ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ 'ಅಗ್ನಿಸಾಕ್ಷಿ' ಧಾರಾವಾಗಿ ಕೊನೆಗೂ ಮುಕ್ತಾಯಗೊಂಡಿದೆ.
ಅಪಾರ ಪ್ರಮಾಣದಲ್ಲಿ ಜನಪ್ರಿಯತೆ ಗಳಿಸಿದೆ ಈ ಧಾರಾವಾಹಿಯ ಸನ್ನಿಧಿ- ಸಿದ್ಧಾರ್ಥ್ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. 1500 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಮುಕ್ತಾಯಗೊಂಡಿದೆ.
ಸನ್ನಿಧಿ- ಸಿದ್ದಾರ್ಥ್ ನವಿರಾದ ಪ್ರೇಮ ಕಥೆ, ಚಂದ್ರಿಕಾ ಕುತಂತ್ರ, ಸಿದ್ದಾರ್ಥ್- ಅಖಿಲ್ ಬಾಂಧವ್ಯ, ಅಣಜಲಿ ತುಂಟಾಟ, ಮುಖ್ಯಮಂತ್ರಿ ಚಂದ್ರು ಪ್ರಬುದ್ಧತೆ ಇವೆಲ್ಲವೂ ನಮ್ಮ ಮನೆಯಲ್ಲಿ ನಡೆಯುವ ಕಥೆಯೇನೋ ಅನ್ನುವಷ್ಟು ಆತ್ಮೀಯತೆ ನೀಡುತ್ತಿದ್ದವು. ಅಲ್ಲಲ್ಲಿ ಸ್ವಲ್ಪ ಎಳೆದಂತೆ ಭಾಸವಾದರೂ ಜನ ಮಾತ್ರ ನೋಡುವುದನ್ನು ಬಿಟ್ಟಿರಲಿಲ್ಲ.
ವಿಲನ್ ಚಂದ್ರಿಕಾ ಪಾತ್ರವನ್ನು ಇವರನ್ನು ಬಿಟ್ಟರೆ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ ಎನ್ನುವಷ್ಟು ಬೆಸೆದುಕೊಂಡಿದ್ದ ಚಂದ್ರಿಕಾ ಅಲಿಯಾಸ್ ಪ್ರಿಯಾಂಕ ಬಿಗ್ಬಾಸ್ಗೆ ತೆರಳಿದರು. ಇದೀಗ ಅಗ್ನಿಸಾಕ್ಷಿ ಮುಕ್ತಾಯಗೊಂಡಿದೆ.
ಸನ್ನಿಧಿ ವೈಷ್ಣವಿ ಗೌಡ, ಸಿದ್ಧಾರ್ಥ್ ವಿಜಯ್ ಸೂರ್ಯ, ರಾಜೇಶ್ ಧ್ರುವ, ಪ್ರಿಯಾಂಕಾ, ಸುಕೃತಾ ನಾಗರಾಜು ಸೇರಿದಂತೆ ಎಲ್ಲ ಕಲಾವಿದರಿಗೂ ಹೆಸರು ತಂದುಕೊಟ್ಟಿತ್ತು. ವಿಜಯ್ ಸೂರ್ಯ ಧಾರಾವಾಹಿಯಿಂದ ಕೆಲ ತಿಂಗಳುಗಳ ಹಿಂದೆ ಹೊರಗೆ ಬಂದಿದ್ದರು.