ಚಿನ್ನ (ಸಂಗ್ರಹ ಚಿತ್ರ) online desk
ವಾಣಿಜ್ಯ

Gold price: ಚಿನ್ನದ ದರ ಸತತ 2ನೇ ಭಾರಿ ದಾಖಲೆಯ ಏರಿಕೆ! ಬೆಳ್ಳಿಯೂ ದುಬಾರಿ

ಅಖಿಲ ಭಾರತ ಸರಾಫಾ ಅಸೋಸಿಯೇಷನ್ ​​ಪ್ರಕಾರ, ಶೇಕಡಾ 99.9 ರಷ್ಟು ಶುದ್ಧತೆಯ ಹಳದಿ ಲೋಹ ಬುಧವಾರದಂದು ಪ್ರತಿ 10 ಗ್ರಾಂಗೆ 50 ರೂ. ಹೆಚ್ಚಳವಾಗಿದೆ ಎಂದು ತಿಳಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಸತತ ಎರಡನೇ ಬಾರಿಗೆ ದಾಖಲೆಯ ಏರಿಕೆ ಕಂಡಿದೆ. ಹಳದಿ ಲೋಹ 10 ಗ್ರಾಂಗೆ 83,800 ರೂ.ಗೆ ತಲುಪಿದ್ದು, ಇದು ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ. ಬಲವಾದ ಜಾಗತಿಕ ಪ್ರವೃತ್ತಿಗಳ ನಡುವೆಯೂ ಚಿನ್ನದ ಬೆಲೆ ಏರುಗತಿಯಲ್ಲಿದೆ.

ಅಖಿಲ ಭಾರತ ಸರಾಫಾ ಅಸೋಸಿಯೇಷನ್ ​​ಪ್ರಕಾರ, ಶೇಕಡಾ 99.9 ರಷ್ಟು ಶುದ್ಧತೆಯ ಹಳದಿ ಲೋಹ ಬುಧವಾರದಂದು ಪ್ರತಿ 10 ಗ್ರಾಂಗೆ 50 ರೂ. ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಶೇ.99.5 ರಷ್ಟು ಶುದ್ಧತೆಯ ಚಿನ್ನವು 50 ರೂ.ಗೆ ಏರಿಕೆಯಾಗಿ 10 ಗ್ರಾಂಗೆ 83,400 ರೂ.ಗೆ ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿದೆ. ಹಿಂದಿನ ವಹಿವಾಟಿನ ಅವಧಿಯಲ್ಲಿ ಚಿನ್ನದ ದರ 10 ಗ್ರಾಂಗೆ 83,350 ರೂಪಾಯಿಗಳಾಗಿತ್ತು. ಇನ್ನು ಬೆಳ್ಳಿ ಪ್ರತಿ ಕೆಜಿಗೆ 1,150 ರೂ.ಗೆ ಏರಿಕೆಯಾಗಿ 94,150 ರೂ.ಗೆ ತಲುಪಿದೆ, ಹಿಂದಿನ ಮಾರುಕಟ್ಟೆ ಮುಕ್ತಾಯದ ವೇಳೆ ಬೆಳ್ಳಿ ದರ ಪ್ರತಿ ಕೆಜಿಗೆ 93,000 ರೂಪಾಯಿಗಳಿತ್ತು.

ಏತನ್ಮಧ್ಯೆ, ಫ್ಯೂಚರ್ ಟ್ರೇಡ್ ನಲ್ಲಿ, ಫೆಬ್ರವರಿ ವಿತರಣೆಗಾಗಿ ಚಿನ್ನದ ಒಪ್ಪಂದಗಳು 575 ರೂ ಅಥವಾ 0.72 ಶೇಕಡಾ ಏರಿಕೆಯಾಗಿ 10 ಗ್ರಾಂಗೆ 80,855 ರೂಪಾಯಿಗಳಷ್ಟಾಗಿವೆ.

ಏಪ್ರಿಲ್ ಒಪ್ಪಂದಗಳಿಗೆ, ಹಳದಿ ಲೋಹ ಬಹು ಸರಕು ವಿನಿಮಯ ಕೇಂದ್ರದಲ್ಲಿ 10 ಗ್ರಾಂಗೆ 541 ರೂ ಅಥವಾ 0.67 ಶೇಕಡಾ ಏರಿಕೆಯಾಗಿ 81,415 ರೂ.ಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ.

ಕಳೆದ ವಾರ ದೇಶೀಯ ಚಿನ್ನದ ದರ ಶೇ.2.5 ರಷ್ಟು ಏರಿಕೆಯಾಗಿದೆ, ಆದರೆ ಕಾಮೆಕ್ಸ್ ಕೇವಲ ಶೇಕಡಾ 0.50 ರಷ್ಟು ಏರಿಕೆಯಾಗಿದೆ" ಎಂದು LKP ಸೆಕ್ಯುರಿಟೀಸ್‌ನ ಸರಕು ಮತ್ತು ಕರೆನ್ಸಿಯ VP ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ ಹೇಳಿದ್ದಾರೆ.

ಮಾರ್ಚ್‌ನಲ್ಲಿ ವಿತರಣೆಗಾಗಿ ಬೆಳ್ಳಿ ಫ್ಯೂಚರ್‌ಗಳು ಪ್ರತಿ ಕೆಜಿಗೆ ರೂ 1,050 ರಷ್ಟು ಅಥವಾ ಶೇಕಡಾ 1.14 ರಷ್ಟು ಏರಿಕೆಯಾಗಿ ರೂ 92,916 ಕ್ಕೆ ತಲುಪಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ