ಕಿರಣ್ ಮಜುಂದಾರ್-ಶಾ 
ವಾಣಿಜ್ಯ

Biocon ಉತ್ತರಾಧಿಕಾರಿ ಘೋಷಣೆ: ತಕ್ಷಣವೇ ನಿವೃತ್ತಿ ಇಲ್ಲ, ಹಂತ ಹಂತ ಜವಾಬ್ದಾರಿ ವರ್ಗಾವಣೆ; ಕಿರಣ್ ಮಜುಂದಾರ್ ಶಾ..!

ಕಿರಣ್ ಮಜುಂದಾರ್-ಷಾ ಅವರು ತಾವು ಈಗಲೇ ನಿವೃತ್ತಿ ಪಡೆಯುವ ಯೋಜನೆ ಇಲ್ಲ ಎಂದು ಹೇಳಿದ್ದು, ಕ್ಲೇರ್ ಅವರು ಕ್ರಮೇಣವಾಗಿ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ನವದೆಹಲಿ: ಭಾರತದ ಜೈವಿಕ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಬಯೋಕಾನ್'ಗೆ ಉತ್ತರಾಧಿಕಾರಿಯನ್ನು ಘೋಷಿಸಿರುವುದಾಗಿ ಅದರ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ತಿಳಿಸಿದ್ದಾರೆ.

ಅವರು ತಮ್ಮ ಸೋದರನ ಮಗಳು ಕ್ಲೇರ್ ಮಜುಂದಾರ್ ಅವರನ್ನು ಬಯೊಕಾನ್‌ನ ಮುಂದಿನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಪ್ರಕಟಿಸಿದ್ದಾರೆ. ಆದರೆ, ಈ ಬದಲಾವಣೆ ತಕ್ಷಣ ಜಾರಿಗೆ ಬರದೆ, ಹಂತ ಹಂತವಾಗಿ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಿರಣ್ ಮಜುಂದಾರ್-ಷಾ ಅವರು ತಾವು ಈಗಲೇ ನಿವೃತ್ತಿ ಪಡೆಯುವ ಯೋಜನೆ ಇಲ್ಲ ಎಂದು ಹೇಳಿದ್ದು, ಕ್ಲೇರ್ ಅವರು ಕ್ರಮೇಣವಾಗಿ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಕಂಪನಿಯ ನಿರಂತರ ಬೆಳವಣಿಗೆ ಮತ್ತು ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಈ ಉತ್ತರಾಧಿಕಾರ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ಕ್ಲೇರ್ ಮಜುಂದಾರ್ ಅವರು 37 ವರ್ಷದ ಜೈವಿಕ ವಿಜ್ಞಾನ ಕ್ಷೇತ್ರದ ಪರಿಣಿತೆಯಾಗಿದ್ದು, ಅಮೆರಿಕಾದ ಬೋಸ್ಟನ್‌ನಲ್ಲಿ ಸ್ಥಾಪಿಸಿದ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಬಿಕಾರಾ ಥೆರಪಿಸ್ಟ್ರಿಕ್ಸ್ ಮೂಲಕ ಗಮನ ಸೆಳೆದಿದ್ದಾರೆ. ಅವರ ನೇತೃತ್ವದಲ್ಲಿ ಈ ಸಂಸ್ಥೆ 2024ರಲ್ಲಿ ನಾಸ್ಡಾಕ್ ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದೆ.

ಅವರು ರಿಲೇ ಥೆರಪಿಟಿಕ್ಸ್’ ಮತ್ತು ’ನೂರಾ ಹೆಲ್ತ್’ ಸಂಸ್ಥೆಗಳ ಮಂಡಳಿಯಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಎಂಐಟಿಯಲ್ಲಿ ಬಯೋಲಾಜಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಹಾಗೂ ಕ್ಯಾನ್ಸರ್ ಬಯೋಲಜಿಯಲ್ಲಿ ಪಿಎಚ್‌ಡಿ ಮಾಡಿದ್ದಾರೆ.

ಬಯೋಕಾನ್ ಸಂಸ್ಥೆಯನ್ನು 1978ರಲ್ಲಿ ಬೆಂಗಳೂರಿನಲ್ಲಿ ಕಿರಣ್ ಮಜುಂದಾರ್-ಷಾ ಅವರು ಸ್ಥಾಪಿಸಿದ್ದರು. ನಾಲ್ಕು ದಶಕಗಳಲ್ಲಿ ಇದನ್ನು ಭಾರತದ ಅತಿದೊಡ್ಡ ಬಯೋಟೆಕ್ ಕಂಪನಿಗಳಲ್ಲಿ ಒಂದಾಗಿ ಬೆಳೆಸಿದ್ದಾರೆ. ಅವರ ಪತಿ ಜಾನ್ ಷಾ 2022ರಲ್ಲಿ ನಿಧನರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

TVKಗೆ ಕಾಂಗ್ರೆಸ್ ಬೆಂಬಲ: ಕೈ ಶಾಸಕರಿಗೆ ಹೂವಿನ ಹಾರ, ರೇಷ್ಮೆ ಶಾಲು ಹೊದಿಸಿ ಸ್ವಾಗತಿಸಿದ ವಿಜಯ್

ಸರ್ಕಾರ ರಚನೆಗೆ DMK ಮಿತ್ರ ಪಕ್ಷಗಳತ್ತ ವಿಜಯ್ ಕಣ್ಣು; ಕಾಂಗ್ರೆಸ್ ಬಳಿಕ VCK, CPM ಮತ್ತು CBI ಬೆಂಬಲ ಕೋರಿದ TVK!

ಜಲಂಧರ್ ನಂತರ ಅಮೃತಸರ ಸೇನಾ ಕಂಟೋನ್ಮೆಂಟ್ ಬಳಿ ಮತ್ತೊಂದು ಬಾಂಬ್ ಸ್ಫೋಟ; BJP ಕೃತ್ಯ ಎಂದ ಪಂಜಾಬ್ CM

ಪಲಾಶ್ ಮುಚ್ಚಲ್ ವಿರುದ್ಧ ವಂಚನೆ, ಜಾತಿ ನಿಂದನೆ ಪ್ರಕರಣ ದಾಖಲಿಸಿದ ಸ್ಮೃತಿ ಮಂಧಾನ ಬಾಲ್ಯದ ಸ್ನೇಹಿತ!

TVK ಎದುರು ಹೀನಾಯ ಸೋಲು; ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ: ಮತ್ತೆ ಗೆಲ್ಲುತ್ತೇವೆ, 1996ರ ಇತಿಹಾಸ ಮರುಕಳಿಸಲಿದೆ- DMK

SCROLL FOR NEXT