ಪ್ರಾತಿನಿಧಿಕ ಚಿತ್ರ AI-generated representative image
ವಾಣಿಜ್ಯ

ಸುಂಕ ಹೆಚ್ಚಳದ ನಂತರ ಚಿನ್ನದ ಆಮದು ಶೇ 70ರಷ್ಟು ಕುಸಿತ; ತಿಂಗಳಿಗೆ ಕೇವಲ 25-30 ಟನ್‌ ಖರೀದಿ!

ಮೇ 13 ರಿಂದ ಜಾರಿಗೆ ಬರುವಂತೆ, ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ 6 ರಿಂದ ಶೇ 15ಕ್ಕೆ ಹೆಚ್ಚಿಸಲಾಗಿದೆ.

ನವದೆಹಲಿ: ಹಳದಿ ಲೋಹದ ಮೇಲಿನ ಕಸ್ಟಮ್ಸ್ ಸುಂಕವನ್ನು ದ್ವಿಗುಣಗೊಳಿಸಿ ಶೇ 15ಕ್ಕೆ ಏರಿಸಿದ ನಂತರ ಭಾರತದ ಚಿನ್ನದ ಆಮದು ಸುಮಾರು ಶೇ 70ರಷ್ಟು ಕಡಿಮೆಯಾಗಿ 25-30 ಟನ್‌ಗಳಿಗೆ ತಲುಪಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಮೇ 13 ರಿಂದ ಜಾರಿಗೆ ಬರುವಂತೆ, ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ 6 ರಿಂದ ಶೇ 15ಕ್ಕೆ ಹೆಚ್ಚಿಸಲಾಗಿದೆ.

'ಒಂದು ತಿಂಗಳಲ್ಲಿ ಆಮದು ಸುಂಕ ಹೆಚ್ಚಳದ ನಂತರ ಚಿನ್ನದ ಆಮದು 25-30 ಟನ್‌ಗಳಿಗೆ ಇಳಿದಿದೆ. ಈ ಹಿಂದೆ 75-100 ಟನ್‌ಗಳಷ್ಟಿತ್ತು' ಎಂದು ಹೇಳಿದರು.

ಆದಾಗ್ಯೂ, ಭಾರತವು ಪ್ರಮಾಣದಲ್ಲಿ ಹೆಚ್ಚಿನ ಚಿನ್ನವನ್ನು ಆಮದು ಮಾಡಿಕೊಳ್ಳದೇ ಇರಬಹುದು, ಆದರೆ ಒಟ್ಟು ಚಿನ್ನದ ಆಮದು ಮೌಲ್ಯವು ಮೇ ತಿಂಗಳಲ್ಲಿ ಶೇ 34 ರಷ್ಟು ಹೆಚ್ಚಾಗಿ USD 3.41 ಬಿಲಿಯನ್‌ಗೆ ತಲುಪಿದೆ. ಏಕೆಂದರೆ ಇದೀಗ ಚಿನ್ನದ ಬೆಲೆಗಳು ಹೆಚ್ಚಾಗಿವೆ.

2026-27ರ ಏಪ್ರಿಲ್-ಮೇ ಅವಧಿಯಲ್ಲಿ, ಚಿನ್ನದ ಆಮದು ಶೇ 60.14ರಷ್ಟು ಹೆಚ್ಚಾಗಿ 9.04 ಬಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ತಲುಪಿದೆ. ಕಳೆದ ಹಣಕಾಸು ವರ್ಷದಲ್ಲಿ, ಚಿನ್ನದ ಆಮದು ಶೇ 24ರಷ್ಟು ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ 71.98 ಬಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ತಲುಪಿದೆ.

ಆದಾಗ್ಯೂ, ಪ್ರಮಾಣದ ದೃಷ್ಟಿಯಿಂದ, ಆಮದು ಶೇ 4.76ರಷ್ಟು ಇಳಿದು 721.03 ಟನ್‌ಗಳಿಗೆ ತಲುಪಿದೆ. ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ ರಾಷ್ಟ್ರವಾದ ಭಾರತದಲ್ಲಿ ಚಿನ್ನದ ಆಮದು ಆಭರಣ ಉದ್ಯಮದ ಬೇಡಿಕೆಯನ್ನು ಅವಲಂಭಿಸಿದೆ. ಇಂತಹ ಆಮದುಗಳು ವಿದೇಶಿ ವಿನಿಮಯದ ಗಣನೀಯ ಹೊರಹರಿವನ್ನು ಒಳಗೊಂಡಿರುತ್ತವೆ.

ಚಿನ್ನದ ಖರೀದಿಯನ್ನು ಕಡಿಮೆ ಮಾಡಲು ಮತ್ತು ವಿದೇಶಿ ವಿನಿಮಯ ವೆಚ್ಚವನ್ನು ಕಡಿಮೆ ಮಾಡಲು ಕಠಿಣ ಕ್ರಮಗಳನ್ನು ಅಳವಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟ ಕರೆ ನೀಡಿದ ನಂತರ ಸುಂಕ ಹೆಚ್ಚಳ ಮಾಡಲಾಗಿದೆ.

ದೇಶದ ಒಟ್ಟು ಆಮದುಗಳಲ್ಲಿ ಈ ಅಮೂಲ್ಯ ಲೋಹವು ಶೇ 5ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.

ಪಶ್ಚಿಮ ಏಷ್ಯಾದಲ್ಲಿನ ಅನಿಶ್ಚಿತತೆಯು ಭಾರತದ ಆಮದು ವೆಚ್ಚವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಮತ್ತು ಸರ್ಕಾರವು ಕಚ್ಚಾ ತೈಲ, ರಸಗೊಬ್ಬರಗಳು, ಕೈಗಾರಿಕಾ ಕಚ್ಚಾ ವಸ್ತುಗಳು ಮತ್ತು ಆರ್ಥಿಕ ಚಟುವಟಿಕೆ ಮತ್ತು ಆಹಾರ ಭದ್ರತೆಯನ್ನು ನೇರವಾಗಿ ಬೆಂಬಲಿಸುವ ಬಂಡವಾಳ ಸರಕುಗಳಂತಹ ಅಗತ್ಯ ಆಮದುಗಳಿಗೆ ವಿದೇಶೀ ವಿನಿಮಯ ವೆಚ್ಚಕ್ಕೆ ಆದ್ಯತೆ ನೀಡಲು ಬಯಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಾರ್ಮುಜ್ ಜಲಸಂಧಿ ಒಪ್ಪಂದ ಸನ್ನಿಹಿತ, ಆದರೆ ಯಾವುದಾದರೊಂದು ದೇಶ ತನ್ನ ನಿಲುವಿನಲ್ಲಿ ಸಡಿಲಿಕೆ ತೋರಿಸಬೇಕು: ಇರಾನ್-ಯುಎಸ್

Mojtaba Khamenei ಎಲ್ಲಿದ್ದಾರೆ? ರಹಸ್ಯ ತಾಣದಲ್ಲಿ ಪರಮೋಚ್ಛ ನಾಯಕ; ಅವರ ಉಪಸ್ಥಿತಿಯೇ ನಮ್ಮ ಧೈರ್ಯ ಎಂದ Iran ಅಧ್ಯಕ್ಷ

ಅಸಮಾಧಾನಿತ ಶಾಸಕರ ಸಮಸ್ಯೆ ಆಲಿಸಿದ್ದೇವೆ, ನಾವೆಲ್ಲಾ ಒಂದು ಕುಟುಂಬ- ಸುರ್ಜೆವಾಲ; ಸಚಿವ ಸ್ಥಾನ ಹೊರತಾಗಿ ಬೇರೆ ಏನು ಕೊಟ್ಟರೂ ಒಪ್ಪಲ್ಲ- ಎಂ ಕೃಷ್ಣಪ್ಪ

Sheikh Hasina: ವಾಪಸ್ ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ; ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ - ಶೇಖ್ ಹಸೀನಾ

ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: BJPಯಿಂದ ಆಡಿಯೋ ಬಿಡುಗಡೆ; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ