ಅನುರಾಗ್ ಕಶ್ಯಪ್ (ಸಂಗ್ರಹ ಚಿತ್ರ) 
ಬಾಲಿವುಡ್

'ಪಿಕೆ' ಜಾಣ ಸಿನೆಮಾ: ಅನುರಾಗ್ ಕಶ್ಯಪ್

ಅಮೀರ್ ಖಾನ್ ನಟಿಸಿರುವ 'ಪಿಕೆ' ಸಿನೆಮಾವನ್ನು ಜಾಣ ಸಿನೆಮಾ

ಮುಂಬೈ: ಅಮೀರ್ ಖಾನ್ ನಟಿಸಿರುವ 'ಪಿಕೆ' ಸಿನೆಮಾವನ್ನು ಜಾಣ ಸಿನೆಮಾ ಎಂದಿರುವ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ಧರ್ಮ ಎಂಬ ವಿಷಯವನ್ನು ಅತಿ ಸೂಕ್ಷವಾಗಿ ಹಾಸ್ಯಮಯವಾಗಿ ಚಲನಚಿತ್ರದಲ್ಲಿ ನಿಭಾಯಿಸಿರುವುದಕ್ಕೆ ರಾಜಕುಮಾರ್ ಹಿರಾನಿ "ಧೈರ್ಯವಂತ ನಿರ್ದೇಶಕ" ಎಂದು ಬಣ್ಣಿಸಿದ್ದಾರೆ.

ಬಾಕ್ಸ್ ಆಫಿಸ್ ನಲ್ಲಿ ಉತ್ತಮ ಗಳಿಕೆ ಹೊಂದಿರುವ 'ಪಿಕೆ' ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಹಿಂದೂ ಸಂಪ್ರದಾಯಗಳನ್ನು ಗೇಲಿ ಮಾಡಿರುವುದಕ್ಕೆ ಕೆಲವರು ಸಿನೆಮಾವನ್ನು ದೂಷಿಸುತ್ತಿದ್ದರೆ, ಇನ್ನೂ ಕೆಲವರು ೨೦೧೪ರ ಅತ್ಯುತ್ತಮ ಸಿನೆಮಾ ಎನ್ನುತ್ತಿದ್ದಾರೆ.

ಈ ರೀತಿಯ ವಿವಾದಗಳನ್ನು ಸೃಷ್ಟಿಸುವುವರ ಬಗ್ಗೆ ಮಾತನಾಡಿದ ಕಶ್ಯಪ್ "ಯಾರಿಗಾದರೂ ಕನ್ನಿಡಿ ತೋರಿಸಿದರೆ ಅದು ಅಹಿತಕರವಾಗಿರುತ್ತದೆ. ಆದರೆ ಈ ಸಿನೆಮಾ ಅದ್ಭುತ ಗುಣ ಎಂದರೆ ಇದು ಜಾಣತನದಿಂದ ಕೂಡಿದೆ. ಈ ಸಿನೆಮಾ ನೋಡಿ ಇದು ನನಗೆ ನೋವುಂಟು ಮಾಡಿತು ಎಂದರೆ ಈ ಸಿನೆಮಾ ಸರಿ ಇದೆ ಮತ್ತು ಪರಿಣಾಮಕಾರಿಯಾಗಿದೆ ಎಂಬುದು ಸ್ಪಷ್ಟ" ಎಂದಿದ್ದಾರೆ.

ಸಿನೆಮಾದ ಕಂಟೆಂಟ್ ನಿಂದ ಆಗಾಗ ಅವಮಾನಿತರಾಗುವುದರಿಂದ ಜನ ನಿಲ್ಲಿಸಬೇಕು ಅನುರಾಗ್, ಸಮಾಜದಲ್ಲಿ ಎಲ್ಲ ರೀತಿಯ ಚರ್ಚೆ ಮತ್ತು ಭಿನಾಭಿಪ್ರಾಯಗಳನ್ನು ಇರಲು ಬಿಡಿ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

RSS ನಿಷೇಧಕ್ಕೆ ಕರೆ: ಸಚಿವ ಪ್ರಿಯಾಂಕ್ ಖರ್ಗೆ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ, ಯತ್ನಾಳ್ ಕಿಡಿ!

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

SCROLL FOR NEXT