ಪಾವೆಲ್ ಡುರೊವ್ 
ವಾಣಿಜ್ಯ

ಭಾರತದಲ್ಲಿ Telegram ನಿಷೇಧಿಸಲು ರಿಲಯನ್ಸ್, ವಾಟ್ಸಾಪ್ ಲಾಬಿ: ಟೆಲಿಗ್ರಾಮ್ ಸಿಇಒ ಗಂಭೀರ ಆರೋಪ

ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG 2026 ಪ್ರಶ್ನೆಪತ್ರಿಕೆ ಲೀಕ್ ತಡೆಯಲು ವಿಫಲವಾಗಿದ್ದ ಮೋದಿ ಸರ್ಕಾರ, ಮೆಸೇಜಿಂಗ್ ಆ್ಯಪ್ ‘ಟೆಲಿಗ್ರಾಮ್’ ಅನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿದೆ.

ಮೆಟಾದಲ್ಲಿ ಭಾಗಶಃ ಪಾಲನ್ನು ಹೊಂದಿರುವ ರಿಲಯನ್ಸ್ ಗ್ರೂಪ್ ಮತ್ತು ವಾಟ್ಸಾಪ್ ಭಾರತದಲ್ಲಿ ತಮ್ಮ ಟೆಲಿಗ್ರಾಮ್ ಅಪ್ಲಿಕೇಶನ್ ಮೇಲೆ ನಿಷೇಧ ಹೇರಲು ಲಾಬಿ ನಡೆಸಿದ್ದಾರೆ ಎಂದು ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG 2026 ಪ್ರಶ್ನೆಪತ್ರಿಕೆ ಲೀಕ್ ತಡೆಯಲು ವಿಫಲವಾಗಿದ್ದ ಮೋದಿ ಸರ್ಕಾರ, ಮೆಸೇಜಿಂಗ್ ಆ್ಯಪ್ ‘ಟೆಲಿಗ್ರಾಮ್’ ಅನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿದೆ.

ಟೆಲಿಗ್ರಾಮ್ ನಿರ್ಬಂಧಕ್ಕೆ ಆಕ್ರೋಶಗೊಂಡಿರುವ ಟೆಲಿಗ್ರಾಮ್ ಸಿಇಒ, ಭಾರತದ ಹೊರಗಿನ(ಯುಎಇ ಸೇರಿದಂತೆ) ಲಕ್ಷಾಂತರ ಬಳಕೆದಾರರಿಗೆ ಟೆಲಿಗ್ರಾಮ್ ಪ್ರವೇಶವನ್ನು ರಿಲಯನ್ಸ್ ಹಾಳುಮಾಡುತ್ತಿದೆ ಎಂದು ದೂರಿದ್ದಾರೆ.

ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಡುರೊವ್, BGP ಹೈಜಾಕಿಂಗ್ ಎಂಬ ತಂತ್ರದ ಮೂಲಕ ಟೆಲಿಗ್ರಾಮ್‌ನ ಸಂಪರ್ಕಕ್ಕೆ ಅಡ್ಡಿಪಡಿಸಲು ರಿಲಯನ್ಸ್ ಕಮ್ಯುನಿಕೇಷನ್ಸ್ ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

"ಭಾರತೀಯ ಟೆಲಿಕಾಂ ರಿಲಯನ್ಸ್, BGP ಹೈಜಾಕಿಂಗ್ ಎಂಬ ರಾಕ್ಷಸ ವಿಧಾನದ ಮೂಲಕ ಭಾರತದ ಹೊರಗಿನ(ಯುಎಇ ಸೇರಿದಂತೆ) ಲಕ್ಷಾಂತರ ಬಳಕೆದಾರರಿಗೆ ಟೆಲಿಗ್ರಾಮ್ ಪ್ರವೇಶವನ್ನು ಹಾಳು ಮಾಡುತ್ತಿದೆ ಎಂದಿದ್ದಾರೆ.

ರಿಲಯನ್ಸ್ ಹಲವು ವರದಿಗಳನ್ನು ನಿರ್ಲಕ್ಷಿಸಿರುವುದರಿಂದ ಈ ವಿಧ್ವಂಸಕ ಕೃತ್ಯ ಉದ್ದೇಶಪೂರ್ವಕವಾಗಿದೆ ಎಂದು ಡುರೊವ್ ಆರೋಪಿಸಿದ್ದಾರೆ.

ಇದು ಸ್ಪರ್ಧಾತ್ಮಕ ಯುದ್ಧದ ಭಾಗವಾಗಿರಬಹುದು. ಏಕೆಂದರೆ ರಿಲಯನ್ಸ್ ಭಾಗಶಃ ವಾಟ್ಸಾಪ್‌ನ ಹಿಂದಿನ ಕಂಪನಿಯಾದ ಮೆಟಾದ ಒಡೆತನದಲ್ಲಿದೆ" ಎಂದು ಡುರೊವ್ ಹೇಳಿದ್ದಾರೆ.

ಭಾರತದಲ್ಲಿ ಟೆಲಿಗ್ರಾಮ್ ವಿರುದ್ಧದ ಇತ್ತೀಚಿನ ಕ್ರಮಗಳ ಹಿಂದೆಯೂ ಇದೇ ಸಂಸ್ಥೆಗಳ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ.

"ಜಾಗತಿಕ ಇಂಟರ್ನೆಟ್ ರೂಟಿಂಗ್‌ನ ಇಂತಹ ದುರುಪಯೋಗ ಆತಂಕಕಾರಿಯಾಗಿದೆ. ಭಾರತದಲ್ಲಿ ಟೆಲಿಗ್ರಾಮ್ ಅನ್ನು ನಿಷೇಧಿಸುವ ಇತ್ತೀಚಿನ ಲಾಬಿ ಪ್ರಯತ್ನದ ಹಿಂದೆ ರಿಲಯನ್ಸ್/ವಾಟ್ಸಾಪ್ ಕೂಡ ಇದ್ದರೆ ನನಗೆ ಆಶ್ಚರ್ಯವಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಶ್ವಾಸವೇ ಜಗತ್ತಿನ ಅತಿದೊಡ್ಡ ಸಂಪತ್ತು, ‘ನಾವಿಕರ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ’: G7 ಶೃಂಗಸಭೆಯಲ್ಲಿ ಟ್ರಂಪ್ ಎದುರೇ ಪ್ರಧಾನಿ ಮೋದಿ ಖಡಕ್ ಸಂದೇಶ..!

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು ಗೊತ್ತಾ?

'ಈಗ ಹಾರ್ಮುಜ್ ಅನ್ನು ಯಾವಾಗ ಬೇಕಾದರೂ ಬಂದ್ ಮಾಡುವ ಅಧಿಕಾರ ಇರಾನ್ ಹೊಂದಿದೆ; ಇದು ಅಮೆರಿಕಕ್ಕೆ ಮಾರಕ'

ಬೆಳಗಾವಿಗೆ ಮತ್ತೆ ನಿರಾಸೆ: ಸುವರ್ಣ ವಿಧಾನಸೌಧದಲ್ಲಿ ಮುಂಗಾರು ಅಧಿವೇಶನ ನಡೆಸುವ ನಿರ್ಧಾರಕ್ಕೆ ಸರ್ಕಾರ ಬ್ರೇಕ್..?

RSS ಟೀಕಿಸಿ ನೆಹರು ಕುಟುಂಬದ ಕುಡಿಗಳ ಸಂತೃಪ್ತಿಪಡಿಸುವ ಯತ್ನ: ‘ವಿಕೃತ ಖುಷಿ ಸಿಗುವುದಾದರೆ ಬೈದುಕೊಳ್ಳಿ; ಪ್ರಿಯಾಂಕ್ ಖರ್ಗೆಗೆ BJP ತಿರುಗೇಟು

SCROLL FOR NEXT