ಚಿನ್ನದ ದರದಲ್ಲಿ ಏರಿಕೆ 
ವಾಣಿಜ್ಯ

Gold rate: ಸಾರ್ವಕಾಲಿಕ ದಾಖಲೆ; ಚಿನ್ನದ ಬೆಲೆ ಒಂದೇ ದಿನ 1,313 ರೂ ಹೆಚ್ಚಳ; 1 ತಿಂಗಳಲ್ಲಿ 8 ಸಾವಿರ ರೂ ಏರಿಕೆ!

ಭಾರತದಲ್ಲಿ ಚಿನ್ನದ ದರ ಮತ್ತೆ ಗಗನಕ್ಕೇರಿದ್ದು, ಇಂದು ಒಂದೇ ದಿನ ಚಿನ್ನದ ದರದಲ್ಲಿ ಬರೊಬ್ಬರಿ 1, 313 ರೂ ಹೆಚ್ಚಳವಾಗಿದೆ.

ಮುಂಬೈ: ಭಾರತೀಯರ ನೆಚ್ಚಿನ ಬಂಗಾರದ ಬೆಲೆ ಮತ್ತೆ ಗಗನಕ್ಕೇರಿದ್ದು, ಇಂದು ಒಂದೇ ದಿನ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಮಟ್ಟ ತಲುಪಿದೆ.

ಹೌದು.. ಭಾರತದಲ್ಲಿ ಚಿನ್ನದ ದರ ಮತ್ತೆ ಗಗನಕ್ಕೇರಿದ್ದು, ಇಂದು ಒಂದೇ ದಿನ ಚಿನ್ನದ ದರದಲ್ಲಿ ಬರೊಬ್ಬರಿ 1, 313 ರೂ ಹೆಚ್ಚಳವಾಗಿದೆ. ನಿನ್ನೆ 10 ಗ್ರಾಂ ಚಿನ್ನದ ಬೆಲೆ 83, 010ರೂ ಇದ್ದ ಚಿನ್ನದ ದರ ಇಂದು ಏಕಾಏಕಿ 84 ಸಾವಿರ ಗಡಿ ದಾಟಿದೆ. ಇಂದು ಒಂದೇ ದಿನ 1, 313 ರೂ ಹೆಚ್ಚಳವಾಗಿ 10 ಗ್ರಾಂ ಚಿನ್ನದ ದರ ಬರೊಬ್ಬರಿ 84, 313 ರೂಗೆ ಏರಿಕೆಯಾಗಿದೆ.

1 ತಿಂಗಳಲ್ಲಿ 8 ಸಾವಿರ ರೂ ಏರಿಕೆ!

ಇನ್ನು ಕಳೆದ ಒಂದು ತಿಂಗಳಲ್ಲಿ ಚಿನ್ನದ ದರದಲ್ಲಿ ಬರೊಬ್ಬರಿ 8 ಸಾವಿರ ರೂ ಏರಿಕೆಯಾಗಿದೆ. ಕಳೆದ 36 ದಿನಗಳಲ್ಲಿ ಚಿನ್ನದ ದರ 8, 161ರೂಗಳಷ್ಚು ಏರಿಕೆಯಾಗಿದೆ.

ಬಜೆಟ್ ಬಳಿಕದ ನಿರೀಕ್ಷೆ ಕೂಡ ಹುಸಿಯಾಯ್ತು

ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Central financial Minister Nirmala Sitharaman) ಮಂಡಿಸಿದ 2024-25ರ ಬಜೆಟ್ ನಂತರ, ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 15 ರಿಂದ ಶೇಕಡಾ 6ಕ್ಕೆ ಇಳಿಸಲಾಗಿತ್ತು. ಇದರಿಂದಾಗಿ ಮುಂಬರುವ ತಿಂಗಳುಗಳಲ್ಲಿ ಚಿನ್ನದ ಬೆಲೆ ಇಳಿಯುವ ಸಾಧ್ಯತೆ ಇತ್ತು. ಆದರೆ ತಕ್ಷಣದ ಪರಿಣಾಮವಾಗಿ, ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ, ಇದು ಆಭರಣ ಪ್ರಿಯರನ್ನು ನಿರಾಸೆಗೊಳಿಸಿದೆ.

ಇಂದಿನ ದರ ಪಟ್ಟಿ ಇಂತಿದೆ

ಸದ್ಯ ಭಾರತದಲ್ಲಿ (in India) 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 78,100 ಆಗಿದ್ದು, 24 ಕ್ಯಾರೆಟ್ ಅಪರಂಜಿ ಚಿನ್ನದ ದರ 85,200 ರೂ ಆಗಿದೆ. 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ದರ 7,810ರೂಗೆ ಏರಿಕೆಯಾಗಿದ್ದು, 10 ಗ್ರಾಂ ದರ 78,100 ರೂಗಳಾಗಿದೆ. ಅಂತೆಯೇ 24 ಕ್ಯಾರೆಟ್ ನ 1 ಗ್ರಾಂ ಅಪರಂಜಿ ಚಿನ್ನದ ದರ 8,520ರೂಗೆ ಏರಿಕೆಯಾಗಿದ್ದು, 10 ಗ್ರಾಂ ದರ 85,200 ರೂಗಳಾಗಿದೆ. ಅಂತೆಯೇ 18 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 63,900 ರೂಗೆ ಏರಿಕೆಯಾಗಿದೆ.

ಬೆಳ್ಳಿ ದರ ಇಳಿಕೆ

ಇನ್ನು ಚಿನ್ನದ ದರ ಗಗನದತ್ತ ಮುಖ ಮಾಡಿದ್ದರೂ ಬೆಳ್ಳಿ ದರದಲ್ಲಿ ಮಾತ್ರ ಕೊಂಚ ಇಳಿಕೆಯಾಗಿದೆ. ಪ್ರಸ್ತುತ ಒಂದು ಕಿಲೋಗ್ರಾಂ ಬೆಳ್ಳಿಯ ದರ 98,500 ಆಗಿದ್ದು, ಒಟ್ಟಾರೆಯಾಗಿ 1,000 ಇಳಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!