ಸತತ 2 ದಿನ ಮಾರುಕಟ್ಟೆ ಕುಸಿತ: ಹೂಡಿಕೆದಾರರಿಗೆ 3 ಲಕ್ಷ ಕೋಟಿ ರೂ ನಷ್ಟ! 
ವಾಣಿಜ್ಯ

Indian Stock Market: H-1B visa ಶುಲ್ಕ ಏರಿಕೆ, ಸತತ 3ನೇ ದಿನವೂ ಮಾರುಕಟ್ಟೆ ಕುಸಿತ, ಐಟಿ ಷೇರುಗಳ ಮೌಲ್ಯ ಇಳಿಕೆ

ಬುಧವಾರವೂ ಭಾರತೀಯ ಷೇರುಮಾರುಕಟ್ಟೆ ನಿರಾಶಾದಾಯಕ ವಹಿವಾಟು ನಡೆಸಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಮುಂಬೈ: ಸತತ 3ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಇಳಿಕೆ ಕಂಡಿದ್ದು, ಬುಧವಾರ ಅಮೆರಿಕ ಸರ್ಕಾರದ H-1B visa ಶುಲ್ಕ ಏರಿಕೆ ಆತಂಕ ಅಂಶವು ಐಟಿ ವಲಯದ ಷೇರುಗಳ ಮೌಲ್ಯ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.

ಬುಧವಾರವೂ ಭಾರತೀಯ ಷೇರುಮಾರುಕಟ್ಟೆ ನಿರಾಶಾದಾಯಕ ವಹಿವಾಟು ನಡೆಸಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ0.47ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.45ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಕೂಡ 386.47ಅಂಕಗಳ ಇಳಿಕೆಯೊಂದಿಗೆ 81,715.63 ಅಂಕಗಳಿಗೆ ಕುಸಿತವಾಗಿದ್ದರೆ, ನಿಫ್ಟಿ 112.60 ಅಂಕಗಳ ಇಳಿಕೆಯೊಂದಿಗೆ 25,056.90 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಐಟಿ, ಬಂಡವಾಳ ಸರಕುಗಳು ಮತ್ತು ಕೈಗಾರಿಕಾ ವಲಯಗಳ ಷೇರುಗಳ ಮೌಲ್ಯದಲ್ಲಿ ಭಾರಿ ಬದಲಾವಣೆ ಕಂಡುಬಂದಿದೆ. ರಿಯಾಲ್ಟಿ, ಮಾಹಿತಿ ತಂತ್ರಜ್ಞಾನ ಮತ್ತು ಆಟೋ ಷೇರುಗಳು ಕುಸಿತ ದಾಖಲಿಸಿವೆ.

ಯುಎಸ್ H-1B ವೀಸಾ ಶುಲ್ಕದಲ್ಲಿನ ತೀವ್ರ ಏರಿಕೆಯು ಹೂಡಿಕೆದಾರರ ಭಾವನೆಯನ್ನು ಕುಗ್ಗಿಸುತ್ತಿರುವುದರಿಂದ ಬುಧವಾರ ಸತತ ಮೂರನೇ ದಿನವೂ ಐಟಿ ಷೇರುಗಳು ಕುಸಿದವು.

ಬಿಎಸ್‌ಇಯಲ್ಲಿ ಮಾಸ್ಟೆಕ್ ಲಿಮಿಟೆಡ್ ಷೇರುಗಳು ಶೇ. 3.42 ರಷ್ಟು, ಇನ್ಫೋಬೀನ್ಸ್ ಟೆಕ್ನಾಲಜೀಸ್ ಶೇ. 3.41 ರಷ್ಟು, ವಿಪ್ರೋ ಶೇ. 2.06 ರಷ್ಟು, ಟೆಕ್ ಮಹೀಂದ್ರಾ ಶೇ. 1.30 ರಷ್ಟು, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಶೇ. 0.86 ರಷ್ಟು ಮತ್ತು ಇನ್ಫೋಸಿಸ್ ಸಂಸ್ಥೆಯ ಷೇರುಗಳ ಮೌಲ್ಯ ಶೇ. 0.24 ರಷ್ಟು ಕುಸಿದವು.

ಕಳೆದ ವಾರ, ಟ್ರಂಪ್ ಆಡಳಿತವು H-1B ವೀಸಾಗಳ ಮೇಲೆ ಒಂದು ಬಾರಿ USD 1,00,000 ಶುಲ್ಕವನ್ನು ಘೋಷಿಸಿತು. ಗಮನಾರ್ಹವಾಗಿ, ಭಾರತೀಯ ಟೆಕ್ ವೃತ್ತಿಪರರು ಶೇಕಡಾ 70 ಕ್ಕಿಂತ ಹೆಚ್ಚು H-1B ಗಳಲ್ಲಿ ಹೆಚ್ಚಿನ ಭಾಗವನ್ನು ಹೊಂದಿದ್ದಾರೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಹೆಚ್ ಯುಎಲ್, ನೆಸ್ಲೆ, ಎನ್ ಟಿಪಿಸಿ, ಜೆಎಸ್ ಡಬಲ್ಯೂ ಸ್ಟೀಲ್, ಪವರ್ ಗ್ರಿಡ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಟಾಟಾ ಮೋಟಾರ್ಸ್, ಟೆಕ್ ಮಹೀಂದ್ರಾ, ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಹೀರೋ ಮೋಟೋಕಾರ್ಪ್‌ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಡಾಖ್ ಹಿಂಸಾಚಾರಕ್ಕೆ ನಾಲ್ವರು ಬಲಿ; 30 ಜನರಿಗೆ ಗಾಯ; ಬಿಜೆಪಿ ಕಚೇರಿ, ಪೊಲೀಸ್ ವ್ಯಾನ್ ಗೆ ಬೆಂಕಿ

SL Bhyrappa ನಿಧನ: ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಇಲ್ಲಿದೆ ಮಾಹಿತಿ

ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಅಗತ್ಯ: X ಅರ್ಜಿ ವಜಾಗೊಳಿಸದ ಹೈಕೋರ್ಟ್

400 ವರ್ಷ ಹಳೆಯ Mancha Masjid ತೆರವಿಗೆ ಗ್ರೀನ್ ಸಿಗ್ನಲ್, ತಡೆಗೆ Gujarat High Court ನಕಾರ!

ಕಾಶ್ಮೀರ: ಪಹಲ್ಗಾಮ್ ದಾಳಿ ಉಗ್ರರಿಗೆ ಲಾಜಿಸ್ಟಿಕ್ ಬೆಂಬಲ ನೀಡಿದ ವ್ಯಕ್ತಿಯ ಬಂಧನ

SCROLL FOR NEXT