. ಆದರೆ "ಜೂನ್ 1 ರಿಂದ ಹೈದರಾಬಾದ್‌ನಿಂದ ಅಯೋಧ್ಯೆಗೆ ತನ್ನ ತಡೆರಹಿತ ವಿಮಾನ ಸೇವೆಗಳನ್ನು ಸ್ಪೈಸ್‌ಜೆಟ್ ಸ್ಥಗಿತಗೊಳಿಸಿದೆ" ಎಂದು ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ವಿಮಾನಯಾನ ಸಂಸ್ಥೆಯು ತೆಲಂಗಾಣ ರಾಜಧಾನಿಯಿಂದ ರಾಮ ಮಂದಿರ ಇರುವ ಅಯೋಧ್ಯೆಗೆ ವಾರಕ್ಕೆ ಮೂರು ಬಾರಿ ನೇರ ವಿಮಾನ ಸೇವೆ ನೀಡುತ್ತಿತ್ತು.

"ವಿಮಾನದ ವೇಳಾಪಟ್ಟಿಯನ್ನು ಕೇವಲ ವಾಣಿಜ್ಯ ಪರಿಗಣನೆಗಳು ಮತ್ತು ಬೇಡಿಕೆಯ ಆಧಾರದ ನಡೆಸಲಾಗುತ್ತದೆ" ಎಂದು ಸ್ಪೈಸ್ಜೆಟ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರೆ ನಾವು ಇನ್ನೂ ಅಯೋಧ್ಯೆಯಿಂದ ಚೆನ್ನೈಗೆ ವಿಮಾನ ಸೇವೆ ಒದಗಿಸುತ್ತಿದ್ದೇವೆ" ಎಂದು ವಕ್ತಾರರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪೂರಂ ಹಬ್ಬಕ್ಕೂ ಮುನ್ನ ದೊಡ್ಡ ದುರಂತ: ತ್ರಿಶೂರ್‌ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ; 12 ಕಾರ್ಮಿಕರು ಸಾವು

ಪರಮೇಶ್ವರ್ ಗೆ ಬೆಟ್ಟಿಂಗ್ ಸಂಕಷ್ಟ: FIR ದಾಖಲಿಸಿ ತನಿಖೆ ನಡೆಸುವಂತೆ ಕೋರ್ಟ್ ಆದೇಶ

IPL 2026: ಸ್ಫೋಟಕ ಶತಕ ಸಿಡಿಸಿದ ಅಭಿಷೇಕ್ ಶರ್ಮಾ; DC ಗೆ 243 ರನ್ ಟಾರ್ಗೆಟ್ ನೀಡಿದ SRH!

Video: 'ನಾನೇನು ಮಾಡ್ಲಿಲ್ಲ.. ನ್ಯಾಯ ಕೊಡಿ'; 9 ಅಂತಸ್ತಿನ ಕಟ್ಟಡ ಏರಿ POCSO ಆರೋಪಿ ಹೈಡ್ರಾಮಾ!

ಸಿದ್ದರಾಮಯ್ಯಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: CM ಆಪ್ತ ಸತೀಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆ

SCROLL FOR NEXT