ಚಿನ್ನ ಮತ್ತು ಬೆಳ್ಳಿ ಬೆಲೆ online desk
ವಾಣಿಜ್ಯ

ಅಕ್ಷಯ ತೃತೀಯ: ದುಬಾರಿಯ್ತು "ಚಿನ್ನ", ವಿಶ್ಲೇಷಕರು ಹೂಡಿಕೆದಾರರಿಗೆ ಕೊಡ್ತಿರೋ ಎಚ್ಚರಿಕೆ ಏನೆಂದರೆ...

ಯುಎಸ್-ಚೀನಾ ವ್ಯಾಪಾರ ಉದ್ವಿಗ್ನತೆ ಕಡಿಮೆಯಾಗುತ್ತಿರುವುದರಿಂದ ಜಾಗತಿಕ ಸ್ಥೂಲ ಪರಿಸರ ಸುಧಾರಿಸುತ್ತಿದೆ ಮತ್ತು ಇತರ ಆಸ್ತಿ ವರ್ಗಗಳಿಗೆ ಇದರ ಪರಿಣಾಮವಾಗಿ ಉಂಟಾಗುವ ಹಿನ್ನಡೆಗಳು ಸುರಕ್ಷಿತ ಆಸ್ತಿಯ ಬೇಡಿಕೆಯನ್ನು ಕಡಿಮೆ ಮಾಡಬಹುದು.

ಮುಂಬೈ: ಅಕ್ಷಯ ತೃತೀಯಕ್ಕೂ ಮುನ್ನ, ಸಾಂಪ್ರದಾಯಿಕವಾಗಿ ಅನೇಕ ಭಾರತೀಯರು ಚಿನ್ನ ಖರೀದಿಸಲು ಶುಭವೆಂದು ಪರಿಗಣಿಸುವ ದಿನವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನ ದುಬಾರಿಯಾಗಿದ್ದು, ಹೂಡಿಕೆದಾರರು / ಗೃಹಸ್ಥರು ಎಚ್ಚರಿಕೆಯಿಂದ ಇರುವಂತೆ ವಿಶ್ಲೇಷಕರು ಸಲಹೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಕುಸಿಯುವ ಸಾಧ್ಯತೆ ಇರುವುದರಿಂದ ಈ ಎಚ್ಚರಿಕೆ ನೀಡಲಾಗಿದೆ.

ವಿಶ್ಲೇಷಕರ ಪ್ರಕಾರ, ಯುಎಸ್-ಚೀನಾ ವ್ಯಾಪಾರ ಉದ್ವಿಗ್ನತೆ ಕಡಿಮೆಯಾಗುತ್ತಿರುವುದರಿಂದ ಜಾಗತಿಕ ಸ್ಥೂಲ ಪರಿಸರ ಸುಧಾರಿಸುತ್ತಿದೆ ಮತ್ತು ಇತರ ಆಸ್ತಿ ವರ್ಗಗಳಿಗೆ ಇದರ ಪರಿಣಾಮವಾಗಿ ಉಂಟಾಗುವ ಹಿನ್ನಡೆಗಳು ಸುರಕ್ಷಿತ ಆಸ್ತಿಯ ಬೇಡಿಕೆಯನ್ನು ಕಡಿಮೆ ಮಾಡಬಹುದು.

ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಹಳದಿ ಲೋಹ ನಿರಂತರ ಏರಿಕೆ ಕಾಣುತ್ತಿದೆ, ಇದು 30% YTD ಗಿಂತ ಹೆಚ್ಚು ಗಳಿಸಿದೆ. ಕಳೆದ ವಾರ ಚಿನ್ನದ ಮೌಲ್ಯ ಪ್ರತಿ 10 ಗ್ರಾಮ್ ಗೆ 1 ಲಕ್ಷ ರೂಪಾಯಿ ದಾಟಿತ್ತು. ಅಂದಿನಿಂದ ಮಂಗಳವಾರ ಸಂಜೆಯ ವೇಳೆಗೆ ಬೆಲೆಗಳು CME ನಲ್ಲಿ $3,325/ಔನ್ಸ್‌ಗೆ ಇಳಿದಿವೆ.

ಭಾರತೀಯ ಮನೆಗಳು ಆಭರಣ ರೂಪದಲ್ಲಿ 25,000 ಟನ್‌ಗಳಿಗಿಂತ ಹೆಚ್ಚು ಚಿನ್ನವನ್ನು ಹೊಂದಿವೆ ಮತ್ತು ಕೆಲವು ದೇವಾಲಯಗಳು, ವಿಶೇಷವಾಗಿ ದಕ್ಷಿಣದಲ್ಲಿರುವವು, ಇನ್ನೂ 5,000 ಟನ್‌ಗಳನ್ನು ಹೊಂದಿವೆ. ಸ್ಮಾಲ್‌ಕೇಸ್ ಪ್ರಕಾರ, ಈ ವರ್ಷ ಚಿನ್ನದ ಬೆಲೆ ಶೇ.7 ರಷ್ಟು ಇಳಿಕೆಯಾಗುವ ಸಾಧ್ಯತೆ ಇದ್ದರೆ, ಶೇ.3ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 2026 ರ ಅಕ್ಷಯ ತೃತೀಯದ ವೇಳೆಗೆ ಚಿನ್ನದ ಬೆಲೆ ಶೇ.3-7 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ದತ್ತಾಂಶಗಳು ಸೂಚಿಸುತ್ತವೆ.

ಕಳೆದ 10 ವರ್ಷಗಳಲ್ಲಿ ಅಕ್ಷಯ ತೃತೀಯ ದಿನಗಳಲ್ಲಿ ಬೆಲೆ ಹೋಲಿಕೆ ನೀಡುತ್ತಾ, ಕಳೆದ 10 ವರ್ಷಗಳಲ್ಲಿ ಚಿನ್ನದ ಬೆಲೆ ಶೇ.166.79 ರಷ್ಟು ಏರಿಕೆಯಾಗಿದೆ ಎಂದು ಸ್ಮಾಲ್‌ಕೇಸ್‌ನ ವ್ಯವಸ್ಥಾಪಕ ಪಂಕಜ್ ಸಿಂಗ್ ಹೇಳಿದ್ದಾರೆ. ಏಪ್ರಿಲ್ 2015ರ ಅಕ್ಷಯ ತೃತೀಯದಲ್ಲಿ ಚಿನ್ನದ ದರ 10 ಗ್ರಾಮ್ ಗಳಿಗೆ ₹26,800 ಇತ್ತು, ಏಪ್ರಿಲ್ 2025 ರಲ್ಲಿ 1 ಲಕ್ಷ ರೂಪಾಯಿ ತಲುಪಿದೆ.

ಅನೇಕ ವಿಶ್ಲೇಷಕರು ಬೆಲೆಗಳಲ್ಲಿ ಕುಸಿತವನ್ನು ನಿರೀಕ್ಷಿಸುತ್ತಿದ್ದಾರೆ. ಬ್ರೋಕರೇಜ್ ಮೋತಿಲಾಲ್ ಓಸ್ವಾಲ್ ಹಳದಿ ಲೋಹಕ್ಕೆ ಮಧ್ಯಮದಿಂದ ದೀರ್ಘಾವಧಿಗೆ `1,06,000 ಬೆಲೆ ಗುರಿಯನ್ನು ನೀಡಿದ್ದು, ಇಳಿಕೆಯ ಮೇಲೆ ಖರೀದಿಗೆ ಕರೆ ನೀಡಿದೆ. "ತಾಂತ್ರಿಕವಾಗಿ, ಮಧ್ಯಮ ಮತ್ತು ದೀರ್ಘಾವಧಿಯ ದೃಷ್ಟಿಕೋನದಿಂದ ನಾವು `90,000-91,000 ಆಸುಪಾಸಿನ ಬೆಲೆಯನ್ನು ಎದುರುನೋಡುತ್ತಿದ್ದೇವೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT