ಚಿನ್ನ (ಸಂಗ್ರಹ ಚಿತ್ರ) online desk
ವಾಣಿಜ್ಯ

Gold price: ಚಿನ್ನದ ದರ ಸತತ 2ನೇ ಭಾರಿ ದಾಖಲೆಯ ಏರಿಕೆ! ಬೆಳ್ಳಿಯೂ ದುಬಾರಿ

ಅಖಿಲ ಭಾರತ ಸರಾಫಾ ಅಸೋಸಿಯೇಷನ್ ​​ಪ್ರಕಾರ, ಶೇಕಡಾ 99.9 ರಷ್ಟು ಶುದ್ಧತೆಯ ಹಳದಿ ಲೋಹ ಬುಧವಾರದಂದು ಪ್ರತಿ 10 ಗ್ರಾಂಗೆ 50 ರೂ. ಹೆಚ್ಚಳವಾಗಿದೆ ಎಂದು ತಿಳಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಸತತ ಎರಡನೇ ಬಾರಿಗೆ ದಾಖಲೆಯ ಏರಿಕೆ ಕಂಡಿದೆ. ಹಳದಿ ಲೋಹ 10 ಗ್ರಾಂಗೆ 83,800 ರೂ.ಗೆ ತಲುಪಿದ್ದು, ಇದು ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ. ಬಲವಾದ ಜಾಗತಿಕ ಪ್ರವೃತ್ತಿಗಳ ನಡುವೆಯೂ ಚಿನ್ನದ ಬೆಲೆ ಏರುಗತಿಯಲ್ಲಿದೆ.

ಅಖಿಲ ಭಾರತ ಸರಾಫಾ ಅಸೋಸಿಯೇಷನ್ ​​ಪ್ರಕಾರ, ಶೇಕಡಾ 99.9 ರಷ್ಟು ಶುದ್ಧತೆಯ ಹಳದಿ ಲೋಹ ಬುಧವಾರದಂದು ಪ್ರತಿ 10 ಗ್ರಾಂಗೆ 50 ರೂ. ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಶೇ.99.5 ರಷ್ಟು ಶುದ್ಧತೆಯ ಚಿನ್ನವು 50 ರೂ.ಗೆ ಏರಿಕೆಯಾಗಿ 10 ಗ್ರಾಂಗೆ 83,400 ರೂ.ಗೆ ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿದೆ. ಹಿಂದಿನ ವಹಿವಾಟಿನ ಅವಧಿಯಲ್ಲಿ ಚಿನ್ನದ ದರ 10 ಗ್ರಾಂಗೆ 83,350 ರೂಪಾಯಿಗಳಾಗಿತ್ತು. ಇನ್ನು ಬೆಳ್ಳಿ ಪ್ರತಿ ಕೆಜಿಗೆ 1,150 ರೂ.ಗೆ ಏರಿಕೆಯಾಗಿ 94,150 ರೂ.ಗೆ ತಲುಪಿದೆ, ಹಿಂದಿನ ಮಾರುಕಟ್ಟೆ ಮುಕ್ತಾಯದ ವೇಳೆ ಬೆಳ್ಳಿ ದರ ಪ್ರತಿ ಕೆಜಿಗೆ 93,000 ರೂಪಾಯಿಗಳಿತ್ತು.

ಏತನ್ಮಧ್ಯೆ, ಫ್ಯೂಚರ್ ಟ್ರೇಡ್ ನಲ್ಲಿ, ಫೆಬ್ರವರಿ ವಿತರಣೆಗಾಗಿ ಚಿನ್ನದ ಒಪ್ಪಂದಗಳು 575 ರೂ ಅಥವಾ 0.72 ಶೇಕಡಾ ಏರಿಕೆಯಾಗಿ 10 ಗ್ರಾಂಗೆ 80,855 ರೂಪಾಯಿಗಳಷ್ಟಾಗಿವೆ.

ಏಪ್ರಿಲ್ ಒಪ್ಪಂದಗಳಿಗೆ, ಹಳದಿ ಲೋಹ ಬಹು ಸರಕು ವಿನಿಮಯ ಕೇಂದ್ರದಲ್ಲಿ 10 ಗ್ರಾಂಗೆ 541 ರೂ ಅಥವಾ 0.67 ಶೇಕಡಾ ಏರಿಕೆಯಾಗಿ 81,415 ರೂ.ಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ.

ಕಳೆದ ವಾರ ದೇಶೀಯ ಚಿನ್ನದ ದರ ಶೇ.2.5 ರಷ್ಟು ಏರಿಕೆಯಾಗಿದೆ, ಆದರೆ ಕಾಮೆಕ್ಸ್ ಕೇವಲ ಶೇಕಡಾ 0.50 ರಷ್ಟು ಏರಿಕೆಯಾಗಿದೆ" ಎಂದು LKP ಸೆಕ್ಯುರಿಟೀಸ್‌ನ ಸರಕು ಮತ್ತು ಕರೆನ್ಸಿಯ VP ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ ಹೇಳಿದ್ದಾರೆ.

ಮಾರ್ಚ್‌ನಲ್ಲಿ ವಿತರಣೆಗಾಗಿ ಬೆಳ್ಳಿ ಫ್ಯೂಚರ್‌ಗಳು ಪ್ರತಿ ಕೆಜಿಗೆ ರೂ 1,050 ರಷ್ಟು ಅಥವಾ ಶೇಕಡಾ 1.14 ರಷ್ಟು ಏರಿಕೆಯಾಗಿ ರೂ 92,916 ಕ್ಕೆ ತಲುಪಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT